ಗ್ರಾಮದೇವತೆ ಜಾತ್ರಾ ಮಹೋತ್ಸವ ಪ್ರಚಾರ ಸಾಮಗ್ರಿ ಬಿಡುಗಡೆ


Team Udayavani, May 6, 2022, 4:30 PM IST

21

ಅಮೀನಗಡ: ಪಟ್ಟಣದ ಬನಶಂಕರಿದೇವಿ ದೇವಾಲಯದಲ್ಲಿ ಗ್ರಾಮದೇವತೆ ಜಾತ್ರಾ ಮಹೋತ್ಸವದ ಪ್ರಚಾರ ಸಾಮಗ್ರಿಗಳನ್ನು ಗಣ್ಯರು ಬಿಡುಗಡೆ ಮಾಡಿದರು.

ಈ ವೇಳೆ ಗ್ರಾಮದೇವತೆ ಜಾತ್ರಾ ಸೇವಾ ಸಮಿತಿ ಅಧ್ಯಕ್ಷ ಜಗದೀಶ ಬಿಸಲದಿನ್ನಿ ಮಾತನಾಡಿ, ಪಟ್ಟಣದಲ್ಲಿ 5 ವರ್ಷಕೊಮ್ಮೆ ಜರುಗುವ ಗ್ರಾಮದೇವತೆ ಜಾತ್ರೆ ಮೇ 10ರಿಂದ ಪ್ರಾರಂಭವಾಗಲಿದೆ. ಅಂದು ಬೆಳಗ್ಗೆ 9 ಗಂಟೆಗೆ ಪೂಜ್ಯರು ಹಾಗೂ ಗಣ್ಯ ಮಹನಿಯರಿಂದ ಗ್ರಾಮದೇವತೆ ಉತ್ಸವಕ್ಕೆ ಅದ್ಧೂರಿ ಚಾಲನೆ ದೊರೆಯಲಿದೆ ಎಂದರು.

ಮೇ 10ರಂದು ವಿವಿಧ ವಾಧ್ಯಮೇಳಗಳೊಂದಿಗೆ ಸುಮಂಗಲಿಯರಿಂದ ಆರತಿ ಸೇವೆ ಹಾಗೂ ಕುಂಭ ಮೇಳದೊಂದಿಗೆ ದೇವಿಯ ಮೆರವಣಿಗೆಯು ಹಾಲುಮತ ಸಮಾಜದ ಭಾವಿಯಿಂದ ಊರಿನ ಪ್ರಮುಖ ಬೀದಿಗಳಲ್ಲಿ ಹಾಯ್ದು ಅಗಸಿಯ ಮುಖಾಂತರ ಸಂಜೆ 5ಗಂಟೆಗೆ ಪಾದಗಟ್ಟೆಯ ಮೇಲೆ ಪ್ರತಿಷ್ಠಾಪನೆ ಮಾಡಲಾಗುವುದು ಎಂದರು.

ಮೇ 14ರಂದು ಸಕಲ ವಾದ್ಯವೈಭವಗಳೊಂದಿಗೆ ಪಾದಗಟ್ಟಿಯಿಂದ ಶ್ರೀ ದೇವಿ ಮೆರವಣಿಗೆ ಪ್ರಾರಂಭವಾಗಿ ಹೋಮ-ಹವನಗಳ ಯಜ್ಞದ ನಂತರ ಅನೃತಗಳಿಗೆಯಲ್ಲಿ ಮಧ್ಯಾಹ್ನ 12.30ಕ್ಕೆ ಗರ್ಭ ಗುಡಿಯಲ್ಲಿ ಪ್ರವೇಶ ಪ್ರತಿಷ್ಠಾಪಣೆ ಭಕ್ತಾಧಿಗಳ ಜಯ ಘೋಷಣೆಯ ಭಕ್ತಿ ಗೀತೆಯೊಂದಿಗೆ ಕಾಯಿ ಕರ್ಪೂರಗಳ ಆರತಿಯಿಂದ ಮಂಗಲೋತ್ಸವ ಸಮಾರಂಭ ನಡೆಯಲಿದೆ ಎಂದರು.

