ಕುಕ್ಕೆಯಲ್ಲಿ ಗೋದ್ರಾ ಸಿನಿಮಾ ಚಿತ್ರೀಕರಣ; ನಟ ಸತೀಶ್ ಗೆ ಗಾಯ
Team Udayavani, Sep 5, 2017, 4:34 PM IST
ಮಂಗಳೂರು: ಕೆಎಸ್ ನಂದೀಶ್ ನಿರ್ಮಾಣದ ಗೋದ್ರಾ ಸಿನಿಮಾ ಚಿತ್ರೀಕರಣದ ವೇಳೆ ಸ್ಫೋಟಕ ಸಿಡಿಸುವಾಗ ನಟ ನೀನಾಸಂ ಸತೀಶ್ ಗೆ ಗಾಯವಾಗಿರುವ ಘಟನೆ ಸೋಮವಾರ ಕುಕ್ಕೆಸುಬ್ರಹ್ಮಣ್ಯ ಅರಣ್ಯಪ್ರದೇಶದಲ್ಲಿ ನಡೆದಿದೆ.
ಗೋದ್ರಾ ಸಿನಿಮಾ ಚಿತ್ರೀಕರಣಕ್ಕಾಗಿ ಬಾಂಬ್ ಸಿಡಿಸುವ ವೇಳೆ ಈ ಅವಘಡ ಸಂಭವಿಸಿರುವುದಾಗಿ ನಟ ನೀನಾಸಂ ಸತೀಶ್ ಖಾಸಗಿ ಟಿವಿ ಚಾನೆಲ್ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ದಿಢೀರ್ ಸ್ಫೋಟಕ ಸಿಡಿದಿದ್ದರಿಂದ ತನಗೆ ಮೂರ್ನಾಲ್ಕು ನಿಮಿಷ ಏನಾಯ್ತು ಎಂದು ತಿಳಿಯಲೇ ಇಲ್ಲ. ಅಂತೂ ದೇವರ ದಯೆಯಿಂದ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿರುವುದಾಗಿ ಹೇಳಿದ್ದಾರೆ.