ನುಸ್ರತ್ ಜಹಾನ್ ಗೆ ಮದುವೆ ಆಗಿದೆಯೇ? ಪ್ರಶ್ನೆ ಹುಟ್ಟು ಹಾಕಿದ ಫೋಟೋ
Team Udayavani, Oct 16, 2021, 3:07 PM IST
ಕೋಲ್ಕತಾ: ಬಂಗಾಳಿ ನಟಿ, ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಒಂದಲ್ಲೊಂದು ವಿಚಾರದಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಅಭಿಮಾನಿಗಳಲ್ಲಿ ತಮ್ಮ ವೈವಾಹಿಕ ಜೀವನದ ಕುರಿತಾಗಿ ಮತ್ತೊಂದು ಪ್ರಶ್ನೆ ಹುಟ್ಟು ಹಾಕಿದ್ದಾರೆ.
ನುಸ್ರತ್ ಅವರು ವಿಜಯದಶಮಿಯಂದು ಇನ್ಟಾಗ್ರಾಮ್ ನಲ್ಲಿ ಫೋಟೋ ಒಂದನ್ನೂ ಹಾಕಿ ತಮ್ಮ ಅಭಿಮಾನಿಗಳಿಗೆ ಶುಭಾಶಯ ಕೋರಿದ್ದು, ಅದರಲ್ಲಿ ಅವರು ಬಂಗಾಳಿ ವಿವಾಹಿತ ಮಹಿಳೆಯರು ಧರಿಸುವ ಶಾಖಾ ಫೋಲ (ಬಿಳಿ, ಕೆಂಪು ಬಳೆ) ಧರಿಸಿದ್ದು, ಎದ್ದು ಕಂಡಿದೆ. ಈಗ ಆ ಫೋಟೋ ಭಾರಿ ಚರ್ಚೆಗೆ ಕಾರಣವಾಗಿದೆ.
ಬಿಳಿ, ಕೆಂಪು ಬಣ್ಣದ ಬಳೆ ಹಾಗೂ ಬಿಳಿ ಕೆಂಪು ಬಣ್ಣದ ಸೀರೆ ಧರಿಸಿ, ಹಣೆಗೆ ಬಿಂದಿ ಇಟ್ಟು ಫೋಟೋದಲ್ಲಿ ಕಾಣಿಸಿಕೊಂಡಿದ್ದರು.
ನುಸ್ರತ್ ಹಾಗೂ ಯಶ್ ದಾಸ್ ಗುಪ್ತಾ ಅವರು ಈ ಹಿಂದೆ ದುರ್ಗಾ ಪೂಜೆ ಪೆಂಡಾಲ್ ಒಂದಕ್ಕೆ ಭೇಟಿ ನೀಡಿ ಅಲ್ಲಿನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದರು. ಆ ಫೋಟೋದಲ್ಲಿ ನುಸ್ರತ್, ಯಶ್ ತೊಡೆಯಲ್ಲಿ ಕುಳಿತುಕೊಂಡಿದ್ದರು.
ಇದನ್ನೂ ಓದಿ: ಜಿಲ್ಲೆಯಲ್ಲಿ ಆಯುಧ ಪೂಜೆ ಸರಳ ಆಚರಣೆ
ಈ ಫೋಟೋಗಳು ಕಂಡ ಅಭಿಮಾನಿಗಳಲ್ಲಿ ಯಶ್ ಹಾಗೂ ನುಸ್ರತ್ ವಿವಾಹವಾಗಿದ್ದಾರೆಯೆ? ಎನ್ನುವ ಪ್ರಶ್ನೆಗಳು ಮೂಡಿವೆ. ನುಸ್ರತ್ ಆಗಸ್ಟ್ ತಿಂಗಳಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿಗೆ ಇಶಾನ್ ಎಂದು ನಾಮಕರಣ ಮಾಡಿದ್ದರು. ಇತ್ತೀಚೆಗೆ ಕೇಕ್ ಕಟ್ ಮಾಡುವ ಮೂಲಕ ತಮ್ಮ ಮಗುವಿನ ಹುಟ್ಟುಹಬ್ಬ ಆಚರಣೆಯ ತುಣುಕನ್ನು ಶೇರ್ ಮಾಡಿದ್ದರು. ಅದರಲ್ಲಿ ಅಪ್ಪ ಮತ್ತು ಮಗ ಎಂದು ಬರೆದಿದ್ದರು.
ವಿವಾಹವಾಗದೆ ಮಗುವನ್ನು ಹೊಂದಿರುವ ಕುರಿತಾಗಿನ ಪ್ರಶ್ನೆಗೆ ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಜನ ಹೇಳಿದ್ದೆಲ್ಲವೂ ಸತ್ಯ ಎನ್ನುವ ಹಾಗಿಲ್ಲ. ನಮಗೆ ಮದುವೆಯಾಗಿಯೋ, ಆಗದೆಯೋ ಮಗು ಜನಿಸಿದೆ ಎನ್ನುವುದು ಟೀಕಾಕಾರರಿಗೆ ತಿಳಿದಿಲ್ಲ. ನಾವು ಸತ್ಯವನ್ನು ಹೇಳದಿರುವ ಕಾರಣ ಅವರು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್
MUST WATCH
ಹೊಸ ಸೇರ್ಪಡೆ
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…