ಹೃದಯಘಾತದಿಂದ ಮುಧೋಳ ತಹಶೀಲ್ದಾರ್ ನಿಧನ
Team Udayavani, Mar 18, 2022, 2:38 PM IST
ಮುಧೋಳ: ಹೃದಯಾಘಾತದಿಂದ ಮುಧೋಳ ತಹಶೀಲ್ದಾರ್ ಸಂಗಮೇಶ್ ಬಾಡಗಿ ಅವರು (38) ಗುರುವಾರ ಮಧ್ಯರಾತ್ರಿ ಮೃತಪಟ್ಟ ಘಟನೆ ನಡೆದಿದೆ.
ಮುಧೋಳ ನಗರದ ಮನೆಯಲ್ಲಿ ಮಲಗಿದ್ದ ವೇಳೆ ತಹಶೀಲ್ದಾರ್ ಸಂಗಮೇಶ್ ಅವರಿಗೆ ಹೃದಯಾಘಾತವಾಗಿದೆ ಎಂದು ತಿಳಿದುಬಂದಿದೆ.
ಪುತ್ರಿ ಮತ್ತು ಪತ್ನಿಯನ್ನು ಅಗಲಿದ್ದಾರೆ. ಅಥಣಿ ತಾಲೂಕಿನ ಜನವಾಡ ಮೂಲದ ಸಂಗಮೇಶ ಬಾಡಗಿ ಅವರು ಮೂರು ವರ್ಷದಿಂದ ಮುಧೋಳ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಇದನ್ನೂಓದಿ:ಮಣಿಪಾಲ: ಅಣ್ಣನನ್ನೇ ಕತ್ತಿಯಿಂದ ಕಡಿದು ಕೊಲೆ ಮಾಡಿದ ತಮ್ಮ!
ಸಂಗಮೇಶ್ ಬಾಡಗಿ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮುಧೋಳ ನಿವಾಸಕ್ಕೆ ಜಮಖಂಡಿ ಎಸಿ ಸಿದ್ದು ಹುಲ್ಲಳ್ಳಿ ಸೇರಿದಂತೆ ಅನೇಕ ಅಧಿಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.