ಕೋವಿಡ್-19 ಯುದ್ಧ ಗೆಲ್ಲಲಿದೆ ಭಾರತ

ಲಂಡನ್‌ ನಿವಾಸಿ ಪವನ್‌ ಕುಮಾರ್‌ ಮೂಡ್ಲಕಟ್ಟೆ ವಿಶ್ವಾಸ

Team Udayavani, Apr 17, 2020, 11:59 AM IST

ಕೊರೊನಾ ಯುದ್ಧ ಗೆಲ್ಲಲಿದೆ ಭಾರತ

ಕುಂದಾಪುರ: ಪ್ರಪಂಚದ ಅಷ್ಟೂ ರಾಷ್ಟ್ರಗಳು ಕೋವಿಡ್-19 ವಿರುದ್ಧ ನಡೆಸುತ್ತಿರುವ ಸೆಣಸಾಟ ನೋಡಿದಾಗ ಭಾರತ ಗೆದ್ದು ಬಂದು ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಲಂಡನ್‌ ಜಿಡಿಪಿ ಶೇ. -1ಕ್ಕೆ ಇಳಿಯಲಿದ್ದರೆ, ಭಾರತದಲ್ಲಿ ಶೇ. +1 ಇರಲಿದೆ ಎನ್ನುವುದು ಆರ್ಥಿಕ ತಜ್ಞರ ಅಂದಾಜು. ಭಾರತದಲ್ಲಿ ಜನಶಕ್ತಿಯಿದೆ, ಪ್ರಾಕೃತಿಕ ಸಂಪನ್ಮೂಲವಿದೆ ಹಾಗೂ ಸಮರ್ಥ ನಾಯಕತ್ವ ಇದೆ. ಕುಂದಾಪುರ ನಗರದ ಫೆರಿ ರಸ್ತೆಯ ಪ್ರಭಾಕರ ಟೈಲ್ಸ್‌ ಸಮೀಪದ ನಿವಾಸಿ, ಪ್ರಸ್ತುತ ಲಂಡನ್‌ನ ಲೂಟನ್‌ನಲ್ಲಿ ಐಟಿ ಉದ್ಯೋಗಿಯಾಗಿರುವ ಪವನ್‌ ಕುಮಾರ್‌ ಮೂಡ್ಲಕಟ್ಟೆ ಅವರ ಖಚಿತ ವಿಶ್ವಾಸವಿದು.

ಹೊರ ಬಂದರೆ ಬಂಧನ
ಇಲ್ಲಿ ನಿತ್ಯ ಸಂಜೆ 5 ಗಂಟೆಗೆ ಪ್ರಧಾನಿ ಕಚೇರಿಯಿಂದ ದೇಶದ ಚಿತ್ರಣ ನೀಡಲಾಗುತ್ತದೆ. ಲಾಕ್‌ಡೌನ್‌ ಇದೆ. ಅಗತ್ಯ ವಸ್ತುಗಳಿಗಾಗಿ ಮಾತ್ರ ಹೊರಬರಬಹುದು. ಅನಗತ್ಯ ಬೀದಿಗೆ ಬಂದರೆ 1 ಸಾವಿರ ಪೌಂಡ್‌ (95 ಸಾವಿರ ರೂ.) ದಂಡ ವಿಧಿಸುತ್ತಾರೆ. ಕ್ವಾರಂಟೈನ್‌ನವರು ಹೊರಬಂದರೆ ಬಂಧಿಸಿ ಜೈಲಿಗಟ್ಟುತ್ತಾರೆ. ಅಗತ್ಯ ಸೇವೆಗಳ ಉದ್ಯೋಗಿಗಳಿಗೆ ಪಾಸ್‌ ನೀಡಲಾಗಿದೆ ಎಂದು ವಿವರಿಸಿದರು.

