ಚರಂಡಿ ನೀರಲ್ಲಿ ಪುಣ್ಯಸ್ನಾನ


Team Udayavani, May 5, 2019, 9:48 AM IST

5-MAY-1

ಅಫಜಲಪುರ: ಘತ್ತರಗಿಯಲ್ಲಿರುವ ಭೀಮಾ ನದಿಯಲ್ಲಿ ಚರಂಡಿ ನೀರು ಸೇರಿ ಕಲುಷಿತವಾಗಿದ್ದು, ಅದರಲ್ಲಿಯೇ ಭಕ್ತರು ಪುಣ್ಯಸ್ನಾನ ಮಾಡಿದರು.

ಅಫಜಲಪುರ: ಬರಗಾಲ ಆವರಿಸಿ ಭೀಮಾ ನದಿ ಖಾಲಿಯಾಗಿದೆ. ಜನ-ಜಾನುವಾರುಗಳಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಭೀಮೆ ಖಾಲಿಯಾಗಿದ್ದರಿಂದ ಭಕ್ತರ ಸ್ನಾನಕ್ಕೆ ಗ್ರಾಮದ ಚರಂಡಿ ನೀರೇ ಗತಿಯಾಗಿದೆ.

ತಾಲೂಕಿನ ಸುಕ್ಷೇತ್ರ ಘತ್ತರಗಿಯಲ್ಲಿ ಹರಿಯುತ್ತಿರುವ ಭೀಮಾ ನದಿ ಖಾಲಿಯಾಗಿದೆ. ಗ್ರಾಮ ದೇವತೆ ಭಾಗ್ಯವಂತಿ ದರ್ಶನಕ್ಕೆ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಭಾಗ್ಯವಂತಿ ದರ್ಶನಕ್ಕೂ ಮುನ್ನ ಭೀಮಾ ನದಿಯಲ್ಲಿ ಪುಣ್ಯಸ್ನಾನಕ್ಕೆಂದು ಹೋಗುತ್ತಾರೆ. ಆದರೆ ಭೀಮಾ ನದಿಯಲ್ಲಿ ನೀರು ಖಾಲಿಯಾಗಿದ್ದರಿಂದ ಅಲ್ಲಲ್ಲಿ ಹೊಂಡ ಕೊರೆದಿದ್ದರಲ್ಲಿ ಬರುವ ಮೊಳಕಾಲುದ್ದದ ನೀರಲ್ಲಿ ಪುಣ್ಯಸ್ನಾನ ಮಾಡುತ್ತಿದ್ದಾರೆ.

ನದಿ ಸೇರುತ್ತಿದೆ ಗ್ರಾಮದ ಚರಂಡಿ ನೀರು: ಘತ್ತರಗಿ ಗ್ರಾಮಸ್ಥರು ಬಳಸಿ ಬಿಟ್ಟ ನೀರು ಚರಂಡಿ ಮೂಲಕ ನೇರವಾಗಿ ನದಿ ಸೇರುತ್ತಿದೆ. ಮೊದಲೇ ನದಿಯಲ್ಲಿ ನೀರು ಖಾಲಿಯಾಗಿದ್ದರಿಂದ ಅಲ್ಲಲ್ಲಿ ಕೊರೆದ ಹೊಂಡಗಳಲ್ಲಿ ಚರಂಡಿ ನೀರು ತುಂಬಿಕೊಳ್ಳುತ್ತಿದೆ. ಇದೇ ನೀರಲ್ಲಿ ಇಲ್ಲಿಗೆ ಬರುವ ಭಕ್ತರು ಪುಣ್ಯಸ್ನಾನ ಮಾಡಿಕೊಳ್ಳುವಂತಾಗಿದೆ.

ಗ್ರಾಮದ ಚರಂಡಿಗಳಿಂದ ನದಿ ಕಲುಷಿತ: ಘತ್ತರಗಿಯಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಜನರಿದ್ದಾರೆ. ಇವರೆಲ್ಲ ಬಳಕೆ ಮಾಡಿದ ನೀರು ನೇರವಾಗಿ ಚರಂಡಿ ಮೂಲಕ ನದಿಗೆ ಸೇರುತ್ತಿದೆ. ಘತ್ತರಗಿಯಲ್ಲಿಯೇ ಗ್ರಾಪಂ ಕಚೇರಿಯೂ ಇದೆ. ಗ್ರಾ.ಪಂನವರು ಚರಂಡಿ ನೀರನ್ನು ನದಿಗೆ ಹೋಗದಂತೆ ಪರ್ಯಾಯ ವ್ಯವಸ್ಥೆ ಮಾಡಬಹುದಾಗಿತ್ತು. ಆದರೆ ನಿರ್ಲಕ್ಷ್ಯತನದಿಂದಾಗಿ ಚರಂಡಿ ನೀರು ನದಿಗೆ ಸೇರುತ್ತಿದೆ. ಇದರಿಂದ ನದಿ ನೀರು ಕಲುಷಿತವಾಗುತ್ತಿದೆ. ಅಲ್ಲದೇ ಸುತ್ತಮುತ್ತಲಿನ ಪರಿಸರವೂ ಕಲುಷಿತವಾಗುತ್ತಿದೆ.

