ಗಾಂಧಿನಗರದಲ್ಲೊಂದು “ಶಿವಾನಂದ ಸರ್ಕಲ್‌’

ಹೆಸರಾಂತ ವೃತ್ತ ಸಿನಿಮಾ ಶೀರ್ಷಿಕೆಯಾಯ್ತು

Team Udayavani, Nov 24, 2019, 6:00 AM IST

Shivananda-Circle

ನೀವೇನಾದರೂ ಬೆಂಗಳೂರಿಗರಾದರೆ ಅಥವಾ ಹೊರಗಿನವರಾಗಿದ್ದರೂ ಯಾವಾಗಲಾದರೂ ಒಮ್ಮೆ ಬೆಂಗಳೂರನ್ನು ಒಂದು ಸುತ್ತು ಹಾಕಿದ್ದರೆ, “ಶಿವಾನಂದ ವೃತ್ತ’ ಎಂಬ ಹೆಸರನ್ನು ನೀವು ಖಂಡಿತ ಕೇಳಿರುತ್ತೀರಿ. ಸಿಲಿಕಾನ್‌ ಸಿಟಿಯ ಪ್ರಸಿದ್ದ ಲ್ಯಾಂಡ್‌ಮಾರ್ಕ್‌ಗಳಲ್ಲಿ ಶೇಷಾದ್ರಿಪುರಂ ಸಮೀಪವಿರುವ “ಶಿವಾನಂದ ವೃತ್ತ’ ಕೂಡ ಒಂದು. ಈಗ ಇದೇ “ಶಿವಾನಂದ ಸರ್ಕಲ್‌’ ಎಂಬ ಹೆಸರನ್ನು ಇಟ್ಟುಕೊಂಡು ಚಿತ್ರವೊಂದು ತಯಾರಾಗುತ್ತಿದೆ.

ಆರು ಜನ ಮಧ್ಯ ವಯಸ್ಕ ಗಂಡಸರು ತಮ್ಮ ಜವಾಬ್ದಾರಿಯನ್ನು ಮರೆತು ಬೇಜವಾಬ್ದಾರಿಯಿಂದ ನಡೆದುಕೊಂಡರೆ, ಅವರ ಕುಟುಂಬದವರ ಗತಿ ಏನಾಗುತ್ತದೆ. ಈ ಗಂಡಸರನ್ನು ನಂಬಿಕೊಂಡ ಅವರ ಹೆಂಡತಿ-ಮಕ್ಕಳ ಮೇಲೆ ಅದರ ಪರಿಣಾಮ ಏನಾಗುತ್ತದೆ ಅನ್ನೋದೆ “ಶಿವಾನಂದ ಸರ್ಕಲ್‌’ ಚಿತ್ರದ ಕಥಾ ಹಂದರ. ಹೆಂಡತಿ-ಮಕ್ಕಳು ಮಲಗಿರುವಾಗ ಮನೆಗೆ ಬರುವ ಗಂಡಸರು, ಬೆಳಿಗ್ಗೆ ಮನೆಯವರೆಲ್ಲರೂ ಏಳುವ ಮುನ್ನವೇ ಮನೆಯಿಂದ ಹೊರ ಹೋಗುತ್ತಾರೆ.

ಅಬ್ಬೆಪಾರಿಗಳಂತೆ ಪ್ರತಿ ದಿನವನ್ನು “ಶಿವಾನಂದ ವೃತ್ತ’ ಎಂಬ ಸ್ಥಳದಲ್ಲಿ ಕಳೆಯುತ್ತಿರುತ್ತಾರೆ. ಒಂದು ಹಂತದಲ್ಲಿ, ಈ ತಂಡದ ಸದಸ್ಯನಿಂದಲೇ ಎಲ್ಲರ ಬದುಕಿನಲ್ಲೂ ತಿರುವು ಬರುತ್ತದೆ. ಈ ಎಲ್ಲಾ ಗಂಡಸರ ಜೀವನದ ಏಳು-ಬೀಳುಗಳಿಗೆ “ಶಿವಾನಂದ ವೃತ್ತ’ ಮೂಕ ಸಾಕ್ಷಿಯಾಗಿರುತ್ತದೆ. ಅದು ಹೇಗೆ ಅನ್ನೋದೆ “ಶಿವಾನಂದ ಸರ್ಕಲ್‌’ ಚಿತ್ರ ಎನ್ನುತ್ತದೆ ಚಿತ್ರತಂಡ. ಹಳೇ ಬೇರು ಹೊಸ ಚಿಗುರು ಎನ್ನುವಂತೆ “ಶಿವಾನಂದ ವೃತ್ತ’ ಚಿತ್ರ ಹಳೆಯ ಮತ್ತು ಹೊಸಬರ ಸಮಾಗಮದಲ್ಲಿ ಮೂಡಿಬರುತ್ತಿದೆ.

