ಕಾಮಿಡಿ ಕಾರಿನಲ್ಲಿ ಥ್ರಿಲ್ಲಿಂಗ್‌ ಪಯಣ


Team Udayavani, May 18, 2018, 5:56 PM IST

rambo-2-1.jpg

“ನಾವು ಅವನ್ನ ಟಾರ್ಗೆಟ್‌ ಮಾಡಿಲ್ಲ. ಅವನೇ ನಮ್ಮನ್ನ ಟಾರ್ಗೆಟ್‌ ಮಾಡ್ತಿದ್ದಾನೆ …’ ಹಾಗಂತ ಅವನಿಗೆ ಜ್ಞಾನೋದಯವಾಗುವಷ್ಟರಲ್ಲಿ, ಕಾಲ ಮೀರಿ ಹೋಗಿರುತ್ತದೆ. ಅದಕ್ಕೂ ಮುನ್ನ ತಾನು, ಅವನಿಗೆ ಆಟ ಆಡಿಸುತ್ತಿದ್ದೇನೆ ಎಂದು ಅವನು ನಂಬಿರುತ್ತಾನೆ. ಯಾವಾಗ ಇನ್ನೊಂದು ಕಾರಿನಲ್ಲಿರುವ ಅಪರಿಚಿತ ಇವನನ್ನು ಬೆನ್ನತ್ತಿ, ಸಾವಿನ ಅಂಚಿಗೆ ತಂದು ನಿಲ್ಲಿಸುತ್ತಾನೋ, ಆಗ ಕ್ರಮೇಣ ಅವನಿಗೆ ಅರ್ಥವಾಗುತ್ತಾ ಹೋಗುತ್ತದೆ. ಆದರೆ, ಇಷ್ಟಕ್ಕೂ ತನ್ನನ್ನು ಟಾರ್ಗೆಟ್‌ ಮಾಡುತ್ತಿರುವುದಾದರೂ ಯಾಕೆ?

ನೀವು ಸ್ಟೀವನ್‌ ಸ್ಪೀಲ್‌ಬರ್ಗ್‌ ನಿರ್ದೇಶನದ “ಡ್ಯುಯಲ್‌’ ಎಂಬ ಚಿತ್ರ ನೋಡಿರಬಹುದು ಅಥವಾ ಕೇಳಿರಬಹುದು. ಅದರಲ್ಲಿ ನಾಯಕನನ್ನು ಒಬ್ಬ ಅಪರಿಚಿತ ವ್ಯಕ್ತಿಯೊಬ್ಬ ಅದೇ ತರಹ ಆಟ ಆಡಿಸುತ್ತಿರುತ್ತಾನೆ. ಹೈವೇನಲ್ಲಿ ನಾಯಕ ಕಾರು ಓಡಿಸಿಕೊಂಡು ಪರ ಊರಿಗೆ ಹೋಗುವ ಸಂದರ್ಭದಲ್ಲಿ ಅವನನ್ನು ಬೆನ್ನಟ್ಟುವ ಟ್ರಕ್‌ ಡ್ರೈವರ್‌ ಒಬ್ಬ, ವಿಚಿತ್ರವಾಗಿ ಆಟ ಆಡಿಸುತ್ತಾನೆ. ನಾಯಕನಿಗೆ ದಾರಿ ಬಿಡದೆ, ಬಿಟ್ಟರೂ ಅವನ ಬೆನ್ನುಬಿಡದೆ ವಿಲಕ್ಷಣವಾಗಿ ಸೇಡು ತೀರಿಸಿಕೊಳ್ಳುತ್ತಾನೆ.

