‘ಆರ್ಆರ್ಸಿಕ್ಸ್ಆರ್’ ಚಿತ್ರಕ್ಕೆ ಮುಹೂರ್ತ
Team Udayavani, Dec 8, 2021, 2:44 PM IST
ಹೊಸಬರ “ಆರ್ಆರ್ಸಿಕ್ಸ್ಆರ್’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಡಿ.ಎಸ್.ರವಿ ಯಾದವ್ “ಆರ್ಆರ್ಸಿಕ್ಸ್ಆರ್’ ಚಿತ್ರಕ್ಕೆ ಕಥೆ, ಸಾಹಿತ್ಯ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಚಿತ್ರದ ಟೈಟಲ್ಗೆ “ಕೊಡ ಬೇಡ ಕಳಿಬೇಡ… ಕೂಡಿದರೆ ಟೈಂ ವೇಸ್ಟ್… ಕಳೆದರೆ ಲೈಫ್ ವೇಸ್ಟ್ ಸುಮ್ನೆ ನೋಡು?’ ಎಂಬ ಟ್ಯಾಗ್ ಲೈನ್ ಇದೆ.
ಇನ್ನು ತಮ್ಮ ಚಿತ್ರಕ್ಕೆ ಇಂಥದ್ದೊಂದು ವಿ”ಚಿತ್ರ’ ಹೆಸರಿಟ್ಟಿರುವ ಬಗ್ಗೆ ಮಾತನಾಡುವ ಚಿತ್ರತಂಡ, “ನಾಲ್ಕು ಆರು ಸಂಖ್ಯೆಗಳನ್ನು ಗುಣಿಸಿದರೆ 24 ಬರುತ್ತದೆ. ಒಂದು ದಿನಕ್ಕೆ 24 ಗಂಟೆಯನ್ನು ಕೂಡಿದ್ರೆ ಸಮಯಕ್ಕೆ ಅರ್ಥ ಬರುತ್ತದೆ. ಅದನ್ನು ಕಳೆದರೆ ದಿನ ವ್ಯರ್ಥವಾಗುತ್ತದೆ. ಜೀವನ ಶೂನ್ಯವಾಗುತ್ತದೆ. ಇಂಥದ್ದೊಂದು ತರ್ಕವನ್ನು ಇಟ್ಟುಕೊಂಡು ಅದನ್ನು ಸಿನಿಮಾದಲ್ಲಿ ಹೇಳುತ್ತಿದ್ದೇವೆ’ ಎಂದು ವಿವರಣೆ ನೀಡುತ್ತದೆ.
“ಆರ್ಆರ್ಸಿಕ್ಸ್ಆರ್’ ಚಿತ್ರವನ್ನು ಶಿವಕುಮಾರ್ ಆರ್. ಬಿ, ಸತೀಶ್ ಮತ್ತು ಗೌಡ ಕೆ. ಎಂ ನಿರ್ಮಿಸುತ್ತಿದ್ದು, ಚಿತ್ರದಲ್ಲಿ ಶಿವಂಗಿ ನಾಯಕನಾಗಿ, ಯಶಿಕಾ ರಾಜ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ರಮೇಶ್ ಭಟ್, ಬ್ಯಾಂಕ್ ಜನಾರ್ಧನ್, ಸಂತೋಷ್, ವೀರಣ್ಣ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್