ಕೋವಿಡ್ 19 ಔಷಧ-ಕೋವಿಫಾರ್: ಮೊದಲ ಹಂತದಲ್ಲಿ ಮಹಾರಾಷ್ಟ್ರ ಸೇರಿ ಐದು ರಾಜ್ಯಗಳಿಗೆ ರವಾನೆ
ವಯಸ್ಕರು ಮತ್ತು ಮಕ್ಕಳಿಗೆ ಮೊದಲ ದಿನ 200 ಮಿಲಿ ಗ್ರಾಂ ಔಷಧ ನೀಡಬೇಕು
Team Udayavani, Jun 25, 2020, 6:00 PM IST
ನವದೆಹಲಿ:ಕೋವಿಡ್ 19 ವೈರಸ್ ಪೀಡಿತರನ್ನು ಗುಣಮುಖರಾಗಿಸಲು ಪರೀಕ್ಷಾರ್ಥವಾಗಿ ರೆಮ್ ಡಿಸಿವಿರ್ ಔಷಧ ತಯಾರಿಸಲು ಹಾಗೂ ಮಾರುಕಟ್ಟೆಗೆ ಬಿಡುಗಡೆ ಮಾಡಲು ಹೈದರಾಬಾದ್ ಮೂಲದ ಔಷಧ ತಯಾರಿಕಾ ಕಂಪನಿ ಹೆಟೇರೋಗೆ ಅನುಮತಿ ದೊರೆತಿದ್ದು, ಈ ಹಿನ್ನೆಲೆಯಲ್ಲಿ ಮೊದಲ ಹಂತವಾಗಿ ಮಹಾರಾಷ್ಟ್ರ ಮತ್ತು ದೆಹಲಿ ಸೇರಿದಂತೆ ಐದು ರಾಜ್ಯಗಳಿಗೆ 20ಸಾವಿರ ಬಾಟಲಿ ಔಷಧಿಯನ್ನು ರವಾನಿಸುವುದಾಗಿ ವರದಿ ತಿಳಿಸಿದೆ.
ಭಾರತದಲ್ಲಿ ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಅತೀ ಹೆಚ್ಚು ಕೋವಿಡ್ 19 ಪ್ರಕರಣ ಪತ್ತೆಯಾಗಿದೆ. Covifor in india ಬ್ರ್ಯಾಂಡ್ ಹೆಸರಿನಲ್ಲಿ ಈ ಔಷಧವನ್ನು ಬಿಡುಗಡೆ ಮಾಡಿದೆ. ಗುಜರಾತ್ ಮತ್ತು ತಮಿಳುನಾಡು, ಹೈದರಾಬಾದ್ ಕೂಡಾ ಔಷಧವನ್ನು ಪಡೆದುಕೊಳ್ಳಲಿದೆ ಎಂದು ಹೇಳಿದೆ.
ಹೆಟೇರೋ ಪ್ರಕಟಣೆ ಪ್ರಕಾರ, 100 ಮಿಲಿಗ್ರಾಂ ಬಾಟಲಿ ಔಷಧಕ್ಕೆ 5,400 ರೂಪಾಯಿ ಎಂದು ತಿಳಿಸಿದೆ. ವಯಸ್ಕರು ಮತ್ತು ಮಕ್ಕಳಿಗೆ ಮೊದಲ ದಿನ 200 ಮಿಲಿ ಗ್ರಾಂ ಔಷಧ ನೀಡಬೇಕಾಗಿದ್ದು, ನಂತರ ಐದು ದಿನಗಳವರೆಗೆ 100 ಗ್ರಾಂನಂತೆ ಔಷಧ ನೀಡಲು ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದೆ.
ಕೋಲ್ಕತಾ, ಇಂದೋರ್, ಭೋಪಾಲ್, ಲಕ್ನೋ, ಪಾಟ್ನಾ, ಭುವನೇಶ್ವರ್, ರಾಂಚಿ, ವಿಜಯವಾಡ, ಕೊಚ್ಚಿ, ತಿರುವನಂತಪುರಂ ಮತ್ತು ಗೋವಾಕ್ಕೆ 2ನೇ ಹಂತದಲ್ಲಿ ಔಷಧ ರವಾನಿಸುವುದಾಗಿ ತಿಳಿಸಿದೆ. ಇನ್ನು ಮೂರು ನಾಲ್ಕು ವಾರಗಳಲ್ಲಿ ಕಂಪನಿ ಒಂದು ಲಕ್ಷ ಔಷಧದ ಬಾಟಲಿ ಉತ್ಪಾದಿಸುವ ಗುರಿ ಹೊಂದಿರುವುದಾಗಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್