ಮುಫ್ತಿ ಅನಾಸ್ ನೊಂದಿಗೆ ವಿವಾಹ: ಬಾಲಿವುಡ್ ಗೆ ‘ಗುಡ್ ಬೈ’ ಹೇಳಿದ ನಟಿ ಸನಾ ಖಾನ್
Team Udayavani, Nov 22, 2020, 1:42 PM IST
ನವದೆಹಲಿ: ಬಿಗ್ ಬಾಸ್ ಖ್ಯಾತಿಯ ಬಾಲಿವುಡ್ ನಟಿ ಸನಾ ಖಾನ್ ಚಿತ್ರರಂಗಕ್ಕೆ ಗುಡ್ ಬೈ ಹೇಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ಇತ್ತೀಚಿಗಷ್ಟೇ ಸೂರತ್ ಮೂಲದ ಮುಫ್ತಿ ಅನಾಸ್ ಎಂಬುವವರ ಜೊತೆಗಿನ ವಿವಾಹದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿತ್ತು. ನವದಂಪತಿಗಳಿಬ್ಬರೂ ಶ್ವೇತ ವರ್ಣದ ಉಡುಪಿನಲ್ಲಿ ಕಾಣಿಸಿಕೊಂಡಿದ್ದರು.
ಈ ಮೊದಲು ತಾನು ಸಿನಿಮಾ ಇಂಡಸ್ಟ್ರಿಯನ್ನು ತೊರೆಯುದಾಗಿ ಸನಾ ಖಾನ್ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಹೇಳಿಕೊಂಡಿದ್ದರು. ಇದೀಗ ಸಮಾಜ ಸೇವೆಯಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲಿದ್ದೇನೆ ಎಂದಿದ್ದಾರೆ.
ಸಿನಿಮಾ ಇಂಡಸ್ಟ್ರಿ ನನಗೆ ಅಪಾರ ಸಂಪತ್ತು ಮತ್ತು ಗೌರವವನ್ನು ತಂದುಕೊಟ್ಟಿದೆ. ಆದರೆ ಹಣ ಗಳಿಸುವುದೊಂದೆ ಜೀವನದ ಗುರಿಯಲ್ಲ ಎಂಬುದು ನನಗೆ ಅರಿವಾಗಿದೆ. ಇನ್ನು ಮುಂದೆ ಸಾಮಾನ್ಯ ಜನರ ಸೇವೆ ಮಾಡುವ ಮೂಲಕ ಸೃಷ್ಟಿಕರ್ತನ ಆದೇಶವನ್ನು ಪಾಲಿಸಲಿದ್ದೇನೆ ಎಂದು ಹೇಳಿದ್ದಾರೆ.
33 ವರ್ಷದ ಸನಾ, ತಮ್ಮ ನಿರ್ಧಾರವನ್ನು ಹಿಂದಿ,ಇಂಗ್ಲಿಷ್ ಮತ್ತು ಉರ್ದು ಭಾಷೆಯಲ್ಲಿ ಹಂಚಿಕೊಂಡಿದ್ದಾರೆ.
ಇಂದು ನಾನು ನನ್ನ ಬದುಕಿನ ಅತ್ಯುನ್ನತ ಘಟ್ಟದಲ್ಲಿ ನಿಂತು ಮಾತನಾಡುತ್ತಿದ್ದೇನೆ. ನಾನು ಇಷ್ಟು ಸಮಯ ಸಿನಿಮಾ ರಂಗದಲ್ಲಿ ಬದುಕಿದೆ. ನನಗೆ ಇಂಡಸ್ಟ್ರಿ ಹೆಸರು, ಸಂಪತ್ತು, ಗೌರವವನ್ನು ತಂದುಕೊಟ್ಟಿದೆ. ಹಾಗೂ ನನ್ನನ್ನು ಬೆಳೆಸಿದಂತಹ ನನ್ನೆಲ್ಲಾ ಅಭಿಮಾನಿಗಳಿಗೆ ನಾನು ಸದಾ ಚಿರಋಣಿ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಪ್ರೀತಿ ತೋರಿಸುವ ನೀವು ಚುನಾವಣೆಯಲ್ಲಿ ಕೈಬಿಟ್ರಿ: ಮಂಡ್ಯದಲ್ಲಿ ಕುಮಾರಸ್ವಾಮಿ ಭಾವುಕ ಭಾಷಣ
ಮನುಷ್ಯನ ಜೀವನದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ಮನುಷ್ಯ ಸಾವಿನ ನಂತರ ಏನಾಗುತ್ತಾನೆ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು ಎಂದಿದ್ದಾರೆ.
ಕೊನೆಯಲ್ಲಿ ನನ್ನೆಲ್ಲಾ ಸಹೋದರ ಸಹೋದರಿಯರೆ, ಇನ್ನು ಮುಂದೆ ಯಾವುದೇ ಚಿತ್ರರಂಗದ ಕೆಲಸಗಳಿಗೆ ನನ್ನನ್ನು ಸಂಪರ್ಕಿಸಬೇಡಿ ಎಂದು ವಿನಂತಿ ಮಾಡಿಕೊಂಡಿದ್ದಾರೆ.
ಸನಾಖಾನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬೆನ್ನಲ್ಲೇ, ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ತಮ್ಮ ಪೋಟೋಸ್, ವೀಡಿಯೋಸ್ ಗಳನ್ನು ಅವರು ಡಿಲೀಟ್ ಮಾಡಿದ್ದು, ಇದರ ಹಿಂದಿನ ಉದ್ದೇಶ ಏನಿರಹುದು ಎಂಬುದರ ಕುರಿತಾದ ಚರ್ಚೆಗಳು ನಡೆಯುತ್ತಿವೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