ಪ್ರವಾಹಕ್ಕೆ ಮುಳುಗಿದ ನೇಕಾರಿಕೆ!

ಸರ್ಕಾರದ ಪರಿಹಾರ ಕಚ್ಚಾ ವಸ್ತುವಿಗೂ ಸಾಲಲ್ಲ

Team Udayavani, Oct 15, 2019, 11:45 AM IST

bk-tdy-1

ಬಾಗಲಕೋಟೆ: ಕಳೆದ ಆಗಸ್ಟ್‌ ತಿಂಗಳಲ್ಲಿ ಬಂದ ಭೀಕರ ಪ್ರವಾಹಕ್ಕೆ ಜಿಲ್ಲೆಯ ನೇಕಾರಿಕೆಯೇ ಮುಳುಗಿ ಹೋಗಿದೆ. ಪ್ರವಾಹ ಭೀಕರತೆಯ ಕರಿ ನೆರಳಿನಿಂದ ನೇಕಾರರು ಇಂದಿಗೂ ಹೊರ ಬಂದಿಲ್ಲ. ಸರ್ಕಾರ ಘೋಷಿಸಿದ, ಪರಿಹಾರ ಕಚ್ಚಾ ವಸ್ತು ಖರೀದಿಸಲೂ ಸಾಕಾಗಲ್ಲ ಎಂಬ ಕೊರಗು ನೇಕಾರರ ವಲಯದಿಂದ ಕೇಳಿ ಬರುತ್ತಿದೆ.

ಜಿಲ್ಲೆಯ ಘಟಪ್ರಭಾ, ಮಲಪ್ರಭಾ ಹಾಗೂ ಕೃಷ್ಣಾ ನದಿ ಪ್ರವಾಹದಿಂದ ಜಿಲ್ಲೆಯ ನೇಕಾರರು ದೊಡ್ಡ ಹಾನಿ ಅನುಭವಿಸಿದ್ದಾರೆ. ಪ್ರತಿ ಮನುಷ್ಯನಿಗೆ ಉತ್ತಮ ಬಟ್ಟೆ ನೇಯ್ದು, ಅವರ ಮಾನ ಕಾಪಾಡುವ ನೇಕಾರರ ಮಗ್ಗಗಳು ಇಂದಿಗೂ ನೀರಿನಲ್ಲಿ ನಿಂತು ಬೆತ್ತಲಾಗಿವೆ. ಆದರೆ, ಅವರ ಸಂಕಷ್ಟಕ್ಕೆ ಸ್ಪಂದಿಸುವ ಹೃದಯ ವೈಶಾಲ್ಯತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸೂಕ್ತ ಮಟ್ಟದಲ್ಲಿ ನಡೆಯುತ್ತಿಲ್ಲ ಎಂಬ ಬೇಸರ ವ್ಯಕ್ತವಾಗಿದೆ.

