ಎಸ್.ಟಿ ಜಾತಿ ಪ್ರಮಾಣ ಪತ್ರ ನೀಡದಂತೆ ಒತ್ತಾಯಿಸಿ ಮನವಿ
Team Udayavani, Jun 16, 2020, 7:01 AM IST
ಹುನಗುಂದ: ಸರ್ಕಾರ ಪರಿಶಿಷ್ಟ ಪಂಗಡದ ಪರಿವಾರ ಮತ್ತು ತಳವಾರ ಪರ್ಯಾಯ ಪದಗಳಾದ ಕೋಳಿ ಬೆಸ್ತಾರ, ಮಹಾದೇವ ಕೋಳಿ ಹಾಗೂ ಅಂಬಿಗೇರ (ಸುಣಗಾರ) ಸಮುದಾಯಗಳಿಗೆ ಎಸ್.ಟಿ ಜಾತಿ ಪ್ರಮಾಣ ಪತ್ರ ನೀಡದಂತೆ ಒತ್ತಾಯಿಸಿ ಕರ್ನಾಟಕ ವಾಲ್ಮೀಕಿ ಯುವ ವೇದಿಕೆ ಹುನಗುಂದ ತಾಲೂಕು ಘಟಕದಿಂದ ಸೋಮವಾರ ತಹಶೀಲ್ದಾರ್ ಬಸವರಾಜ ನಾಗರಾಳ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ವಾಲ್ಮೀಕಿ ಯುವ ವೇದಿಕೆ ತಾಲೂಕು ಅಧ್ಯಕ್ಷ ಸಿದ್ದಪ್ಪ ಜಾಲಿಗಿಡದ ಮಾತನಾಡಿ, ವಾಲ್ಮೀಕಿ ನಾಯಕ ಸಮುದಾಯದಲ್ಲಿ ವಾಲ್ಮೀಕಿ, ನಾಯ್ಕ ಮತ್ತು ನಾಯಕ ಮುಖ್ಯ ಜಾತಿಗಳಾಗಿದ್ದು, ಇತ್ತೀಚೆಗೆ ಪರಿವಾರ ಮತ್ತು ತಳವಾರ ಸಮುದಾಯವನ್ನು ಕೇಂದ್ರ ಸರ್ಕಾರ ಎಸ್.ಟಿ ಪಟ್ಟಿಗೆ ಸೇರ್ಪಡೆ ಮಾಡಿದೆ. ಆದರೆ ಪರಿವಾರ ಮತ್ತು ತಳವಾರ ಪರ್ಯಾಯ ಪದಗಳಾದ ಕೋಳಿ ಬೆಸ್ತಾರ, ಮಹಾದೇವ ಕೋಳಿ ಮತ್ತು ಅಂಬಿಗೇರಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಹುನ್ನಾರ ನಡೆದಿದ್ದು, ತಳವಾರ ಮತ್ತು ಪರಿವಾರ ಜಾತಿಯ ಪರ್ಯಾಯ ಇತರೆ ಜಾತಿಯವರು ತಪ್ಪು ಮಾಹಿತಿ ನೀಡಿ ಪ್ರಮಾಣ ಪತ್ರ ಪಡೆಯಲು ಮುಂದಾಗುತ್ತಿದ್ದಾರೆ.
ಆದ್ದರಿಂದ ಯಾವುದೇ ಕಾರಣಕ್ಕೂ ಈ ಜಾತಿಗಳಿಗೆ ಎಸ್.ಟಿ ಪ್ರಮಾಣ ಪತ್ರ ನೀಡಬಾರದು. ಈ ಜಾತಿಯವರು ಪರಿಶಿಷ್ಟ ಪಂಗಡದ ಪ್ರಮಾಣ ಪತ್ರ ಕೇಳಲು ಬಂದರೆ ಪೂರ್ವಾಪರ ವಿಚಾರಣೆ ನಡೆಸಿ ನಂತರ ಪ್ರಮಾಣ ಪತ್ರ ನೀಡಬೇಕೆಂದು ತಹಶೀಲ್ದಾರ್ಗೆ ಮನವಿ ಮಾಡಿದರು.
ಈ ವೇಳೆ ಕಾರ್ಯಕರ್ತರಾದ ಮಂಜುನಾಥ ವಾಲೀಕಾರ, ಹನಮಂತ ತಳವಾರ, ಮಂಜುನಾಥ ತಳವಾರ, ಹನಮಂತ ಸುಣಕಲ್ಲ, ಮಹಾಂತೇಶ ರಾವಜಿ, ಶಿವಾನಂದ ಸುಣಕಲ್ಲ, ಮಂಜುನಾಥ ವಾಲ್ಮೀಕಿ, ಸೋಮಣ್ಣ ವಾಲೀಕಾರ, ತಿಪ್ಪಣ್ಣ ಗೌಡರ, ಪುಂಡಲೀಕ ಪೂಜಾರಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