ಮೀಸಲು
ದಿನಸಿ ಮಾಲ್‌ಗ‌ಳಲ್ಲಿ ಬೆಳಗಿನ 1 ಗಂಟೆ ಅಂಗವಿಕಲರಿಗೆ, ಹಿರಿಯ ನಾಗರಿಕರಿಗೆ, ವೈದ್ಯ, ನರ್ಸ್‌ ಮೊದಲಾದ ಅಗತ್ಯ ಸೇವೆಗಳ ಸಿಬಂದಿ ವ್ಯವಹಾರಕ್ಕೆ ಮೀಸಲು. ಆಮೇಲೆ ಸಾರ್ವಜನಿಕರಿಗೆ. 20 ಜನರಿಗೆ ಮಾತ್ರ ಪ್ರವೇಶಾವಕಾಶ. ಅಂತರ ಕಾಯ್ದುಕೊಳ್ಳಬೇಕು. ಬಸ್ಸು ಓಡಾಟ ಕಡಿಮೆ ಮಾಡಲಾಗಿದ್ದು ಕಚೇರಿ ಸಮಯಕ್ಕೆ ಮಾತ್ರ ಮೀಸಲಿಡಲಾಗಿದೆ.

ಸರಕಾರದಿಂದ ವೇತನ
ಆರ್ಥಿಕ ಪರಿಸ್ಥಿತಿ ಹದಗೆಟ್ಟ ಕಾರಣ, ಉದ್ಯೋಗ ಕಡಿತ ಮಾಡಬಾರದು ಎಂದು ಸೂಚಿಸಿ, ಎಲ್ಲ ಉದ್ಯೋಗಿಗಳಿಗೆ ಸರಕಾರ ಫ‌ರ್ಲೋ ಘೋಷಿಸಿದ್ದು ಸರಕಾರದಿಂದಲೇ 2,500 ಪೌಂಡ್‌ ಮೀರದಂತೆ ಶೇ. 80 ವೇತನವನ್ನು ನೀಡಲಾಗುತ್ತದೆ. ಇದನ್ನು ಕಂಪನಿಗಳಿಗೆ 3 ತಿಂಗಳಿಗೆ ಅನುದಾನವಾಗಿ ನೀಡಲಾಗುತ್ತದೆ ಎಂದು ವಿವರಿಸಿದರು.

ಭಾರತ ಅಗ್ರಣಿ
ಭವಿಷ್ಯದಲ್ಲಿ ಆರ್ಥಿಕತೆಗೆ ಕೊರೊನಾ ನೀಡಿದ ಹೊಡೆತವನ್ನು ಸಹಿಸಿಕೊಳ್ಳುವ ಶಕ್ತಿ ಭಾರತಕ್ಕೆ ಇದೆ. ಆದರೆ ಜನ ಸ್ವಾವಲಂಬಿಗಳಾಗಬೇಕು. ಭಾರತದಲ್ಲಿ ಔಷಧ ಉತ್ಪಾದಿಸಿ ವಿದೇಶಕ್ಕೆ ಕಳುಹಿಸಲಾಗುತ್ತದೆ. ಎಲ್ಲ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಭಾರತದಲ್ಲೇ ತಯಾರಿಸಿ ಮಾರುಕಟ್ಟೆ ಮಾಡಬೇಕು. ಜನರೂ ಇದಕ್ಕೆ ಒಗ್ಗಿಕೊಳ್ಳಬೇಕು. ಕೊಳ್ಳುಬಾಕತನಕ್ಕೆ ಈಗ ಹಾಕಿಕೊಂಡ ಮಿತಿಯನ್ನು ಮುಂದುವರಿಸಬೇಕು. ಈ ಸ್ಥಿತಿಯಲ್ಲಿ ನಮ್ಮ ಆಪದಾºಂಧವರಾಗಿದ್ದ ನಮ್ಮ ಪಕ್ಕದ ಅಂಗಡಿಗಳನ್ನು ಮುಂದೆಯೂ ಪ್ರೋತ್ಸಾಹಿಸಬೇಕು. ದೇಶದೊಳಗೇ ಹಣ ಓಡಾಡಿದರೆ ಆರ್ಥಿಕತೆ ಚಿಗಿತುಕೊಳ್ಳುತ್ತದೆ. ವಿದೇಶದಲ್ಲಿ ಉದ್ಯಮಗಳಿಗೆ ಶೇ. 1, 2ಕ್ಕಿಂತ ಕಡಿಮೆ ಬಡ್ಡಿಯಲ್ಲಿ ಸಾಲ ದೊರೆಯುತ್ತದೆ. ಭಾರತದಲ್ಲಿ ಶೇ. 15-20 ಬಡ್ಡಿಗೆ ಸಾಲ ಮಾಡಿ ಉದ್ಯಮ ಮಾಡುವುದು ಹೇಗೆ? ಆಮದು ಸುಂಕ ಭರಿಸಿ ಖರೀದಿಸುವುದು ಹೇಗೆ? ಈ ನಿಟ್ಟಿನಲ್ಲೂ ಸರಕಾರವೂ ಸ್ಪಂದಿಸಬೇಕು ಎಂದು ಸಲಹೆ ನೀಡಿದ್ದಾರೆ.

