ಕೂಲಿ ವಿತರಣೆಯಲ್ಲಿ ತಾರತಮ್ಯ-ಪ್ರತಿಭಟನೆ

150ಕ್ಕೂ ಹೆಚ್ಚಿನ ಕೂಲಿ ಕಾರ್ಮಿಕರ ಆಕ್ರೋಶ

Team Udayavani, Jun 7, 2022, 3:12 PM IST

18

ಗುಳೇದಗುಡ್ಡ: ಹಾನಾಪುರ ಪಂಚಾಯಿತಿಯ ಮುರುಡಿ ಗ್ರಾಮದಲ್ಲಿ ನರೇಗಾ ಕೂಲಿ ಕೆಲಸ ಮಾಡುವವರಿಗೆ ಕೂಲಿ ಹಣ ನೀಡುವಲ್ಲಿ ತಾರತಮ್ಯ ಮಾಡಿದ್ದನ್ನು ಖಂಡಿಸಿ 150ಕ್ಕೂ ಹೆಚ್ಚಿನ ಕೂಲಿ ಕಾರ್ಮಿಕರು ಸೋಮವಾರ ಪ್ರತಿಭಟನೆ ನಡೆಸಿದರು.

ಮುರುಡಿ ಗ್ರಾಮದಲ್ಲಿ ಕಳೆದ ವಾರ ಕೂಲಿ ಕೆಲಸಕ್ಕೆ ಕಾರ್ಮಿಕರು ತೆರಳಿದ್ದಾರೆ. ಎಲ್ಲ ಕಾರ್ಮಿಕರು ಆರು ದಿನಗಳ ಕೆಲಸ ಮಾಡಿದ್ದಾರೆ. ಆದರೆ, ಇದರಲ್ಲಿ ಕೆಲವರಿಗೆ ಕೆಲಸ ಮಾಡದೇ ಏಳು ದಿನಗಳ ವೇತನ ನೀಡಿದ್ದಾರೆ. ಹಾಗಾದರೆ ನಮಗೇಕೆ ಏಳು ದಿನದ ಕೂಲಿ ನೀಡಿಲ್ಲ ಎಂದು ಕೂಲಿ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಂಗಪ್ಪ ಗೌಡ್ರ, ಹುಲಿಗೆವ್ವ ಮಾದರ ಮಾತನಾಡಿ, ಎಲ್ಲರು ಕಳೆದ ವಾರ ಕೂಲಿ ಕೆಲಸ ಮಾಡಲು ತೆರಳಿದ್ದೇವು. ನಮ್ಮ ಜತೆ ಇನ್ನೂ 150ಕ್ಕೂ ಹೆಚ್ಚಿನ ಜನರು ಬಂದಿದ್ದಾರೆ. ಎಲ್ಲರೂ ಆರು ದಿನಗಳ ಕೆಲಸ ಮಾಡಿದ್ದೇವೆ. ನಮಗೆ ಆರು ದಿನಗಳ ವೇತನ ಹಾಕಿದ್ದಾರೆ. ಆದರೆ ಅವರೆಲ್ಲರಿಗೂ ಏಳು ದಿನಗಳ ಕೂಲಿ ನೀಡಿದ್ದಾರೆ. ಗ್ರಾಮದಲ್ಲಿ ದೇವಿ ವಾರವಿದ್ದರೂ ಕೆಲಸಕ್ಕೆ ಹೋಗಿದ್ದೇವು. ಆದರೆ, ಗ್ರಾಮದಲ್ಲಿ ಮದುವೆ ಇದ್ದ ಕಾರಣ ಒಂದು ದಿನ ನಾವು ಹೋಗಿರಲಿಲ್ಲ. ಅದೇ ರೀತಿ ಅವರು ಸಹ ಹೋಗಿಲ್ಲ. ಆದರು ಅವರಿಗೆ ಹಣ ಹಾಕಿದ್ದಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ. ನಮಗೂ ಅವರಂತೆ ಏಳು ದಿನಗಳ ಕೂಲಿ ಹಣ ಕೊಡಬೇಕು. ಅವರಿಗೊಂದು ನ್ಯಾಯ ನಮಗೊಂದು ನ್ಯಾಯವೇ ಪಂಚಾಯಿತಿ ಯವರು ಸರಿಯಾಗಿ ಗಮನಿಸಬೇಕು. ನಮಗೆ ಇದರಲ್ಲಿ ಅನ್ಯಾಯವಾಗಿದೆ ಎಂದು ಪ್ರತಿಭಟನಾ ನಿರತ ಕೂಲಿ ಕಾರ್ಮಿಕರು ದೂರಿದ್ದಾರೆ.

ಸ್ಥಳಕ್ಕೆ ತಾಪಂ ಎಡಿಎಲ್‌ಆರ್‌ ರಾಮಚಂದ್ರ ಮೇತ್ರಿ ಭೇಟಿ ನೀಡಿ, ಪ್ರತಿಭಟನಾನಿರತರ ಮನವಿ ಆಲಿಸಿ, ದಾಖಲೆ ಪ್ರಕಾರ ಸದ್ಯ 7-8 ಜನರಿಗೆ ಏಳು ದಿನಗಳ ಹಾಜರಿ ಬಿದ್ದಿದ್ದು, ಇನ್ನೂ ಪರಿಶೀಲನೆ ಮಾಡಲಾಗುವುದು. ಏಳು ದಿನಗಳ ವೇತನ ಪಡೆದವರಿಗೆ ನೋಟಿಸ್‌ ನೀಡಿ, ಒಂದು ದಿನದ ಹೆಚ್ಚಿನ ಕೂಲಿ ಹಣ ವಾಪಸ್‌ ಪಡೆಯಲಾಗುವುದು. ಈ ಬಗ್ಗೆ ಸಂಬಂಧಪಟ್ಟವರಿಗೆ ನೋಟಿಸ್‌ ನೀಡಲಾಗುವುದು ಎಂದು ಹೇಳಿದರು.

ನಿಂಗಪ್ಪ ಗೌಡ್ರ, ಲಕ್ಷ್ಮೀಬಾಯಿ ಕೋರಿ, ಗಂಗವ್ವ ದ್ಯಾಮನಗೌಡ್ರ, ಪಾರ್ವತಿ ಗೌಡ್ರ, ಯಲ್ಲವ್ವ ಕೋರಿ, ನೀಲವ್ವ ದ್ಯಾಮನಗೌಡ್ರ, ಕಮಲವ್ವ ಚುಂಗಿನ, ಮಲ್ಲವ್ವ ಹೂಲಗೇರಿ, ಮಾದೇವಿ ದಾಸರ, ಗೀತಾ ದಾಸರ, ಮಾರುತಿ ದಾಸರ, ದೇವಕ್ಕೆವ್ವ ಚುಂಗಿನ, ಶಿವವ್ವ ಕೆರಕಲಮಟ್ಟ, ಸಿದ್ದವ್ವ ದ್ಯಾಮನಗೌಡ್ರ, ಶಂಕ್ರವ್ವ ದಿಂಡಿ, ಲಕ್ಷ್ಮವ್ವ ಗೌಡರ, ಯಲ್ಲಪ್ಪ ಕೋರಿ, ಪರಸಪ್ಪ ಗೌಡ್ರ ಇದ್ದರು.

ಟಾಪ್ ನ್ಯೂಸ್

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.