‘ತಿಮ್ಮಯ್ಯ ತಿಮ್ಮಯ್ಯ’ ಚಿತ್ರ ವಿಮರ್ಶೆ: ಅಜ್ಜ-ಮೊಮ್ಮಗನ ಭಾವನಾತ್ಮಕ ಜರ್ನಿ


Team Udayavani, Dec 3, 2022, 11:50 AM IST

thimmaiah and thimmaiah movie review

ಸಂಬಂಧಗಳು ಮನುಷ್ಯನನ್ನು ಭಾವನಾ ಜೀವಿಯನ್ನಾಗಿಸುತ್ತವೆ. ಅಂತಹ ಸಂಬಂಧಗಳನ್ನೇ ದ್ವೇಷಿಸಿ, ಅವುಗಳಿಂದ ಪಲಾಯನಗೊಳ್ಳುವ ವ್ಯಕ್ತಿ, ಆ ಭಾವನೆಯ ರುಚಿ ಸವಿಯಲಾರ. ಸಂಬಂಧಗಳ ಅನುಬಂಧ ಹಾಗೂ ಭಾವನೆಗಳ ಕುರಿತು ಹೇಳ ಹೊರಟಿರುವ ಚಿತ್ರ ಈ ವಾರ ತೆರೆಕಂಡಿರುವ ತಿಮ್ಮಯ್ಯ ತಿಮ್ಮಯ್ಯ ಚಿತ್ರ.

ತನ್ನ ಪ್ರೇಯಸಿ ಜೊತೆ ವಿದೇಶಕ್ಕೆ ಹಾರಿ, ಅಲ್ಲಿ ನೆಲೆಕಂಡುಕೊಳ್ಳುವ ಹಂಬಲ ವಿನ್ಸಿ (ಜೂ.ತಿಮ್ಮಯ್ಯ)ಯದು. ಒಂದೆಡೆ ತನ್ನ ಕುಟುಂಬದ ಆಸ್ತಿ ಮಾರಿ ವಿದೇಶಕ್ಕೆ ಹೋಗುವ ಹಂಬಲದಲ್ಲಿದ್ದ ವಿನ್ಸಿಯನ್ನು ವಾಪಾಸ್‌ ಕರೆತರುವವರು ತಾತ ಸೀನಿಯರ್‌ ತಿಮ್ಮಯ್ಯ. ಈ ತಾತ- ಮೊಮ್ಮಗ ಸೇರಿದ ಮೇಲೆ ಆರಂಭವಾಗುವ ಕ್ರೇಜಿ ಜರ್ನಿಯ ಕಥೆಯೇ “ತಿಮ್ಮಯ್ಯ ತಿಮ್ಮಯ್ಯ’ ಚಿತ್ರ.

“ತಿಮ್ಮಯ್ಯ ತಿಮ್ಮಯ್ಯ’ ಕಂಪ್ಲೀಟ್‌ ಫ್ಯಾಮಿಲಿ ಡ್ರಾಮಾ ಚಿತ್ರವಾಗಿದ್ದು, ಸೀನಿಯರ್‌ ಮತ್ತು ಜೂನಿಯರ್‌ ತಿಮ್ಮಯ್ಯ ನಡುವೆ ನಡೆಯುವ ಕಥೆಯಾಗಿದೆ. ಇಲ್ಲಿ ತಿಮ್ಮಯ್ಯ ಕುಟುಂಬದ ಆಸ್ತಿ, “ಬೆಂಗಳೂರು ಕೆಫೆ’ಯ ಅಳಿವು ಉಳಿವಿನ ಸುತ್ತ ಇಡೀ ಸಿನಿಮಾ ಸಾಗುತ್ತದೆ. ಚಿತ್ರದ ಮೊದಲರ್ಧ ಪ್ರೇಕ್ಷಕರನ್ನು ನಗುವಿನಲ್ಲಿ ತೇಲಿಸಿದರೆ, ದ್ವಿತೀಯಾರ್ಧಕ್ಕೆ ಸೆಂಟಿಮೆಂಟ್‌ ಅಂಶಗಳೊಂದಿಗೆ ಸಾಗುತ್ತದೆ. ನಿರ್ದೇಶಕ ಸಂಜಯ್‌ ಶರ್ಮ ತಮ್ಮ ಮೊದಲ ಪ್ರಯತ್ನದಲ್ಲೇ ಗಮನ ಸೆಳೆದಿದ್ದಾರೆ. ಒಂದಷ್ಟು ಔಟ್‌ ಆಫ್ ಬಾಕ್ಸ್‌ ಯೋಚನೆಯೊಂದಿಗೆ ಮಾಡಿರುವ ದೃಶ್ಯಗಳು ಹೆಚ್ಚು ಇಷ್ಟವಾಗುತ್ತವೆ ಮತ್ತು ಸಿನಿಮಾದ ಪ್ಲಸ್‌ ಪಾಯಿಂಟ್‌ ಕೂಡಾ. ಮೊದಲ ಭಾಗದಲ್ಲಿದ್ದ ವೇಗವನ್ನು ದ್ವಿತೀಯಾರ್ಧದಲ್ಲೂ ಕಾಯ್ದುಕೊಂಡಿದ್ದರೆ ಚೆನ್ನಾಗಿರುತ್ತಿತ್ತು.

