ಬಂದಿದ್ದನ್ನು ಸ್ವೀಕರಿಸಬೇಕು ಅಷ್ಟೇ…
Team Udayavani, May 9, 2020, 7:00 AM IST
ಬೆಳಗಿನಿಂದ ಸಂಜೆಯವರೆಗೆ ಶೂಟಿಂಗ್, ಅಥವಾ ಸಿನೆಮಾಕ್ಕೆ ಸಂಬಂಧಿಸಿದ ಇನ್ಯಾವುದೋ ಕೆಲಸ, ಶೂಟಿಂಗ್ ಇಲ್ಲ ಅಂದ್ರೆ, ಮನೆಯಲ್ಲಿ ರೆಸ್ಟ್ ಮಾಡುವುದು, ಗೆಳೆಯರ- ಬಂಧುಗಳ ಮನೆಗೆ ಭೇಟಿ ಕೊಡುವುದು, ಬೆಳಗ್ಗೆ- ಸಂಜೆಯ ವೇಳೆ, ಪಾರ್ಕ್ನಲ್ಲಿ ವಾಕ್ ಮಾಡುವುದು- ಮೊನ್ನೆಮೊನ್ನೆ ತನಕ ಹೀಗೆಲ್ಲಾ ದಿನ ಕಳೆಯುತ್ತಾ ಇತ್ತು. ಆದರೆ, ಕೋವಿಡ್ ಕಾರಣಕ್ಕೆ ಲಾಕ್ ಡೌನ್ ಘೋಷಣೆಯಾದದ್ದೇ ತಡ; ದಿನದ 24 ಗಂಟೆಯೂ ಮನೆಯೊಳಗೇ ಉಳಿಯಬೇಕಾದ ಅನಿವಾರ್ಯತೆ ಜೊತೆಯಾಯಿತು. ಬೆಳಗ್ಗೆ ಎದ್ದ ತಕ್ಷಣ, ಒಂದು ಗಂಟೆಯ ಕಾಲ ಯೋಗ ಮಾಡುವುದು, ನಂತರ ಸ್ನಾನ-ಪೂಜೆ, ನಂತರ ತಿಂಡಿ. ಇಷ್ಟಾದ ಮೇಲೆ, ಓದಲು ಕೂರುವುದೇ ನನ್ನ ಈಗಿನ ರೂಟೀನ್ ಆಗಿದೆ. ನಟ ದರ್ಶನ್ ಅವರಿಗೆಂದು, ಪೌರಾಣಿಕ ಕಥೆಯೊಂದರ ಸ್ಕ್ರಿಪ್ಟ್ ಮಾಡಿದ್ದಾರೆ. ಅದನ್ನು ಓದುವುದು, ಅದರ ಪುನರ್ ಪರಿಶೀಲನೆ ಕಾರ್ಯದಲ್ಲಿ ತೊಡಗುವುದು, ಅಧ್ಯಾತ್ಮಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದುವುದು, ನನ್ನ ದಿನಚರಿಯ ಭಾಗ ಆಗಿದೆ.
ಈ ಕೋವಿಡ್ ಕಾಟ ಇಲ್ಲದೇ ಹೋಗಿದ್ರೆ, ಇಷ್ಟು ಹೊತ್ತಿಗೆ “”ಮದಕರಿ ನಾಯಕ” ಸಿನೆಮಾದ ಶೂಟಿಂಗ್ ನಲ್ಲಿ ಇರ್ತಿದ್ದೆ. ಆದ್ರೆ ಕೊರೊನಾ ಬಂದದ್ದೇ, ಎಲ್ಲಾ ಲೆಕ್ಕಾಚಾರಗಳೂ ಉಲ್ಟಾ ಆಗಿಬಿಟ್ಟವು. ಕಳೆದ 45 ದಿನಗಳಿಂದ ಮನೆಯಲ್ಲೇ ಇದ್ದೇನೆ. ಮನೆಯಲ್ಲೇ ಕುಟುಂಬದವರೆಲ್ಲಾ ಇರ್ತೇವೆ ಅಂದರೆ, ಟೈಮ್ ಪಾಸ್ಗೆ ಅಂತ ಎಲ್ಲರೂ ಸೀರಿಯಲ್ ಮೊರೆ ಹೋಗುವುದು
ಸಾಮಾನ್ಯ ತಾನೇ? ಆದ್ರೆ, ಈಗ ಸೀರಿಯಲ್ ಶೂಟಿಂಗ್ ಕೂಡ ನಿಂತುಹೋಗಿದ್ದರಿಂದ, ಅದನ್ನೂ ನೋಡುತ್ತಿಲ್ಲ. ಬದಲಾಗಿ, ಕ್ಲಾಸಿಕ್ ಅನ್ನಿಸಿದ ಸಿನಿಮಾ ನೋಡ್ತಾ ಇದ್ದೇನೆ. ನೆಟ್ ಫಿಕ್ಸ್, ಅಮೆಜಾನ್ ನಲ್ಲೆಲ್ಲ ಒಳ್ಳೊಳ್ಳೆಯ ಸಿನಿಮಾ ನೋಡಬಹುದು. ಕುಟುಂಬದ ಎಲ್ಲರ ಜೊತೆ ಕೂತು ಸಿನಿಮಾದ ಬಗ್ಗೆ ಚರ್ಚೆ ಮಾಡುವುದು, ಸಮಯ ಸಿಕ್ಕಾಗೆಲ್ಲಾ ಓದುವುದು- ಹೊಸ ಐಡಿಯಾ ಹೊಳೆದರೆ ಅದನ್ನು ಬರೆದು ಇಡುವುದು-ಇಂಥ ಕೆಲಸಗಳ ಮಧ್ಯೆಯೇ ದಿನಗಳು ಕಳೆಯುತ್ತಿವೆ. ನಿಜ ಹೇಳಬೇಕು ಅಂದರೆ, ಕೋವಿಡ್ ನೆಪದಲ್ಲಿ ಬಂದಿದೆಯಲ್ಲ… ಆ ಥರದ
ಅವ್ಯವಸ್ಥೆ ಯಾವತ್ತೂ ಆಗಿರಲಿಲ್ಲ. ಹಾಗಂತ ನಾವು ಏನೂ ಮಾಡುವ ಸ್ಥಿತಿಯಲ್ಲಿ ಇಲ್ಲ. ಬಂದಿದ್ದನ್ನು ಸ್ವೀಕರಿಸಬೇಕು ಅಷ್ಟೇ…
● ಶ್ರೀನಿವಾಸ ಮೂರ್ತಿ , ಹಿರಿಯ ಚಿತ್ರನಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