ನಾಲ್ಕು ನಿಮಿಷಗಳಲ್ಲಿ ಪೇಪರ್‌ ಕಟ್ಟಿಂಗ್‌ ಚಿತ್ರ ರಚಿಸಿದ ಚಂದನ್‌

ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ಸ್ಥಾನ 

Team Udayavani, Mar 28, 2019, 11:22 AM IST

28-March-3

ಕಲಾವಿದ ಚಂದನ್‌ ರಚಿಸಿದ ಸ್ವಾಮಿ ವಿವೇಕಾನಂದರ, ವೀರೇಂದ್ರ ಹೆಗ್ಗಡೆಯವರ ಪೇಪರ್‌ ಕಟ್ಟಿಂಗ್‌ ಆರ್ಟ್‌

ಮಹಾನಗರ : ಪೇಪರ್‌ ಕಟ್ಟಿಂಗ್‌ ಯುವ ಕಲಾವಿದ ಬಿಜೈ ನಿವಾಸಿ ಚಂದನ್‌ ಸುರೇಶ್‌ ಅವರು ಇಂಡಿಯಾ ಬುಕ್‌ ಆಫ್‌ ರೇಕಾರ್ಡ್‌ನಲ್ಲಿ ಟಾಪ್‌ 100ರಲ್ಲಿ ಸ್ಥಾನ ಪಡೆದು ಕೊಂಡಿದ್ದಾರೆ.
ಮೂಲತಃ ತುಮಕೂರಿನವರಾದ ಉದ್ಯಮಿ ಟಿ.ಆರ್‌. ಸುರೇಶ್‌, ಜಿ.ಆರ್‌. ಸವಿತಾ ದಂಪತಿ ಪುತ್ರ ಚಂದನ್‌ ಸುರೇಶ್‌ ಅವರು ಹತ್ತು ವರ್ಷಗಳಿಂದ ನಗರದ ಬಿಜೈಯಲ್ಲಿ ನೆಲೆಸಿದ್ದಾರೆ. ಬೆಸೆಂಟ್‌ ಸಂಧ್ಯಾ ಕಾಲೇಜಿನಲ್ಲಿ ಪದವಿ ಮಾಡುತ್ತಿರುವ ಇವರು ಬೆಳಗ್ಗಿನ ಜಾವ ಯುಪಿಎಸ್ಸಿ ಪರೀಕ್ಷೆಗೆ ಕೋಚಿಂಗ್‌ಗೆ ಹೋಗುತ್ತಾರೆ. ಈ ನಡುವೆ ತನ್ನೊಳಗಿರುವ ಕಲೆಯನ್ನು ಪ್ರದರ್ಶಿಸಲು ಸಿಗುವ ಅವಕಾಶಗಳನ್ನು ಸದ್ಭಳಕೆ ಮಾಡಿಕೊಂಡು ಇದೀಗ ಐದು ದೇಶದ 13,000 ಸ್ಪರ್ಧಿಗಳು ಭಾಗವಹಿಸಿದ್ದ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ನಾಲ್ಕು ನಿಮಿಷಗಳಲ್ಲಿ ಪೇಪರ್‌ ಕಟ್ಟಿಂಗ್‌ ಚಿತ್ರ ರಚಿಸಿ 100ರೊಳಗೆ ಸ್ಥಾನ ಪಡೆದುಕೊಂಡಿದ್ದಾರೆ.
