ಕಾಲ್ನಡಿಗೆಯಲ್ಲಿ ಸ್ಕ್ರಿಪ್ಟ್ !
Team Udayavani, Mar 11, 2019, 5:45 AM IST
ಸಾಮಾನ್ಯವಾಗಿ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ರಚನೆಗಾಗಿ ಚಿತ್ರದ ನಿರ್ದೇಶಕರು, ಚಿತ್ರತಂಡ ಒಂದಷ್ಟು ಸಮಯ ಮೀಸಲಿಟ್ಟು, ಪ್ರಶಾಂತ ವಾತಾವರಣದಲ್ಲಿ ಕೆಲಸ ಮಾಡುವುದು ವಾಡಿಕೆ. ಆದರೆ ಇಲ್ಲೊಂದು ಚಿತ್ರತಂಡ, ಪಾದಯಾತ್ರೆಯ ಮೂಲಕ ವಿಭಿನ್ನವಾಗಿ ಚಿತ್ರಕಥೆ, ಮತ್ತಿತರ ಸ್ಕ್ರಿಪ್ಟ್ ಕೆಲಸಗಳನ್ನು ಮಾಡಲು ಹೊರಟಿದೆ.
ಹೌದು, ಈ ಹಿಂದೆ “ಗಂಡ ಊರಿಗೆ ಹೋದಾಗ’ ಚಿತ್ರವನ್ನು ನಿರ್ದೇಶಿಸಿದ್ದ ಸಾಯಿಕೃಷ್ಣ ತಮ್ಮ ಹೊಸ ಚಿತ್ರಕ್ಕೆ “ಕಸ’ ಎಂದು ಹೆಸರಿಟ್ಟಿದ್ದಾರೆ. ಚಿತ್ರದ ನಿರ್ದೇಶಕ ಸಾಯಿಕೃಷ್ಣ ಮತ್ತು ಚಿತ್ರತಂಡ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದು, ಈ ಪಾದಯಾತ್ರೆಯ ನಡುವೆಯೇ ಚಿತ್ರದ ಸ್ಕ್ರಿಪ್ಟ್ ಕೆಲಸವನ್ನು ನಡೆಸಲಿದೆ. ಅಂದಹಾಗೆ, ಪರಿಸರ ಕಾಳಜಿಯನ್ನು ಸಾರುವ ಈ ಚಿತ್ರದ ಮುಂದಿನ ತಿಂಗಳು ಸೆಟ್ಟೇರುವ ಸಾಧ್ಯತೆ ಇದೆ.