ಬಟ್ಟೆ ಬೇಕು; ನಿಯಮದಡಿ ಬರಲ್ಲ: ನೇಕಾರರು ಅತಿವೃಷ್ಟಿ ಇಲ್ಲವೇ ಅನಾವೃಷ್ಟಿಯಿಂದ ಹಾನಿ ಅನುಭವಿಸಿದರೆ ಅವರಿಗೆ ಸೂಕ್ತ ಪರಿಹಾರ ಕೊಡಲು ಕೇಂದ್ರದ ಎನ್‌ಡಿಆರ್‌ಎಫ್‌ ಇಲ್ಲವೇ ರಾಜ್ಯದ ಎಸ್‌ಡಿಆರ್‌ಎಫ್‌ ನಿಯಮಗಳಲ್ಲಿ ಅವಕಾಶವೇ ಇಲ್ಲ. ನೇಕಾರರಿಗೆ ಸಹಾಯಧನ ರೂಪದಲ್ಲಿ ಕಚ್ಚಾ ವಸ್ತುಗಳ ಪೂರೈಕೆ ಸಹಿತ ಅವರಿಗೆ ಸೂಕ್ತ ಸೌಲಭ್ಯ ಕಲ್ಪಿಸಲೆಂದೇ ಇರುವ ಕೈಮಗ್ಗ ಮತ್ತು ಜವಳಿ ಇಲಾಖೆ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಗಳು ಸರಿಯಾಗಿ ಸ್ಪಂದಿಸುತ್ತಿಲ್ಲವೆಂಬ ಅಸಮಾಧಾನವೂ ಇದೆ. ನೇಕಾರರು ನಿತ್ಯ ಕಷ್ಟಪಟ್ಟು ನೇಯ್ಗೆ ಮಾಡುವ ಬಟ್ಟೆ ಮಾತ್ರ ಎಲ್ಲರಿಗೂ ಬೇಕು. ಆದರೆ, ಅವರಿಗೆ ಪ್ರತಿ ಹಂತದಲ್ಲೂ ನೆರವಾಗಲು, ಸರ್ಕಾರಿ ನಿಯಮಗಳಡಿ ತಿದ್ದುಪಡಿ ತರಲು ಈವರೆಗೂ ಯಾರೂ ಮುಂದಾಗಿಲ್ಲ.

ನೀರಿನಲ್ಲಿದ್ದ ಮಗ್ಗಗಳು: ಕೃಷ್ಣಾ ನದಿ ಪ್ರವಾಹದಿಂದ ರಬಕವಿ, ರಾಮಪುರ ಭಾಗದಲ್ಲಿ ನೇಕಾರರು ಅತಿ ಹೆಚ್ಚು ಹಾನಿ ಅನುಭವಿಸಿದ್ದಾರೆ. ರಬಕವಿ ಒಂದೇ ಪಟ್ಟಣದಲ್ಲಿ 126 ವಿದ್ಯುತ್‌ ಮಗ್ಗಗಳು, ಸುಮಾರು 300ಕ್ಕೂ ಹೆಚ್ಚು ಕೈಮಗ್ಗಗಳು ಆ. 3ರಿಂದ 8ರವರೆಗೆ ಸಂಪೂರ್ಣ ನೀರಿನಲ್ಲೇ ನಿಂತಿದ್ದವು. ಹೀಗಾಗಿ ರಬಕವಿಯ ಮುತ್ತೂರಗಲ್ಲಿ, ಹೊಸಪೇಟ ಗಲ್ಲಿ, ಬಸವೇಶ್ವರ ದೇವಸ್ಥಾನ ಸುತ್ತಲೂ ಅತಿ ಹೆಚ್ಚಾಗಿ ಇರುವ ನೇಕಾರರು, ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅಂದು ನೀರಿನಲ್ಲಿ ಮುಳುಗಿದ ಮಗ್ಗಗಳು ಹಾಗೂ ಲಕ್ಷಾಂತರ ಮೊತ್ತದ ಕಚ್ಚಾ ವಸ್ತುಗಳು ಪ್ರವಾಹ ನೀರಿನಲ್ಲಿ ತೇಲಿವೆ. ಅದನ್ನು ಮರಳಿ ಬಳಸಲು ಆಗಿಲ್ಲ. ಇನ್ನು ವಿದ್ಯುತ್‌ ಮಗ್ಗ, ವೈಡಿಂಗ್‌, ವಾಸಿಂಗ್‌ ಹಾಗೂ ಸೈಜಿಂಗ್‌ ಯಂತ್ರಗಳೂ ಕೆಟ್ಟು ಹೋಗಿವೆ. ರಬಕವಿಯ ನೀಲಕಂಠ ಮುತ್ತೂರ ಅವರೊಬ್ಬರಿಗೇ ಸೇರಿದ 10 ವಿದ್ಯುತ್‌ ಮಗ್ಗಗಳು, ಅದರ ಉಪಯಂತ್ರಗಳು ಹಾನಿಯಾಗಿವೆ. ಇವರೊಬ್ಬರೇ ಲಕ್ಷಾಂತರ ಹಾನಿ ಅನುಭವಿಸಿದ್ದು, ಕೇವಲ 25 ಸಾವಿರ ಪರಿಹಾರ ಕೊಟ್ಟರೆ ಏನು ಉಪಯೋಗ. ಪ್ರವಾಹದಿಂದ ರಬಕವಿ, ರಾಮಪುರ

