ಸಲಗ ಸೆಟ್ಗೆ ಶಿವಣ್ಣ ಭೇಟಿ
ಚಿತ್ರತಂಡದ ಮೊಗದಲ್ಲಿ ಮಂದಹಾಸ
Team Udayavani, Jun 24, 2019, 3:00 AM IST
ನಟ “ದುನಿಯಾ’ ವಿಜಯ್ ಮತ್ತೆ ಟ್ರ್ಯಾಕ್ಗೆ ಮರಳಿರುವುದು ಗೊತ್ತೇ ಇದೆ. ಅವರು ಈ ಬಾರಿ ನಟನೆಯ ಜೊತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆಂಬುದು ಎಲ್ಲರಿಗೂ ಗೊತ್ತಿದೆ. “ಸಲಗ’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಲು ಮುಂದಾಗಿರುವ “ದುನಿಯಾ’ ವಿಜಯ್ ಈಗಾಗಲೇ ಚಿತ್ರೀಕರಣ ಶುರುಮಾಡಿದ್ದಾರೆ.
ಇತ್ತೀಚೆಗೆ ಚಿತ್ರೀಕರಣದ ಸೆಟ್ಗೆ ಶಿವರಾಜಕುಮಾರ್ ಅವರು ಭೇಟಿ ನೀಡಿ, ಚಿತ್ರತಂಡದ ಜೊತೆ ಸ್ವಲ್ಪ ಸಮಯ ಕಳೆದಿದ್ದಾರೆ. ಇದಕ್ಕೂ ಮುನ್ನ, ಶಿವರಾಜಕುಮಾರ್ ಅವರು “ಸಲಗ’ ಚಿತ್ರ ತಂಡಕ್ಕೆ ಶುಭಕೋರುವ ಮೂಲಕ “ದುನಿಯಾ’ ವಿಜಯ್ ಅವರ ಹೊಸ ಸಾಹಸಕ್ಕೆ ಬೆನ್ನುತಟ್ಟಿದ್ದರು.
“ಸಲಗ’ ಚಿತ್ರೀಕರಣ ಶುರುವಾಗಿರುವ ವಿಷಯ ತಿಳಿದ ಶಿವರಾಜಕುಮಾರ್, ನೇರ ಸೆಟ್ಗೆ ತೆರಳಿ, “ದುನಿಯಾ’ ವಿಜಯ್ ಅವರ ಮೊದಲ ನಿರ್ದೇಶನದ ಚಿತ್ರದ ಕೆಲಸವನ್ನು ನೋಡಿ, ಒಂದಷ್ಟು ಚರ್ಚಿಸಿದ್ದಾರೆ. ಇದು ಸಹಜವಾಗಿಯೇ “ದುನಿಯಾ’ ವಿಜಯ್ ಮತ್ತು ಅವರ ತಂಡಕ್ಕೆ ಖುಷಿಯನ್ನು ಹೆಚ್ಚಿಸಿದೆ.
ಅಂದಹಾಗೆ, “ಸಲಗ’ ಒಂದು ಔಟ್ ಅಂಡ್ ಔಟ್ ಮಾಸ್ ಸಬೆjಕ್ಟ್ ಆಗಿದ್ದು, ಆ್ಯಕ್ಷನ್ಗೆ ಹೆಚ್ಚು ಒತ್ತು ಕೊಡಲಾಗಿದೆ. ಇದು ಕಾಡಿನೊಳಗಿರುವ ಸಲಗವಲ್ಲ, ನಾಡಿನೊಳಗಿರುವ ಸಲಗ. ಒಬ್ಬ ಅಮಾಯಕ ವ್ಯಕ್ತಿ ಭೂಗತಲೋಕದಲ್ಲಿ ಸಿಲುಕಿದಾಗ ನಡೆಯುವ ಕಥೆ ಸಲಗ ಚಿತ್ರದಲ್ಲಿದೆಯಂತೆ.
ಇನ್ನು ಈ “ಸಲಗ’ ಚಿತ್ರದ ಮೂಲಕ ವಿಜಯ್ ಮತ್ತೂಮ್ಮೆ ಮಾಸ್ ಹೀರೋ ಆಗಿ ಮಿಂಚಲಿದ್ದಾರೆ. ಈ ಚಿತ್ರದಲ್ಲಿ ವಿಜಯ್ ಗೆಟಪ್ ಕೂಡಾ ಭಿನ್ನವಾಗಿರಲಿದೆಯಂತೆ. ಚಿತ್ರಕ್ಕೆ ಸಂಜನಾ ಆನಂದ್ ನಾಯಕಿಯಾಗಿದ್ದಾರೆ. ಉಳಿದಂತೆ ಧನಂಜಯ್ ಖಡಕ್ ಪೊಲೀಸ್ ಅಧಿಕಾರಿ ಪಾತ್ರ ಮಾಡುತ್ತಿದ್ದಾರೆ.
“ಟಗರು’ ಚಿತ್ರಕ್ಕೆ ಸಂಗೀತ ನೀಡಿದ ಚರಣ್ರಾಜ್ ಅವರ ಸಂಗೀತ ಚಿತ್ರಕ್ಕಿದೆ. ಚಿತ್ರವನ್ನು ಕೆ.ಪಿ.ಶ್ರೀಕಾಂತ್ ನಿರ್ಮಿಸುತ್ತಿದ್ದಾರೆ. ಈ ಹಿಂದೆ “ಟಗರು’ ಚಿತ್ರ ನಿರ್ಮಿಸಿದ್ದ ಶ್ರೀಕಾಂತ್ ಈಗ “ಸಲಗ’ ಮೂಲಕ ಮತ್ತೂಂದು ಹೊಸ ಇನ್ನಿಂಗ್ಸ್ ಶುರುಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್ ರೋಲ್ ನಲ್ಲಿ ಫಾಫಾ
ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ
Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ
CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್
ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!