ನವ ಪ್ರತಿಭೆಗಳಾದ ರಂಗಸ್ವಾಮಿ, ಶಿವಪ್ಪ ಕುಡ್ಲೂರು, ಶಿವಕುಮಾರ್‌ ಜೀವರ್ಗಿ, ಕೆ.ಟಿ.ಮುನಿರಾಜು, ಪದ್ಮನಾಭ ಮತ್ತು ಆನಂದ್‌ ಕೃಷ್ಣ. ಇವರೊಂದಿಗೆ ಹಿರಿಯ ಕಲಾವಿದರುಗಳಾದ ಶಂಕರ್‌ ಭಟ್‌, ಕೃಷ್ಣಮೂರ್ತಿ ತಲ್ವಾರ್‌ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಕಪಿಲ್‌ ಕಥೆ, ಚಿತ್ರಕಥೆ ಬರೆದು ನಿರ್ಮಾಣ ಮತ್ತು ನಿರ್ದೇಶನ ಮಾಡುತ್ತಿರುವ ಐದನೇ ಚಿತ್ರ ಇದಾಗಿದ್ದು, ಚಿತ್ರಕ್ಕೆ ಸಿ. ನಾರಾಯಣ್‌ ಛಾಯಾಗ್ರಹಣವಿದೆ.

ಸಿ. ಸುದರ್ಶನ್‌, ಉದಯಲೇಖಾ, ಶಿವಪ್ಪ ಕುಡ್ಲೂರು ಸಾಹಿತ್ಯದ ನಾಲ್ಕು ಹಾಡುಗಳಿಗೆ ಗೋಪಿ ಕಲಾಕಾರ್‌ ಸಂಗೀತ ಒದಗಿಸುತ್ತಿದ್ದಾರೆ. ಈ ಪೈಕಿ ಕಲಾವಿದರುಗಳಿಂದಲೇ ಗೀತೆಗಳನ್ನು ಹಾಡಿಸುತ್ತಿರುವುದು ವಿಶೇಷ. ಇತ್ತೀಚೆಗೆ ಶಿವಾನಿ-ಪದ್ಮನಾಬ್‌ ಹಾಡುವ ಹಾಡಿನ ಧ್ವನಿಮುದ್ರಣ ಕಾರ್ಯಕ್ರಮವು ಪ್ರಸಾದ್‌ ಲ್ಯಾಬ್‌ನಲ್ಲಿ ಸರಳವಾಗಿ ನಡೆಯಿತು. ಶೀಘ್ರದಲ್ಲಿಯೇ ಮುಹೂರ್ತವನ್ನು ಆಚರಿಸಿಕೊಂಡು ಚಿತ್ರೀಕರಣಕ್ಕೆ ಹೊರಡಲಿರುವ ಚಿತ್ರತಂಡ, ಬೆಂಗಳೂರಿನ ಸರ್ಕಲ್‌ ಒಂದರಲ್ಲಿ ಸುಮಾರು 25 ದಿನಗಳ ಕಾಲ ಚಿತ್ರೀಕರಣಕ್ಕೆ ಪ್ಲಾನ್‌ ಹಾಕಿಕೊಂಡಿದೆ.

ಟಾಪ್ ನ್ಯೂಸ್

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.