ಇದನ್ನೂ ಓದಿ:ತಮಿಳುನಾಡಿನ ಎಲ್ಲಾ ದೇವಾಲಯಗಳಲ್ಲಿ ಮೊಬೈಲ್ ಫೋನ್ ಬಳಕೆ ನಿಷೇಧ: ಮದ್ರಾಸ್ ಹೈಕೋರ್ಟ್

ಈ ಹಿಂದೆ ಅನಂತ್‌ ನಾಗ್‌ ಮತ್ತು ದಿಗಂತ್‌ ಜೋಡಿ ಹಿಟ್‌ ಎಂದು ಎನಿಸಿಕೊಂಡಿದ್ದು, ಈ ಚಿತ್ರದಲ್ಲಿಯೂ ಅನಂತ್‌ ನಾಗ್‌ ಹಾಗೂ ದಿಗಂತ್‌ ಅವರ ಅಜ್ಜ -ಮೊಮ್ಮಗನ ಕಾಂಬಿನೇಷನ್‌ ಸುಂದರವಾಗಿ ಮೂಡಿಬಂದಿದೆ. ಭಾವನಾತ್ಮಕ ದೃಶ್ಯಗಳಲ್ಲಿನ ಅಭಿನಯ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗುವಂತಿದೆ. ಅದರಲ್ಲೂ ಅನಂತ್‌ನಾಗ್‌ ಅವರ ಮ್ಯಾನರಿಸಂ, ಎನರ್ಜಿ, ನಟನೆ ಸಿನಿಮಾದ ಜೀವಾಳ. ಇಡೀ ಚಿತ್ರವನ್ನೇ ಆವರಿಸಿದಂತಹ ಭಾವ ಕಾಡುತ್ತದೆ.

ಉಳಿದಂತೆ ವಿನೀತ್‌ ಕುಮಾರ್‌ ಹಾಗೂ ಪ್ರಕಾಶ್‌ ತುಮ್ಮಿನಾಡು ಅವರ ಚೇಷ್ಟೆ, ಕಾಮಿಡಿ ಟೈಮಿಂಗ್‌ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತದೆ. ನಾಯಕಿಯರಾದ ಐಂದ್ರಿತಾ ಮತ್ತು ಶುಭ್ರ ಅಯ್ಯಪ್ಪ ತಮ್ಮ ಪಾತ್ರವನ್ನು ಪೂರ್ಣವಾಗಿ ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟಿನಲ್ಲಿ ತಿಮ್ಮಯ್ಯ ತಿಮ್ಮಯ್ಯ ಪ್ರೇಕ್ಷಕರಿಗೆ ಒಳ್ಳೆಯ ಅನುಭವ ನೀಡಲಿದ್ದು, ಮಾಸ್‌ ಚಿತ್ರಗಳಿಂದ ಆಚೆಗೆ ಫ್ಯಾಮಿಲಿ, ಸೆಂಟಿಮೆಂಟ್‌- ಡ್ರಾಮಾ ಇಷ್ಟಪಡುವ ಪ್ರೇಕ್ಷಕರಿಗೆ ಚಿತ್ರ ಒಂದೊಳ್ಳೆಯ ಅನುಭವ ನೀಡಲಿದ್ದಾರೆ.

 ವಾಣಿ ಭಟ್ಟ

ಟಾಪ್ ನ್ಯೂಸ್

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.