ಮೊದಲು ನದಿಯಲ್ಲಿ ನೀರು ತುಂಬಿಕೊಂಡಿದ್ದಾಗ ಚರಂಡಿ ನೀರು ಸೇರಿದ್ದು, ಅಷ್ಟಾಗಿ ಗೊತ್ತಾಗುತ್ತಿರಲಿಲ್ಲ. ಈಗ ನದಿಯೇ ಖಾಲಿಯಾಗಿರುವಾಗ ಚರಂಡಿ ನೀರು ನದಿಗೆ ಸೇರುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಹೀಗಾಗಿ ನದಿಗೆ ಸ್ನಾನಕ್ಕೆಂದು ಬರುವ ಭಕ್ತರಿಗೆ ವಾಕರಿಕೆ ಬರುವಂತಾಗಿದೆ. ಆದರೂ ದೇವರ ಮೇಲೆ ಇರುವ ಭಕ್ತಿ ಕಾರಣದಿಂದ ಚರಂಡಿ ನೀರು ಸೇರಿಕೊಂಡ ನದಿಯಲ್ಲಿ ಸ್ನಾನ ಮಾಡುವಂತಾಗಿದೆ.

ನದಿಗೆ ಚರಂಡಿ ನೀರು ಸೇರದಂತೆ ಕ್ರಮ ಕೈಗೊಳ್ಳಿ
ನಾವು ಪ್ರತಿ ಅಮಾವಾಸ್ಯೆಗೆ ಘತ್ತರಗಿಗೆ ಬಂದು ದೇವಿ ದರ್ಶನ ಪಡೆಯುತ್ತೇವೆ. ಅಲ್ಲದೇ ನದಿಯಲ್ಲಿ ಪುಣ್ಯಸ್ನಾನಕ್ಕೆಂದು ಹೋಗುತ್ತೇವೆ. ಆದರೆ ಭೀಮಾ ನದಿಯಲ್ಲಿ ಈ ಬಾರಿ ನೀರಿಲ್ಲದ್ದರಿಂದ ನಮಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಸ್ವಲ್ಪ ನೀರಿದೆ, ಸ್ನಾನ ಮಾಡೋಣ ಎಂದರೆ ಗ್ರಾಮದ ಚರಂಡಿ ನೀರು ನದಿ ನೀರಲ್ಲಿ ಬೆರೆತು ನೀರೆಲ್ಲ ಕಲುಷಿತವಾಗಿದೆ. ಸಂಬಂಧಪಟ್ಟವರು ನದಿ ನೀರಿಗೆ ಚರಂಡಿ ನೀರು ಸೇರದಂತೆ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಭಾಗ್ಯವಂತೆ ದೇವಿ ದರ್ಶನಕ್ಕೆ ಬರುವ ಭಕ್ತರು ಒತ್ತಾಯಿಸಿದ್ದಾರೆ.

ಮರೀಚಿಕೆಯಾಗಿರುವ ಸ್ನಾನಘಟ್ಟ
ಘತ್ತರಗಿಯಲ್ಲಿ ಸ್ನಾನಘಟ್ಟ ನಿರ್ಮಿಸಬೇಕೆಂದು ಸುಮಾರು ದಿನಗಳಿಂದ ಭಕ್ತರ ಬೇಡಿಕೆ ಇದೆ. ಅದ್ಯಾಕೋ ನಿರ್ಮಾಣವಾಗುತ್ತಿಲ್ಲ. ಕೊನೆ ಪಕ್ಷ ಸ್ನಾನ ಘಟ್ಟದ ಬದಲಾಗಿ ಚರಂಡಿ ನೀರು ನದಿಗೆ ಬಂದು ಸೇರದಂತೆ ತಡೆದು ಇನ್ನು ಸ್ವಲ್ಪ ಹೊಂಡ ಕೊರೆದರೆ ಇನ್ನಷ್ಟು ಶುದ್ದ ನೀರು ಸಂಗ್ರಹವಾಗಿ ಪುಣ್ಯಸ್ನಾನಕ್ಕೆ ಮತ್ತು ಇತರ ಉಪಯೋಗಕ್ಕೆ ನದಿ ನೀರು ಉಪಯುಕ್ತವಾಗಲಿದೆ ಎನ್ನವುದು ಇಲ್ಲಿಗೆ ಬರುವ ಭಕ್ತರ ಆಗ್ರಹವಾಗಿದೆ.

ಟಾಪ್ ನ್ಯೂಸ್

SSLC Exam Result ಸಂಭ್ರಮಿಸಲು ವಿದ್ಯಾರ್ಥಿಯೇ ಇರಲಿಲ್ಲ!

SSLC Exam Result ಸಂಭ್ರಮಿಸಲು ವಿದ್ಯಾರ್ಥಿಯೇ ಇರಲಿಲ್ಲ!

