ಮಗಳು ಚಿತ್ರರಂಗಕ್ಕೆ ಬರುವ ಬಗ್ಗೆ ಯೋಚಿಸಿಲ್ಲ: ಸುಧಾರಾಣಿ

ಸಿನಿಮಾ ಎಂಟ್ರಿಯ ಊಹಾಪೋಹಕ್ಕೆ ಬಿತ್ತು ಫ‌ುಲ್‌ಸ್ಟಾಪ್‌

Team Udayavani, May 25, 2019, 3:00 AM IST

Sudharani-with-her-Daughter

ಕನ್ನಡ ಚಿತ್ರರಂಗದ ಎವರ್‌ಗ್ರೀನ್‌ ತಾರೆ ಸುಧಾರಾಣಿ ಪುತ್ರಿ ನಿಧಿರಾವ್‌ ಚಿತ್ರರಂಗಕ್ಕೆ ಬರುತ್ತಾರೆ ಎಂಬ ಸುದ್ದಿ ಕಳೆದ ಕೆಲ ದಿನಗಳಿಂದ ಚಿತ್ರರಂಗದಲ್ಲಿ ಹರಿದಾಡುತ್ತಿದೆ. ಇದರ ಜೊತೆಗೇ ಸುಧಾರಾಣಿ ಪುತ್ರಿ ನಿಧಿ ರಾವ್‌ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರ ಯಾವುದು? ಆ ಚಿತ್ರವನ್ನು ಯಾರು ನಿರ್ದೇಶಿಸಲಿದ್ದಾರೆ? ಆ ಚಿತ್ರಕ್ಕೆ ಹೀರೋ ಯಾರು?

ಹೀಗೆ ಇನ್ನೂ ಖಾತ್ರಿಯೇ ಆಗದ ಸುದ್ದಿಯ ಬಗ್ಗೆ ಹತ್ತು ಹಲವು ಅಂತೆ-ಕಂತೆ ಮಾತುಗಳು ಗಾಂಧಿನಗರದಲ್ಲಿ ಹರಿದಾಡುತ್ತಿದ್ದವು. ಹಾಗಾದರೆ, ನಿಜಕ್ಕೂ ಸುಧಾರಾಣಿ ತಮ್ಮ ಪುತ್ರಿಯನ್ನು ಚಿತ್ರರಂಗಕ್ಕೆ ಪರಿಚಯಿಸಲಿದ್ದಾರಾ? ಅನ್ನೋ ಪ್ರಶ್ನೆಗೆ ಸ್ವತಃ ಸುಧಾರಾಣಿ ಅವರೇ ಉತ್ತರಿಸಿದ್ದಾರೆ.

“ಇತ್ತೀಚೆಗೆ ತುಂಬ ಜನ ನನ್ನಲ್ಲಿ ನಿಮ್ಮ ಮಗಳು ಸಿನಿಮಾಕ್ಕೆ ಬರುತ್ತಾರಂತೆ ಹೌದಾ, ಅಂತ ಕೇಳುತ್ತಿದ್ದಾರೆ. ಮೊದಲಿಗೆ ಇಂಥ ಸುದ್ದಿ ಕೇಳಿ ನಿಜಕ್ಕೂ ನನಗೇ ಆಶ್ಚರ್ಯವಾಯ್ತು. ಅವಳಿನ್ನೂ ಓದುತ್ತಿದ್ದಾಳೆ. ಇತ್ತೀಚೆಗಷ್ಟೇ ಅವಳ ರಿಸಲ್ಟ್ ಬಂದಿದೆ. ಒಳ್ಳೆಯ ಮಾರ್ಕ್ಸ್ನೊಂದಿಗೆ ಸಿಬಿಎಸ್‌ಇ ನಲ್ಲಿ 12ನೇ ತರಗತಿ ಮುಗಿಸಿದ್ದಾಳೆ.