ಸ್ಥಳೀಯ ವ್ಯವಹಾರ ಬೆಂಬಲಿಸಿ
ಲಾಕ್‌ಡೌನ್‌ ದಿನಗಳಲ್ಲಿ ಸರಕಾರ ಹೇಳಿದ್ದನ್ನು ಕೇಳಬೇಕು, ಅದು ನಮಗೆ ಒಳ್ಳೆಯದು. ಅದಾದ ಅನಂತರ ನಮ್ಮ ಸ್ಥಳೀಯ ಆರ್ಥಿಕ ವ್ಯವಹಾರವನ್ನು ಬೆಂಬಲಿಸಬೇಕು. ಅದು ದೇಶಕ್ಕೆ ಒಳ್ಳೆಯದು. ಭಾರತ ಈ ಹೊಡೆತ ತಾಳಿಕೊಳ್ಳಲಿದೆ.
-ಪವನ್‌ ಕುಮಾರ್‌ ಮೂಡ್ಲಕಟ್ಟೆ, ಲಂಡನ್‌

ಟಾಪ್ ನ್ಯೂಸ್

1-qweqwqew

Congress ಪಕ್ಷವನ್ನು ಎರಡನೇ ಬಾರಿ ತೊರೆದ ಲವ್ಲಿ; ಮತ್ತೆ ಬಿಜೆಪಿ ಸೇರ್ಪಡೆ

Why Modi doesn’t talk about ladies now: Priyanka Gandhi

Davanagere; ಮೋದಿ ಯಾಕೆ ಬಲಾತ್ಕಾರಕ್ಕೊಳಗಾದ ಮಹಿಳೆಯರ ಬಗ್ಗೆ ಮಾತನಾಡಲ್ಲ: ಪ್ರಿಯಾಂಕಾ ಗಾಂಧಿ

1-wewqewewq

H.D. Revanna ಬಂಧಿಸಿದ ಎಸ್ ಐಟಿ; ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್

