ಸ್ಮಶಾನದ ಸ್ವತ್ಛತೆಗೆ ಆದ್ಯತೆ ನೀಡಿ
Team Udayavani, Jan 29, 2021, 5:50 PM IST
ಮಹಾಲಿಂಗಪುರ: ಪರಮಾತ್ಮ ನೆಲೆಸಿರುವ ಮುಕ್ತಿಕೇಂದ್ರ ಹಿಂದೂ ಸ್ಮಶಾನದ ಸ್ವತ್ಛತೆಗೆ ಪಟ್ಟಣದ ಎಲ್ಲ ಸಮಾಜಗಳ ಹಿರಿಯರು, ಯುವಕರು ಆದ್ಯತೆ ನೀಡಬೇಕು ಎಂದು ರನ್ನಬೆಳಗಲಿ ಪಪಂ ಅಧ್ಯಕ್ಷ ಸಿದ್ದುಗೌಡ ಪಾಟೀಲ ಹೇಳಿದರು.
ರನ್ನಬೆಳಗಲಿ ಪಪಂ ವತಿಯಿಂದ ಹಿಂದೂ ಸ್ಮಶಾನದಲ್ಲಿ ಹಮ್ಮಿಕೊಂಡಿದ್ದ ಸ್ವತ್ಛ ಭಾರತ ಅಭಿಯಾನದ ಸ್ವತ್ಛತಾ ಕಾರ್ಯಕ್ರಮದ ಸೇವೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇವಲ ಪಪಂ ಸಿಬ್ಬಂದಿ ಮತ್ತು ಅಧಿಕಾರಿಗಳೇ ಪಟ್ಟಣದ ಸ್ವತ್ಛತೆ ಮಾಡಲಿ ಎಂಬ ಉದಾಸೀನ ಬೇಡ. ದಿನನಿತ್ಯದ ಸ್ವತ್ಛತೆಗೆ ಪಪಂ ಪೌರ ಕಾರ್ಮಿಕರು ಆದ್ಯತೆ ನೀಡುತ್ತಾರೆ. ಪಟ್ಟಣದಲ್ಲಿನ ವಿವಿಧ ಸ್ಮಶಾನ, ದೇವಸ್ಥಾನಗಳು, ಸಾರ್ವಜನಿಕ ಸಮುದಾಯ ಭವನಗಳು, ಶಾಲಾ ಆವರಣ ಸೇರಿದಂತೆ ಸಾರ್ವಜನಿಕ ಸ್ಥಳಗಳ ಸ್ವತ್ಛತೆಗೆ ಪಟ್ಟಣದ ಯುವಕರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಪಟ್ಟಣದ ಸ್ವತ್ಛತೆಗೆ ಶ್ರಮಿಸಬೇಕಾಗಿದೆ ಎಂದರು.
ಇದನ್ನೂ ಓದಿ:ಗ್ರಾಮೀಣ ಭಾಗದಲ್ಲಿ ಸಮಯಕ್ಕೆ ಸರಿಯಾಗಿ ಬಸ್ ಓಡಿಸಿ
ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ರನ್ನಬೆಳಗಲಿ ಪಪಂ ಸದಸ್ಯರಾದ ಅಶೋಕ ಸಿದ್ದಾಪೂರ, ಮಹಾಲಿಂಗ ಲಾಗದವರ, ಮಹಾಲಿಂಗ ಪುರಾಣಿಕ, ಮಹಾದೇವ ಮುರನಾಳ, ಪಾಂಡಪ್ಪ ಸಿದ್ದಾಪುರ, ಲಕ್ಷ್ಮಣ ಕಲ್ಲೋಳೆಪ್ಪಗೋಳ, ಮುಖಂಡರಾದ ಧರೆಪ್ಪ ಸಾಂಗ್ಲಿಕರ, ಮಹಾಲಿಂಗ ಗುಂಜಿಗಾಂವಿ, ಯಲ್ಲಪ್ಪ ಅಮಾತಿ, ಭೀಮನಗೌಡ ಪಾಟೀಲ, ಶಿವನಗೌಡ ಹಾಜರಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