ಚಂದನ್‌ ಅವರು ಯಾವುದೇ ಬಣ್ಣಗಳನ್ನು ಬಳಸಿ ಚಿತ್ರ ರಚಿಸುವುದಿಲ್ಲ. ಕಪ್ಪು ಬಣ್ಣದ ಪೇಪರ್‌ ಮೇಲೆ ಬಿಳಿ ಹಾಳೆಯನ್ನಿಟ್ಟು ಬ್ಲೇಡ್‌ ಸಹಾಯದಿಂದ ಕತ್ತರಿಸುವ ಮೂಲಕ ಸುಂದರವಾದ ಚಿತ್ರಗಳನ್ನು ರಚಿಸುತ್ತಾರೆ. ದೇಶದ ಎರಡನೇ, ರಾಜ್ಯದ ಮೊದಲ ಪೇಪರ್‌ ಕಟ್ಟಿಂಗ್‌ ಅಥವಾ ಸ್ಟೆನ್ಸಿಲ್‌ ಆರ್ಟ್‌ ಕಲಾವಿದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಾರ್‌ಸ್ಟ್ರೀಟ್‌ನ ಸ್ವರೂಪ ಅಧ್ಯಯನ ಕೇಂದ್ರದಲ್ಲಿ ಹೈಸ್ಕೂಲ್‌ ಮುಗಿಸಿದ್ದ ಚಂದನ್‌ ಅವರು ಶಿಕ್ಷಕ ಗೋಪಾಡ್ಕರ್‌ ಅವರಿಂದ ಪ್ರಾರಂಭಿಕ ತರಬೇತಿ ಪಡೆದಿದ್ದರು. ಬಳಿಕ ಸ್ವ ಆಸಕ್ತಿಯಿಂದ ಕಲೆಯನ್ನು ಬೆಳೆಸುತ್ತಾ ಒಂದು ವರ್ಷದಲ್ಲಿ 600ಕ್ಕೂ ಅಧಿಕ ಚಿತ್ರಗಳನ್ನು ಪೇಪರ್‌ ಕಟ್ಟಿಂಗ್‌ ಮೂಲಕ ರಚಿಸಿದ್ದಾರೆ. ಅಲ್ಲದೆ ದೇಶದ ವಿವಿಧ ಭಾಗಗಳಲ್ಲಿ ನಾಲ್ಕು ನಿಮಿಷಗಳಲ್ಲಿ ಪೇಪರ್‌ ಕಟ್ಟಿಂಗ್‌ ಚಿತ್ರ ಬಿಡಿಸಿ ಎಲ್ಲರಿಂದ ಶಭಾಷ್‌ ಅನಿಸಿಕೊಂಡಿದ್ದಾರೆ.
ಪ್ರಧಾನಿ ಮೋದಿಯಿಂದ ಪ್ರಶಂಸೆ
ಕಳೆದ ವಿಧಾನಸಭಾ ಚುನಾವಣೆ ವೇಳೆ ಪ್ರಚಾರಕ್ಕಾಗಿ ಮಂಗಳೂರಿಗೆ ಆಗಮಿಸಿದ್ದ ನರೇಂದ್ರ ಮೋದಿ ಅವರ ಮುಂಭಾಗದಲ್ಲಿ ತನ್ನ ಕಲೆ ಪ್ರದರ್ಶಿಸಿದ್ದ ಚಂದನ್‌ ಅವರಿಗೆ ಮೋದಿ ಅವರಿಂದ ಪ್ರಶಂಸನ ಪತ್ರ ಲಭಿಸಿದೆ. ಕಳೆದ ವರ್ಷ ಸಚಿನ್‌ ತೆಂಡುಲ್ಕರ್‌ ಅವರ ಹುಟ್ಟುಹಬ್ಬಕ್ಕೆ ಮೊದಲ ಚಿತ್ರವಾಗಿ ಸಚಿನ್‌ ಅವರ ಚಿತ್ರವನ್ನು ಬಿಡಿಸಿ ಟ್ವೀಟ್‌ ಮಾಡಿದ್ದರು. ವಿವಿಧ ಗಣ್ಯರಿಂದ ಮೆಚ್ಚುಗೆ ಗಳಿಸಿದ್ದಾರೆ.
ಏನಿದು ಪೇಪರ್‌ ಕಟ್ಟಿಂಗ್‌ ಆರ್ಟ್‌