1-qwweqwewq

Tirunelveli; ನಾಪತ್ತೆಯಾಗಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ

POCSO Case: 9ನೇ ತರಗತಿ ಬಾಲಕಿಗೆ ಅಶ್ಲೀಲ ವಿಡಿಯೋ ತೋರಿಸಿದ ಶಿಕ್ಷಕ; ಪೋಕ್ಸೋ ಕೇಸ್‌ ದಾಖಲು

POCSO Case: 9ನೇ ತರಗತಿ ಬಾಲಕಿಗೆ ಅಶ್ಲೀಲ ವಿಡಿಯೋ ತೋರಿಸಿದ ಶಿಕ್ಷಕ; ಪೋಕ್ಸೋ ಕೇಸ್‌ ದಾಖಲು

Priyanka Gandhi Slams PM Modi in Banaskantha Rally

ರಾಹುಲ್ ಸಾಮಾನ್ಯ ಜನರ ಕಷ್ಟ ಕೇಳಿದ್ದಾರೆ, ಆದರೆ ಮೋದಿ ಅರಮನೆಯಲ್ಲಿ ಕುಳಿತಿದ್ದಾರೆ:ಪ್ರಿಯಾಂಕಾ

Allu Arjun: ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿ ದಾಖಲೆ ಬರೆದ ʼಪುಷ್ಪ ಪುಷ್ಪʼ ಹಾಡು

Allu Arjun: ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿ ದಾಖಲೆ ಬರೆದ ʼಪುಷ್ಪ ಪುಷ್ಪʼ ಹಾಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಂಗಳೂರು: 4 ತಿಂಗಳಲ್ಲಿ ಮೂರ್ತಿ ಸ್ಥಾಪನೆ ಪೂರ್ಣಗೊಳಿಸಲು ಆದೇಶ

ಬೆಂಗಳೂರು: 4 ತಿಂಗಳಲ್ಲಿ ಮೂರ್ತಿ ಸ್ಥಾಪನೆ ಪೂರ್ಣಗೊಳಿಸಲು ಆದೇಶ

Udupi ಇನ್ನೂ ನಡೆಯದ ಟೆಂಡರ್‌ ಪ್ರಕ್ರಿಯೆ; ರಾಜ್ಯದಲ್ಲಿ ಅಗ್ನಿಶಾಮಕ ವಾಹನ ಕೊರತೆ

Udupi ಇನ್ನೂ ನಡೆಯದ ಟೆಂಡರ್‌ ಪ್ರಕ್ರಿಯೆ; ರಾಜ್ಯದಲ್ಲಿ ಅಗ್ನಿಶಾಮಕ ವಾಹನ ಕೊರತೆ

Road Mishap ಮಣಿಪಾಲ: ಕಾರು ಢಿಕ್ಕಿಯಾಗಿ ಪಾದಚಾರಿ ಸಾವು

Road Mishap ಮಣಿಪಾಲ: ಕಾರು ಢಿಕ್ಕಿಯಾಗಿ ಪಾದಚಾರಿ ಸಾವು

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

Theme Park Karkala ಅವಶೇಷ‌ ತೆರವಿಗೆ ಕೋರ್ಟ್‌ ಆದೇಶ; ಜಿಲ್ಲಾಧಿಕಾರಿ ತಡೆ!

Theme Park Karkala ಅವಶೇಷ‌ ತೆರವಿಗೆ ಕೋರ್ಟ್‌ ಆದೇಶ; ಜಿಲ್ಲಾಧಿಕಾರಿ ತಡೆ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwqew

Congress ಪಕ್ಷವನ್ನು ಎರಡನೇ ಬಾರಿ ತೊರೆದ ಲವ್ಲಿ; ಮತ್ತೆ ಬಿಜೆಪಿ ಸೇರ್ಪಡೆ

Why Modi doesn’t talk about ladies now: Priyanka Gandhi

Davanagere; ಮೋದಿ ಯಾಕೆ ಬಲಾತ್ಕಾರಕ್ಕೊಳಗಾದ ಮಹಿಳೆಯರ ಬಗ್ಗೆ ಮಾತನಾಡಲ್ಲ: ಪ್ರಿಯಾಂಕಾ ಗಾಂಧಿ

kejriwal 2

AAP ಚುನಾವಣ ಪ್ರಚಾರ ಹಾಡನ್ನು ಅನುಮೋದಿಸಿದ ಆಯೋಗ; ಕೆಲ ಮಾರ್ಪಾಡು

1-wewqewewq

H.D. Revanna ಬಂಧಿಸಿದ ಎಸ್ ಐಟಿ; ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್

1-qwweqwewq

Tirunelveli; ನಾಪತ್ತೆಯಾಗಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.