ಸರ್ಕಾರದ ವಿರುದ್ಧ ಬಾವಿ ಸಮರ


Team Udayavani, Jun 3, 2017, 11:43 AM IST

sarkari-kelsa.jpg

ಬಾವಿ ಕಳೆದ್ಹೋಗಿದೆ … ಹಾಗಂತ ಅವನು ಹೇಳುತ್ತಿದ್ದಂತೆಯೇ ಎಲ್ಲರಿಗೂ ಆಶ್ಚರ್ಯ. ಅದು ಸುಳ್ಳು ಎನ್ನುತ್ತಾರೆ ಪೊಲೀಸರು. ಇಲ್ಲ ನಿಜ ಎನ್ನುತ್ತಾನೆ ಇವನು. ಇದ್ಯಾವುದೋ ಮೆಂಟ್ಲು ಕೇಸು ಅಂತ ಅವರು ದೂರು ದಾಖಲಿಸುವುದಕ್ಕೆ ನಿರಾಕರಿಸುತ್ತಾರೆ. ಇವನು ಕಂಪ್ಲೇಂಟ್‌ ರಿಜಿಸ್ಟರ್‌ ಆಗುವಂತೆ ನೋಡಿಕೊಳ್ಳುತ್ತಾನೆ. ಇಷ್ಟಕ್ಕೂ ಬಾವಿ ಕಳ್ಳತನವಾಗೋದಕ್ಕೆ ಸಾಧ್ಯವಾ? 

ಆ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದಕ್ಕೆ “ಸರ್ಕಾರಿ ಕೆಲಸ ದೇವರ ಕೆಲಸ’ ಚಿತ್ರ ನೋಡಬೇಕು. ಹೆಸರು ಕೇಳುತ್ತಿದ್ದಂತೆಯೇ, ಕಥೆ ಏನಿರಬಹುದು ಎಂಬ ಊಹೆ ಬರುವುದು ಸಹಜ. ಸಂಶಯವೇ ಬೇಡ. ಭ್ರಷ್ಟಾಚಾರದ ಬಗ್ಗೆ, ಅದರಲ್ಲೂ ಸರ್ಕಾರಿ ಕಚೇರಿಗಳಲ್ಲಿ ತಾಂಡವವಾಡುತ್ತಿರುವ ಲಂಚಾವತಾರದ ಬಗ್ಗೆ ಈ ಚಿತ್ರ ಸುತ್ತುತ್ತದೆ. ಇಲ್ಲೊಬ್ಬ ನಾಯಕನಿಗೆ, ಲಂಚ ಕೊಡುವುದಾಗಲೀ, ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳುವುದಾಗಲೀ ಇಷ್ಟವಿಲ್ಲ.

ಆದರೆ, ಅದು ಅನಿವಾರ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿಬಿಡುತ್ತದೆ. ಸರಿ, ಅಲೆಯ ವಿರುದ್ಧ ಈಜುವುದು ಕಷ್ಟ ಎಂದು ಅಲೆಯ ಜೊತೆಗೆ ಸೇರಿಕೊಳ್ಳುತ್ತಾನೆ. ಒಂದು ಬಾವಿ ಕಟ್ಟಿಸುವುದಕ್ಕೆ ಅನುಮತಿ ಬೇಕು ಎಂದು ಸಾವಿರಾರು ರೂಪಾಯಿ ಲಂಚ ಕೊಡುತ್ತಾನೆ. ಹಾಗೆ ಕೊಟ್ಟ ಲಂಚವನ್ನೇ ಅಸ್ತ್ರವಾಗಿಸಿಕೊಂಡು, ಇಡೀ ವ್ಯವಸ್ಥೆಯ ವಿರುದ್ಧ ಸಮರ ಸಾರುತ್ತಾನೆ. ಈ ಸಮರದಲ್ಲಿ ಶಾಸಕನಿಂದ ಪ್ರಾರಂಭಿಸಿ, ಸರ್ಕಾರದ ವಿವಿಧ ವಿಭಾಗಗಳ ಅಧಿಕಾರಿಗಳನು ಬೇಟೆಯಾಡುತ್ತಾನೆ.

ಇಲ್ಲಿ ಬಾವಿ ಕಳೆದ್ಹೋಗಿದೆ ಎನ್ನುವುದನ್ನು ವಿಡಂಬನಾತ್ಮಕವಾಗಿ ಹೇಳಲಾಗಿದೆ. ದೇವರ ಕೆಲಸವಾಗಬೇಕಿದ್ದ ಸರ್ಕಾರಿ ಕೆಲಸವು ಲಂಚಕೋರತನದಿಂದ ಎಷ್ಟೆಲ್ಲಾ ಹದಗೆಟ್ಟಿ ಹೋಗಿದೆ ಎಂಬುದನ್ನು ಹಲವು ಘಟನೆಗಳ ಮೂಲಕ ಹೇಳಲಾಗಿದೆ. ಹಾಗೆ ನೋಡಿದರೆ, ಈ ಕಥೆ ಹೊಸದೇನಲ್ಲ. “ಬಾವಿ ಕಳೆದುಹೋಗಿದೆ’ ತರಹದ ಕಥೆಗಳು ಬೇರೆ ಭಾಷೆಗಳಲ್ಲಿ ಸಿನಿಮಾ ಆಗಿ, ನಾಟಕಗಳಾಗಿ ಬಂದಿದೆ. ಕನ್ನಡ ಕಿರುತೆರೆಗೂ ಇದು ಹೊಸದಲ್ಲ.