ಅಷ್ಟೇ ಅಲ್ಲ ಹುನಗುಂದ ತಾಲೂಕಿನ ಕಮತಗಿ ಸೇರಿದಂತೆ ಜಿಲ್ಲೆಯ ಹಲವೆಡೆ ನೇಕಾರರು ಹಾನಿ ಅನುಭವಿಸಿದ್ದಾರೆ. ಅದರ ವರದಿಯನ್ನು ಇಲಾಖೆ ನೀಡಿದೆ. ಆದರೆ, ನೇಕಾರರಿಗೆ ತಕ್ಷಣ ಸ್ಪಂದಿಸುವ ಕಾರ್ಯ ಈವರೆಗೂ ನಡೆದಿಲ್ಲ ಎನ್ನಲಾಗಿದೆ.

ಸಿಎಂ ಸೂಚನೆಗೆ ಬೆಲೆ ಇಲ್ಲ: ಈಚೆಗೆ ಜಿಲ್ಲೆಗೆ ಬಂದಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಜಿಲ್ಲಾಡಳಿತ ಭವನದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು-ಅಧಿಕಾರಿಗಳ ಮಹತ್ವದ ಸಭೆ ನಡೆಸಿ, ಪ್ರವಾಹ ಪರಿಹಾರ ಕಾರ್ಯಗಳ ಕುರಿತು ಪರಿಶೀಲನೆ ನಡೆಸಿದ್ದರು. ಈ ವೇಳೆ ತೇರದಾಳದ ಶಾಸಕ ಸಿದ್ದು ಸವದಿ, ಪ್ರವಾಹದಿಂದ ನೇಕಾರರು ಹಾನಿ ಅನುಭವಿಸಿದ್ದು, ಅವರಿಗೆ ಎನ್‌ಡಿಆರ್‌ ಎಫ್‌, ಎಸ್‌ಡಿಆರ್‌ಎಫ್‌ ನಿಯಮಗಳಡಿ ಪರಿಹಾರ ಬರುತ್ತಿಲ್ಲ. ಇದೊಂದು ವಿಶೇಷ ಪ್ರಕರಣವೆಂದು ನೇಕಾರರಿಗೆ ಪರಿಹಾರ ಕೊಡಬೇಕೆಂದು ಒತ್ತಾಯಿಸಿದ್ದರು. ಆ ಸಭೆಯಲ್ಲೇ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಪ್ರವಾಹದಿಂದ ಹಾನಿಯಾದ ನೇಕಾರ ಕುಟುಂಬಕ್ಕೆ ತಲಾ 25 ಸಾವಿರ ಪರಿಹಾರ ಘೋಷಿಸಿದ್ದರು. ನಾಳೆಯಿಂದಲೇ ಪರಿಹಾರಧನ ನೀಡುವಂತೆಯೂ ನಿರ್ದೇಶನ ನೀಡಿದ್ದರು. ಆದರೆ, ಸಿಎಂ ಬಂದು ಹೋಗಿ, 10 ದಿನ ಕಳೆದರೂ ನೇಕಾರರಿಗೆ 10 ಪೈಸೆ ಪರಿಹಾರ ಕೊಟ್ಟಿಲ್ಲ ಎಂಬುದು ನೇಕಾರರ ಆಕ್ರೋಶ.