“ರ್‍ಯಾಂಬೋ 2′ ಸಹ ಅದೇ ಮಾದರಿಯ ಚಿತ್ರವಾದರೂ, ಅದೇ ಚಿತ್ರವಲ್ಲ. ಇಲ್ಲಿ ತನ್ನ ಗರ್ಲ್ಫ್ರೆಂಡ್‌ನೊಂದಿಗೆ ಲಾಂಗ್‌ ಡ್ರೈವ್‌ಗೆಂದು ಹೋಗುವ ನಾಯಕ, ದಾರಿಯಲ್ಲಿ ದೊಡ್ಡ ಕಾರ್‌ವೊಂದರಿಂದ ನೂರೆಂಟು ಸಮಸ್ಯೆಗಳನ್ನು ಎದುರಿಸುತ್ತಾನೆ. ಆ ಸಮಸ್ಯೆಗಳಿಂದ ಹೇಗೆ ಪಾರಾಗುತ್ತಾನೆ ಎಂಬುದೇ ಚಿತ್ರದ ಕಥೆ. ಮೊದಲೇ ಹೇಳಿದಂತೆ ಇದು “ಡ್ಯುಯಲ್‌’ ತರಹದ ಚಿತ್ರವೇ ಹೊರತು, ಅದೇ ಚಿತ್ರವಲ್ಲ. ಅದೊಂದು ಪಕ್ಕಾ ಥ್ರಿಲ್ಲರ್‌ ಚಿತ್ರವಾಗಿತ್ತು. ಆದರೆ, ಇಲ್ಲಿ ಥ್ರಿಲ್ಲರ್‌ ಅಂಶಗಳೊಂದಿಗೆ ಕಾಮಿಡಿ, ಸೆಂಟಿಮೆಂಟ್‌ ಎಲ್ಲವನ್ನೂ ಸೇರಿಸಿ ಚಿತ್ರಕಥೆ ಮಾಡಲಾಗಿದೆ.

ಮೊದಲಾರ್ಧ ಚಿತ್ರ ಕಾಮಿಡಿಯಿಂದ ಸಾಗುತ್ತದೆ. ಕ್ರಮೇಣ ಒಂದು ಹಂತದಲ್ಲಿ ಗಂಭೀರವಾಗುವುದಷ್ಟೇ ಅಲ್ಲ, ಎಮೋಷನಲ್‌ ಸಹ ಆಗುತ್ತದೆ. ಕೊನೆಗೆ ಒಂದು ಸಂದೇಶದೊಂದಿಗೆ ಮುಕ್ತಾಯವಾಗುತ್ತದೆ. ಚಿತ್ರದ ಒಂದು ವಿಶೇಷತೆಯೆಂದರೆ, ಎಲ್ಲೂ ಬೋರ್‌ ಆಗದಂತೆ ನೋಡಿಸಿಕೊಂಡು ಹೋಗುತ್ತದೆ. ಎಲ್ಲೋ ಸ್ವಲ್ಪ ನಿಧಾನವಾಯಿತು ಎನ್ನುವಷ್ಟರಲ್ಲಿ ಒಂದು ಚೇಸ್‌, ಕಾಮಿಡಿ ದೃಶ್ಯ ಅಥವಾ ಹಾಡು ಬಂದು, ಚಿತ್ರಕ್ಕೊಂದು ವೇಗ ಕೊಡುತ್ತದೆ. ಇಲ್ಲಿ ಲಾಜಿಕ್‌ ಹುಡುಕುತ್ತಾ ಕೂತರೆ, ನಿರಾಸೆಯಾಗಬಹುದು.

ಲಾಜಿಕ್‌ ಬಿಟ್ಟು “ಮ್ಯಾಜಿಕ್‌’ಗಾಗಿ ಚಿತ್ರ ನೋಡಿದರೆ ಮೋಸವಾಗಲಾರದು. ಮೊದಲೇ ಗೊತ್ತಿರಲಿ, ಈ ಚಿತ್ರಕ್ಕೂ “ರ್‍ಯಾಂಬೋ’ಗೂ ಯಾವುದೇ ಸಂಬಂಧವಿಲ್ಲ ಅಥವಾ ಇದು ಮೂಲ ಚಿತ್ರದ ಮುಂದುವರೆದ ಭಾಗವೂ ಅಲ್ಲ. ಎರಡೂ ಚಿತ್ರಗಳ ಕಾಮನ್‌ ಅಂಶಗಳೆಂದರೆ ಅದು ಶರಣ್‌. ಆ ಚಿತ್ರದಲ್ಲಿ ಶರಣ್‌ ಅದೆಷ್ಟು ಲವಲವಿಕೆಯಿಂದ ನಟಿಸಿದ್ದರೋ, ಇಲ್ಲೂ ಅಷ್ಟೇ ಚೆನ್ನಾಗಿ ತಮ್ಮ ಪಾತ್ರವನ್ನು ಮಾಡಿದ್ದಾರೆ.