ಕನ್ನಡ ಹಿರಿತೆರೆಯಲ್ಲಿ ಮೊದಲ ಬಾರಿಗೆ ಈ ಪ್ರಯತ್ನ ಮಾಡಲಾಗುತ್ತಿದೆ. ಕಥೆ ಕೇಳುವುದಕ್ಕೆ ಸ್ವಾರಸ್ಯಕರವಾಗಿದೆ. ಅದನ್ನು ಇನ್ನಷ್ಟು ಸಮರ್ಥವಾಗಿ ತೆರೆಯ ಮೇಲೆ ತಂದಿದ್ದರೆ, ಅದ್ಭುತ ವಿಡಂಬನಾತ್ಮಕ ಚಿತ್ರವಾಗುವ ಸಾಧ್ಯತೆ ಇತ್ತು. ಆದರೆ, ಸ್ವಲ್ಪ ನಿಧಾನವಾದ ನಿರೂಪಣೆಯಿಂದಾಗಿ ಕೆಲಸ ಕೆಡುತ್ತದೆ. ಹಾಗಂತ ನಿರ್ದೇಶಕ ರವೀಂದ್ರ ಬೇಡದ್ದನ್ನು ಹೇಳುವುದಾಗಲೀ, ಅವಶ್ಯಕವಿಲ್ಲದ್ದನ್ನು ತೋರಿಸುವುದಾಗಲೀ ಮಾಡುವುದಿಲ್ಲ. ಇಡೀ ಚಿತ್ರ ಎರಡು ಗಂಟೆ ಐದು ನಿಮಿಷಗಳಿಗೆಲ್ಲಾ ಮುಗಿದೇ ಹೋಗುತ್ತದೆ.

ಚಿತ್ರದ ಲೆಂಥ್‌ ಕಡಿಮೆ ಇದ್ದರೂ, ಹೇಳುವುದೆಲ್ಲಾ ನೇರಾನೇರಾ ಆದರೂ ಅದ್ಯಾಕೋ ನಿರೂಪಣೆ ಜಾಳುಜಾಳೆನಿಸುತ್ತದೆ. ಅದೇ ಕಾರಣಕ್ಕೆ ಚಿತ್ರದ ಆಶಯ, ಉದ್ದೇಶ ಚೆನ್ನಾಗಿದ್ದರೂ, ಏನೋ ಮಿಸ್‌ ಹೊಡೆಯುತ್ತಿರುವಂತೆ ಅನಿಸುವುದು ಹೌದು. ಆ ನಿಟ್ಟಿನಲ್ಲಿ ಚಿತ್ರತಂಡ ಇನ್ನಷ್ಟು ನಿಗಾವಹಿಸಬೇಕಿತ್ತು. ಅದರಲ್ಲೂ ಪೊಲೀಸ್‌ ಸ್ಟೇಷನ್‌ ದೃಶ್ಯಗಳೂ ಸೇರಿದಂತೆ ಇನ್ನಷ್ಟು ದೃಶ್ಯಗಳಿಗೆ ಕತ್ತರಿ ಹಾಕದ್ದಿರೆ, ಚಿತ್ರಕ್ಕೆ ಇನ್ನಷ್ಟು ವೇಗ ಸಿಗುತಿತ್ತೇನೋ? 

ಆದರೂ ಮೊದಲ ಚಿತ್ರದಲ್ಲಿ ಒಂದು ಬೇರೆ ತರಹದ ಪ್ರಯತ್ನ ಮಾಡಿರುವ ನಿರ್ದೇಶಕರಿಗೆ ಬೆನ್ನು ತಟ್ಟಬೇಕು. ರಂಗಾಯಣ ರಘು, ರಾಜು ತಾಳೀಕೋಟೆ, ರವಿಶಂಕರ್‌ ಗೌಡ, ಸಂಯುಕ್ತಾ ಮುಂತಾದ ಪ್ರತಿಭಾವಂತ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಎಲ್ಲರೂ ತಮಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಉಮೇಶ್‌ ಬಣಕಾರ್‌ ಒಮ್ಮೊಮ್ಮೆ ಅಂಬರೀಶ್‌ ಅವರನ್ನು ನೆನಪಿಸುತ್ತಾರೆ. ಆಶೀಶ್‌ ವಿದ್ಯಾರ್ಥಿ ಒಂದೇ ಹಾಡಿಗೆ ಮಾಯವಾಗುತ್ತಾರೆ. “ಮಠ’ ಗುರುಪ್ರಸಾದ್‌ ಅವರ ಸಂಭಾಷಣೆ ಅಲ್ಲಲ್ಲಿ ಚುರುಕು ಮುಟ್ಟಿಸುತ್ತದೆ. ಇನ್ನು ಅರ್ಜುನ್‌ ಜನ್ಯ ಸಂಗೀತ ಸಂಯೋಜನೆಯಲ್ಲಿ ಎರಡು ಹಾಡುಗಳ ಕಾಡುತ್ತವೆ.

ಚಿತ್ರ: ಸರ್ಕಾರಿ ಕೆಲಸ ದೇವರ ಕೆಲಸ
ನಿರ್ಮಾಣ: ಅಶ್ವಿ‌ನಿ ರಾಮ್‌ಪ್ರಸಾದ್‌
ನಿರ್ದೇಶನ: ರವೀಂದ್ರ
ತಾರಾಗಣ: ರವಿಶಂಕರ್‌ ಗೌಡ, ಸಂಯುಕ್ತ ಹೊರನಾಡು, ರಂಗಾಯಣ ರಘು, ರಾಜು ತಾಳೀಕೋಟೆ ಮುಂತಾದವರು

* ಚೇತನ್‌ ನಾಡಿಗೇರ್‌

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.