 

-ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

Bad weather: KKR team landed in Varanasi

Bad weather: ವಾರಾಣಸಿಯಲ್ಲಿ ಉಳಿದ ಕೆಕೆಆರ್‌ ತಂಡ

18

Benjana Padavu: ನೇಣು ಬಿಗಿದು ಆತ್ಮಹತ್ಯೆ

Encounter in Kashmir:

ಕಾಶ್ಮೀರದಲ್ಲಿ ಎನ್‌ಕೌಂಟರ್‌: ಇಬ್ಬರು ಉಗ್ರರ ಹತ್ಯೆ

17-

Bantwala: ರಾಂಗ್‌ಸೈಡಿನಲ್ಲಿ ಬಂದು ಎರಡು ಬೈಕ್‌ಗಳಿಗೆ  ಢಿಕ್ಕಿ ಹೊಡೆದ ಲಾರಿ

Man shot a Cow on head twice

Manipur; ಹಸುವಿಗೆ ಗುಂಡಿಟ್ಟು ಕೊಂದ ಕ್ರೂರಿ!: ವ್ಯಾಪಕ ಆಕ್ರೋಶ

Rekha Jhunjhunwala lost Rs 800 crore in a single day!

Share Market; ರೇಖಾ ಜುಂಜುನ್‌ವಾಲಾಗೆ ಒಂದೇ ದಿನ 800 ಕೋಟಿ ರೂ. ನಷ್ಟ!

sunita williams

Sunita williams ಬಾಹ್ಯಾಕಾಶ ಯಾನ 90 ನಿಮಿಷಗಳಿದ್ದಾಗ ರದ್ದು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-

Rabakavi-Banahatti: ತೀವ್ರ ಅನಾರೋಗ್ಯದಲ್ಲಿಯೂ ಮತದಾನ ಮಾಡಿದ ವ್ಯಕ್ತಿ

Lok Sabha Election: ಮತ ಚಲಾಯಿಸಲು ಜರ್ಮನಿಯಿಂದ ಹುಟ್ಟೂರಿಗೆ ಬಂದ ಯುವತಿ

Lok Sabha Election: ಮತ ಚಲಾಯಿಸಲು ಜರ್ಮನಿಯಿಂದ ಬನಹಟ್ಟಿಗೆ ಬಂದ ಯುವತಿ

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

ಮುಗಿದ ಅಬ್ಬರ; ಎರಡು ದಿನ ಮನೆ-ಮನೆ ಸಂದಾಯ! 1992ರ ಚುನಾವಣೆ ನೆನಪಿಸಿದ ರಣತಂತ್ರ

ಮುಗಿದ ಅಬ್ಬರ; ಎರಡು ದಿನ ಮನೆ-ಮನೆ ಸಂದಾಯ! 1992ರ ಚುನಾವಣೆ ನೆನಪಿಸಿದ ರಣತಂತ್ರ

Mudhol; ಹೃದಯಾಘಾತದಿಂದ ಚುನಾವಣಾ ಕರ್ತವ್ಯನಿರತ ಸಿಬ್ಬಂದಿ‌ ಸಾವು

Mudhol; ಹೃದಯಾಘಾತದಿಂದ ಚುನಾವಣಾ ಕರ್ತವ್ಯನಿರತ ಸಿಬ್ಬಂದಿ‌ ಸಾವು

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Bad weather: KKR team landed in Varanasi

Bad weather: ವಾರಾಣಸಿಯಲ್ಲಿ ಉಳಿದ ಕೆಕೆಆರ್‌ ತಂಡ

18

Benjana Padavu: ನೇಣು ಬಿಗಿದು ಆತ್ಮಹತ್ಯೆ

Encounter in Kashmir:

ಕಾಶ್ಮೀರದಲ್ಲಿ ಎನ್‌ಕೌಂಟರ್‌: ಇಬ್ಬರು ಉಗ್ರರ ಹತ್ಯೆ

17-

Bantwala: ರಾಂಗ್‌ಸೈಡಿನಲ್ಲಿ ಬಂದು ಎರಡು ಬೈಕ್‌ಗಳಿಗೆ  ಢಿಕ್ಕಿ ಹೊಡೆದ ಲಾರಿ

Man shot a Cow on head twice

Manipur; ಹಸುವಿಗೆ ಗುಂಡಿಟ್ಟು ಕೊಂದ ಕ್ರೂರಿ!: ವ್ಯಾಪಕ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.