ಮುಂದೆ ಯಾವ ಕೋರ್ಸ್‌ ತೆಗೆದುಕೊಳ್ಳಬೇಕು, ಯಾವ ಕಾಲೇಜ್‌ಗೆ ಸೇರಬೇಕು ಅಂತ ಯೋಚನೆಗಳು ನಡೆಯುತ್ತಿದೆ. ಇವೆಲ್ಲದರ ಮಧ್ಯೆ ನನ್ನ ಮಗಳು ಸಿನಿಮಾರಂಗಕ್ಕೆ ಬರುತ್ತಾಳೆ ಎಂಬ ಸುದ್ದಿಯನ್ನು ಯಾರೂ ಹಬ್ಬಿಸಿದರೋ, ಯಾಕಾಗಿ ಹಬ್ಬಿಸಿದರೋ ಗೊತ್ತಿಲ್ಲ’ ಎನ್ನುತ್ತಾರೆ ಸುಧಾರಾಣಿ.

ಇನ್ನೂ ಸುಧಾರಾಣಿ ಅವರ ಮಗಳು ನಿಧಿಗೂ ಕೂಡ ಚಿತ್ರರಂಗಕ್ಕಿಂತ ಹೆಚ್ಚಾಗಿ ಓದಿನ ಕಡೆಗೆ ಆಸಕ್ತಿ ಇರುವುದರಿಂದ ಸುಧಾರಾಣಿ ದಂಪತಿಗಳು ಕೂಡ ತಮ್ಮ ಮಗಳ ಓದಿನ ಕಡೆಗೆ ತಮ್ಮ ಮೊದಲ ಆದ್ಯತೆ ನೀಡುತ್ತಿದ್ದಾರಂತೆ. ಈ ಬಗ್ಗೆ ಮಾತನಾಡುವ ಸುಧಾರಾಣಿ, “ನಮ್ಮ ಮೊದಲ ಆದ್ಯತೆ ಮಗಳ ಓದಿನ ಕಡೆಗೆ.

ಹಾಗಾಗಿ, ಇಲ್ಲಿಯವರೆಗೂ ಅವಳು ಸಿನಿಮಾರಂಗಕ್ಕೆ ಬರಬೇಕು ಅಂತ ನಾವು ಯೋಚಿಸಿಲ್ಲ. ಸದ್ಯಕ್ಕೆ ನಮ್ಮ ಮತ್ತು ಅವಳ ಯೋಚನೆ ಏನಿದ್ದರೂ, ಅವಳ ಹೈಯರ್‌ ಎಜ್ಯುಕೇಷನ್‌ ಕಡೆಗೆ. ಅದನ್ನು ಬಿಟ್ಟು ಅವಳನ್ನು ಚಿತ್ರರಂಗಕ್ಕೆ ತರುವ ಯಾವುದೇ ಯೋಚನೆ ಇಲ್ಲ’ ಎಂದು ಮಗಳ ಚಿತ್ರರಂಗದ ಎಂಟ್ರಿಯನ್ನು ಸುಧಾರಾಣಿ ಸ್ಪಷ್ಟವಾಗಿ ನಿರಾಕರಿಸುತ್ತಾರೆ.

ಒಟ್ಟಾರೆ ಸುಧಾರಾಣಿ ಪುತ್ರಿಯ ಚಿತ್ರರಂಗದ ಎಂಟ್ರಿಯ ಬಗ್ಗೆ ಕಳೆದ ಕೆಲ ದಿನಗಳಿಂದ ಹರಿದಾಡುತ್ತಿದ್ದ ಎಲ್ಲಾ ಅಂತೆ-ಕಂತೆಗಳಿಗೆ ಸುಧಾರಾಣಿ ತಮ್ಮ ಉತ್ತರದ ಮೂಲಕ ಫ‌ುಲ್‌ಸ್ಟಾಪ್‌ ಇಟ್ಟಿದ್ದಾರೆ.

ಟಾಪ್ ನ್ಯೂಸ್

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.