ಪೇಪರ್‌ ಶೀಟ್‌ಗಳನ್ನು ಕತ್ತರಿಸಿ ಚಿತ್ರ ರಚಿಸುವುದರಿಂದ ಇದಕ್ಕೆ ಪೇಪರ್‌ ಕಟ್ಟಿಂಗ್‌ ಆರ್ಟ್‌ ಎಂದು ಹೆಸರು ಬಂದಿದೆ. ಹೆಚ್ಚಾಗಿ ಕಪ್ಪು ಮತ್ತು ಬಳಿ ಬಣ್ಣದಲ್ಲಿ ಪೇಪರ್‌ ಕಟ್ಟಿಂಗ್‌ ಆರ್ಟ್‌ ಕಾಣಸಿಗುತ್ತದೆ. ಈಗ ಪ್ರಚಲಿತದಲ್ಲಿರುವ ತಂತ್ರಜ್ಞಾನ ಆಧಾರಿತ ಸ್ಟಿಕ್ಕರ್‌ ಕಟ್ಟಿಂಗ್‌ನ ಇನ್ನೊಂದು ರೂಪವೇ ಪೇಪರ್‌ ಕಟ್ಟಿಂಗ್‌ ಆರ್ಟ್‌ ಎನ್ನಬಹುದು. ಮೊದಲಿಗೆ ಬಿಳಿಯ ಕಾಗದಲ್ಲಿ ವ್ಯಕ್ತಿಯ ಚಿತ್ರವನ್ನು ರಚಿಸಿ ಅದನ್ನು ಕಪ್ಪು ಪೇಪರ್‌ ಮೇಲೆ ಚಾಕಚಕ್ಯತೆಯಿಂದ ಬ್ಲೇಡ್‌ನಿಂದ ಕತ್ತರಿಸಿದರೆ ಸುಂದರವಾಗ ಸ್ಟೆನ್ಸಿಲ್‌ ಆರ್ಟ್‌ ಕಾಣಲು ಸಿಗುತ್ತದೆ. ಆರಂಭದಲ್ಲಿ ಬಿಳಿ ಕಾಗದಲ್ಲಿ ಸ್ಕೆಚ್‌ ಮಾಡಿ ಚಿತ್ರ ರಚಿಸಬಹುದಾಗಿದ್ದು, ಕಲೆಯಲ್ಲಿ ಹಿಡಿತ ಸಾಧಿಸಿದರೆ ಸ್ಕೆಚ್‌ ಇಲ್ಲದೇ ಕೇವಲ ಬ್ಲೇಡ್‌ನ‌ಲ್ಲಿ ಕತ್ತರಿಸಿ ರಚಿಸಬಹುದಾಗಿದೆ.
ಗಿನ್ನಿಸ್‌ ದಾಖಲೆ ಮಾಡುವ ಗುರಿ
ಚಿತ್ರಕಲೆಯಲ್ಲೇ ವಿಭಿನ್ನತೆಯನ್ನು ತೋರಿಸುವ ನಿಟ್ಟಿನಲ್ಲಿ ಪೇಪರ್‌ ಕಟ್ಟಿಂಗ್‌ ಆರ್ಟ್‌ ಕಲಿತುಕೊಂಡೆ. ಅದರಲ್ಲೇ ವೇಗವಾಗಿ ಚಿತ್ರವನ್ನು ಬಿಡಿಸುವುದನ್ನು ಅಭ್ಯಾಸಿಸಿದೆ. ಇದೀಗ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ಸ್ಥಾನ ಪಡೆದುಕೊಂಡಿದ್ದೇನೆ. ಮುಂದಿನ ಗುರಿ ಗಿನ್ನಿಸ್‌ ವರ್ಲ್ಡ್ ರೆಕಾರ್ಡ್‌ ನಲ್ಲಿ ಸ್ಥಾನಗಳಿಸುವುದಾಗಿದೆ.
ಚಂದನ್‌ ಸುರೇಶ್‌
ಪೇಪರ್‌ ಕಟ್ಟಿಂಗ್‌ ಆರ್ಟ್‌ ಕಲಾವಿದ 
ವಿಶೇಷ ವರದಿ

ಟಾಪ್ ನ್ಯೂಸ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.