ವಿವಾಹ ನಿಶ್ಚಿತಾರ್ಥ ಕಳೆದು ವಾಪಸಾಗುತ್ತಿದ್ದಾಗ ವಾಹನ ಅಪಘಾತದಲ್ಲಿ ವರನ ತಂದೆ ಸಾವು

Kasaragod ವಾಹನ ಅಪಘಾತ: ವರನ ತಂದೆ ಸಾವು

Kapu ದಿಢೀರ್‌ ಅನಾರೋಗ್ಯ; ಬಾಲಕಿ ಸಾವು

Kapu ದಿಢೀರ್‌ ಅನಾರೋಗ್ಯ; ಬಾಲಕಿ ಸಾವು

Kollur ಯುವತಿ ಮೇಲೆ ಅತ್ಯಾಚಾರ; ದೂರು

Kollur ಯುವತಿ ಮೇಲೆ ಅತ್ಯಾಚಾರ; ದೂರು

Siddaramaiah ಎಸ್‌ಐಟಿ ಮೇಲೆ ನಂಬಿಕೆಯಿಡಿ, ಸಿಬಿಐ ತನಿಖೆ ಬೇಕಿಲ್ಲ

Siddaramaiah ಎಸ್‌ಐಟಿ ಮೇಲೆ ನಂಬಿಕೆಯಿಡಿ, ಸಿಬಿಐ ತನಿಖೆ ಬೇಕಿಲ್ಲ

3 ದಿನ ರೇವಣ್ಣ ಭೇಟಿಗಿಲ್ಲ ಅವಕಾಶ; ಮಾಜಿ ಸಚಿವರಿಗೆ ಈಗ ಬೆನ್ನು ನೋವು

3 ದಿನ ರೇವಣ್ಣ ಭೇಟಿಗಿಲ್ಲ ಅವಕಾಶ; ಮಾಜಿ ಸಚಿವರಿಗೆ ಈಗ ಬೆನ್ನು ನೋವು

ಪತ್ರಕರ್ತರ ಜತೆ ದೇವರಾಜೇಗೌಡ ಮಾತನಾಡಿದ ಆಡಿಯೋ ಬಹಿರಂಗ

ಪತ್ರಕರ್ತರ ಜತೆ ದೇವರಾಜೇಗೌಡ ಮಾತನಾಡಿದ ಆಡಿಯೋ ಬಹಿರಂಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Minchu

Chincholi: ಸಿಡಿಲು ಬಡಿದು ಕೂಲಿ‌ ಕಾರ್ಮಿಕ ಮಹಿಳೆ‌ ಮೃತ್ಯು,ಪುತ್ರನಿಗೆ ಗಂಭೀರ ಗಾಯ

ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ ಆಚರಣೆ

Kalaburagi; ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ ಆಚರಣೆ

5-kalburgi

PM Modi: ಕಲಬುರಗಿಗೆ ಇಂದು ಪ್ರಧಾನಿ ನರೇಂದ್ರ ಮೋದಿ

Kalaburagi; ಮತದಾನ ಮಾಡಿ ವಿಡಿಯೋ ವೈರಲ್ ಮಾಡಿದ ಚಿಂಚೋಳಿ ಮತದಾರ

Kalaburagi; ಮತದಾನ ಮಾಡಿ ವಿಡಿಯೋ ವೈರಲ್ ಮಾಡಿದ ಚಿಂಚೋಳಿ ಮತದಾರ

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

SSLC Exam Result ಸಂಭ್ರಮಿಸಲು ವಿದ್ಯಾರ್ಥಿಯೇ ಇರಲಿಲ್ಲ!

SSLC Exam Result ಸಂಭ್ರಮಿಸಲು ವಿದ್ಯಾರ್ಥಿಯೇ ಇರಲಿಲ್ಲ!

ವಿವಾಹ ನಿಶ್ಚಿತಾರ್ಥ ಕಳೆದು ವಾಪಸಾಗುತ್ತಿದ್ದಾಗ ವಾಹನ ಅಪಘಾತದಲ್ಲಿ ವರನ ತಂದೆ ಸಾವು

Kasaragod ವಾಹನ ಅಪಘಾತ: ವರನ ತಂದೆ ಸಾವು

Kapu ದಿಢೀರ್‌ ಅನಾರೋಗ್ಯ; ಬಾಲಕಿ ಸಾವು

Kapu ದಿಢೀರ್‌ ಅನಾರೋಗ್ಯ; ಬಾಲಕಿ ಸಾವು

Kollur ಯುವತಿ ಮೇಲೆ ಅತ್ಯಾಚಾರ; ದೂರು

Kollur ಯುವತಿ ಮೇಲೆ ಅತ್ಯಾಚಾರ; ದೂರು

1-wqeqwew

IPL; ಚೆನ್ನೈ ವಿರುದ್ಧ ಅಬ್ಬರ; ಗುಜರಾತ್ ಪ್ಲೇ ಆಫ್ ಆಸೆ ಜೇವಂತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.