ತುಂಟತನ, ಹತಾಶೆ, ನೋವು ಎಲ್ಲವನ್ನೂ ಚೆನ್ನಾಗಿ ಹಿಡಿದಿಟ್ಟಿದ್ದಾರೆ. ಹಾಗೆ ನೋಡಿದರೆ, ಚಿತ್ರದಲ್ಲಿ ಪಾತ್ರಗಳು ಕಡಿಮೆಯೇ, ಆಶಿಕಾ, ಚಿಕ್ಕಣ್ಣ, ರವಿಶಂಕರ್‌, ಕುರಿ ಪ್ರತಾಪ್‌, ಸಾಧು ಕೋಕಿಲ ಹೀಗೆ ಕೆಲವೇ ಕೆಲವು ಪಾತ್ರಗಳ ಸುತ್ತ ಚಿತ್ರ ಸುತ್ತುತ್ತದೆ. ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಪ್ರೇಕ್ಷಕರನ್ನು ಸಖತ್‌ ನಗಿಸುವುದಕ್ಕೆ ಚಿಕ್ಕಣ್ಣ ಮತ್ತು ಕುರಿ ಪ್ರತಾಪ್‌ ಇದ್ದರೆ, ಅಳಿಸುವುದಕ್ಕೆ ರವಿಶಂಕರ್‌ ಬರುತ್ತಾರೆ.

ಇನ್ನು ಆಶಿಕಾ ಬರೀ ಗ್ಲಾಮರ್‌ ಗೊಂಬೆಯಷ್ಟೇ ಅಲ್ಲ, ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಬರೀ ಕಲಾವಿದರಷ್ಟೇ ಅಲ್ಲ, ತಂತ್ರಜ್ಞರೂ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಚಿತ್ರದ ಹೈಲೈಟ್‌ ಎಂದರೆ ಅದು ಸುಧಾಕರ್‌ ರಾಜ್‌ ಅವರ ಛಾಯಾಗ್ರಹಣ. ಪ್ರಯಾಣದ ಹಿನ್ನೆಲೆಯಲ್ಲಿ ಸಾಗುವ ಕಥೆಯಾದ್ದರಿಂದ ಸುಧಾಕರ್‌ ಕೆಲಸ ಹೆಚ್ಚು.

ಆ ಕೆಲಸವನ್ನು ಬಹಳ ಚೆನ್ನಾಗಿ ಮಾಡಿದ್ದಾರೆ ಸುಧಾಕರ್‌. ಅರ್ಜುನ್‌ ಜನ್ಯ ಹಾಡುಗಳು, ಕೆ.ಎಂ. ಪ್ರಕಾಶ್‌ ಅವರ ಸಂಕಲನ ಮತ್ತು ವೇಗ, ಅನಿಲ್‌ ಅವರ ಸಂಭಾಷಣೆ ಎಲ್ಲವೂ ಗಮನಸಳೆಯುತ್ತದೆ. ಶರಣ್‌ ಬರೀ ನಟನಾಗಿಯಷ್ಟೇ ಅಲ್ಲ, ಡ್ಯಾನ್ಸ್‌ನಲ್ಲೂ ಗಮನಸೆಳೆಯುತ್ತಾರೆ. ಇನ್ನು ಚಿತ್ರಕ್ಕೆ ಹಾಕಿರುವ ಸೆಟ್‌ಗಳು, ನೃತ್ಯ ನಿರ್ದೇಶನ, ಕಾಸ್ಟೂಮ್‌ಗಳು … ಒಳ್ಳೆಯ ಮಾರ್ಕ್ಸ್ ಗಿಟ್ಟಿಸಿಕೊಳ್ಳುತ್ತದೆ.

ಚಿತ್ರ: ರ್‍ಯಾಂಬೋ 2
ನಿರ್ದೇಶನ: ಅನಿಲ್‌ ಕುಮಾರ್‌
ನಿರ್ಮಾಣ: ಶರಣ್‌ ಮತ್ತು ಅಟ್ಲಾಂಟ ನಾಗೇಂದ್ರ
ತಾರಾಗಣ: ಶರಣ್‌, ಆಶಿಕಾ, ಚಿಕ್ಕಣ್ಣ, ಕುರಿ ಪ್ರತಾಪ್‌, ರವಿಶಂಕರ್‌, ಸಾಧು ಕೋಕಿಲ ಮುಂತಾದವರು

* ಚೇತನ್‌ ನಾಡಿಗೇರ್‌

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.