ಜಾತ್ರೆಯ ಅಂಗವಾಗಿ ದಿ| ಪುಷ್ಪಾಬಾಯಿ ಮಾಂಗಿಲಾಲಜೀ ಬೋರಾ ಅವರ ರಂಗ ವೇದಿಕೆಯಲ್ಲಿ ವಿವಿಧ ನಾಟಕಗಳ ಪ್ರದರ್ಶನ, ಸಂಗೀತ ಸಂಜೆ, ಹಾಸ್ಯ ಸಂಗೀತ ಕಾರ್ಯಕ್ರಮ ನಡೆಯಲಿದೆ ಮತ್ತು ವಿಶೇಷ ಗ್ರಾಮೀಣ ಕ್ರೀಡೆಗಳು, ಕ್ರಿಕೆಟ್‌ ಪಂದ್ಯಾವಳಿ, ಕುಸ್ತಿಗಳು, ರಾಜ್ಯ ಮಟ್ಟದ ಟಗರಿನ ಕಾಳಗ, ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ, ಕಣ್ಣು ಕಟ್ಟಿ ಮೊಸರು ಗಡಿಗೆ ಒಡೆಯುವುದು, ಮ್ಯೂಸಿಕಲ್‌ ಚೇರ್‌, ಸ್ಲೋಮೋಶನ್‌ ಬೈಕ್‌ ರ್ಯಾಲಿ, ಡಬಲ್ಸ್‌ ಕೇರಂ ಸ್ಪರ್ಧೆ, ಪುಟ್ಟಿ ಬಂಡಿ ರೇಸ್‌, ಕುದುರಿ ರೇಶ್‌, ಹಗ್ಗ ಜಗ್ಗಾಟ ಸೇರಿದಂತೆ ಇನ್ನು ಹಲವಾರು ವಿಶೇಷ ಕಾರ್ಯಕ್ರಮಗಳು 11 ದಿನಗಳವರೆಗೆ ನಡೆಯಲಿವೆ ಎಂದರು.

ಗ್ರಾಮದೇವತೆ ಸೇವಾ ಜಾತ್ರಾ ಸಮಿತಿಯ ಉಪಾಧ್ಯಕ್ಷ ಅಜಮಿರ್‌ ಮುಲ್ಲಾ, ವಿಜಯಕುಮಾರ ಕನ್ನೂರ,ಪ್ರಧಾನ ಕಾರ್ಯದರ್ಶಿ ನಾಗಪ್ಪ ತುಂಬಗಿ,ಸಹಕಾರ್ಯದರ್ಶಿ ಗುರುನಾಥ ಚಳ್ಳಮರದ,ಸದಸ್ಯರಾದ ಬಸವರಾಜ ನಿಡಗುಂದಿ, ಶಿವಪುತ್ರಪ್ಪ ಹುಲ್ಲಿಕೇರಿ, ಮಲ್ಲೇಶಪ್ಪ ಹೊದ್ಲುರ , ಪ್ರಭು ನಾಗರಾಳ, ಶಿವಾನಂದ ಶೆಟ್ಟರ್‌, ವೈ.ಎಸ್‌. ಬಂಡಿವಡ್ಡರ, ವಿಷ್ಣು ಗೌಡರ, ಶಂಕ್ರಯ್ಯ ಹಿರೇಮಠ, ಸಂಗಣ್ಣ ಕಂಬಾರ, ತುಕಾರಾಮ ಲಮಾಣಿ, ಉಮರಸಾಬ ಬೇಪಾರಿ, ಈರಣ್ಣ ಬಡಿಗೇರ, ಶ್ರೀಕಾಂತ ಸಜ್ಜನ, ಶರಣಪ್ಪ ಹಗ್ಗೆನ್ನವರ, ಸುರೇಶ ಬಡಿಗೇರ, ಪಪಂ ಸದಸ್ಯ ರಮೇಶ ಮುರಾಳ, ಪಪಂ ಮುಖ್ಯಾಧಿಕಾರಿ ಮಹೇಶ ನೀಡಶೇಶಿ ಇದ್ದರು.

ಟಾಪ್ ನ್ಯೂಸ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.