2020ರ ವರ್ಷಾಚರಣೆ 2021ರಲ್ಲಿ ಕಾಣಲಿಲ್ಲ

ಕಳೆದ ಬಾರಿ ಬ್ರಿಗೇಡ್‌, ಎಂ.ಜಿ.ರಸ್ತೆಗಳಲ್ಲಿ ಸಂಭ್ರಮಿಸಿದ್ದ ಜನ | ಈ ಬಾರಿ ಹೋಟಲ್‌ಗ‌ಳಲ್ಲೇ ಸಂಭ್ರಮ

Team Udayavani, Jan 1, 2021, 12:28 PM IST

2020ರ ವರ್ಷಾಚರಣೆ 2021ರಲ್ಲಿ ಕಾಣಲಿಲ್ಲ

ಬೆಂಗಳೂರು: ಕೋವಿಡ್ ಮಹಾಮಾರಿಯಿಂದ 2021ರ ಹೊಸ ವರ್ಷಾಚರಣೆ ಸಂಭ್ರಮಕ್ಕೆ ಸಂಪೂರ್ಣ ಬ್ರೇಕ್‌ ಬಿದ್ದಿದೆ. ಸಾರ್ವಜನಿಕರು ಮನೆ, ಹೋಟೆಲ್‌ಗಳಿಗಷ್ಟೇ ಸೀಮಿತವಾಗಿದ್ದಾರೆ.

ಸಿಬಿಡಿ ವ್ಯಾಪ್ತಿಗೆ ಬರುವ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಚರ್ಚ್‌ಸ್ಟ್ರೀಟ್‌, ಸೆಂಟ್‌ ಮಾರ್ಕ್ಸ್ ರಸ್ತೆ, ರೆಸ್ಟ್‌ಹೌಸ್‌ ರಸ್ತೆ ಮತ್ತು ರೆಸಿಡೆನ್ಸಿರಸ್ತೆಗಳಲ್ಲಿ ರಾತ್ರಿಎಂಟು ಗಂಟೆಯಿಂದಲೇ ವಾಹನ ಸಂಚಾರಸಂಪೂರ್ಣ ಬಂದ್‌ ಮಾಡಲಾಗಿತ್ತು. ಈ ಭಾಗದ ಹೋಟೆಲ್‌ಗಳಲ್ಲಿ ಮೊದಲೇ ಟಿಕೆಟ್‌ ಕಾಯ್ದಿರಿಸಿದ್ದ ಮಂದಿಗೆ ಮಾತ್ರ ವಾಹನಗಳನ್ನು ಪಾರ್ಕಿಂಗ್‌ಮಾಡಿ ನಡೆದುಕೊಂಡು ಹೋಗಲು ಅವಕಾಶ ನೀಡಲಾಗಿತ್ತು. ಇನ್ನೂ ಇಂದಿರಾನಗರ, ಕೋರಮಂಗಲ ಸೇರಿ ನಗರದ ಎಲ್ಲ ಕ್ಲಬ್‌, ಹೋಟೆಲ್‌ಗಳಲ್ಲಿಯೂ ಇದೇ ಪರಿಸ್ಥಿತಿ ಇತ್ತು. ಮುಂಗಡ ಪಾಸ್‌ ಪಡೆದು ಹೋಗುವವರು ನೋಂದಣಿಪುಸ್ತಕದಲ್ಲಿ ವಿಳಾಸ, ಮೊಬೈಲ್‌ ನಂಬರ್‌, ಸಹಿ ಹಾಕಿ ತೆರಳುತ್ತಿದ್ದದ್ದು ಕಂಡು ಬಂತು.

ಸಂಚಾರ ದಟ್ಟಣೆ : ನಗರದಲ್ಲಿ ನಿಷೇಧಾಜ್ಞೆ ಜತೆಗೆ ಸಂಚಾರ ಮಾರ್ಗ ಬದಲಾವಣೆ ಹಿನ್ನೆಲೆ ನಗರದ ಕೆಲ ರಸ್ತೆಗಳಲ್ಲಿ ಸಂಚಾರ ದಟ್ಟಣೆ ನಿರ್ಮಾಣವಾಗಿತ್ತು. ಕಬ್ಬನ್‌ ರಸ್ತೆ, ಡಿಕ್ಕನ್‌ ರಸ್ತೆ, ಟ್ರಿನಿಟಿ ವೃತ್ತ ಸೇರಿ ಕೆಲ ರಸ್ತೆಗಳಲ್ಲಿಭಾರೀ ಸಂಚಾರ ದಟ್ಟಣೆ ಉಂಟಾಗಿದ್ದು, ಗಂಟೆಗೂ ಅಧಿಕ ಕಾಲ ವಾಹನ ಸವಾರರು ಟ್ರಾಫಿಕ್‌ನಲ್ಲೇ ನಿಂತು ಹೈರಾಣಾದರು.

ಇದನ್ನೂ ಓದಿ : 2021-ಹೊಸ ವರ್ಷ: ಯುವ ಜನಾಂಗಕಕ್ಕೆ ಅಭಿವೃದ್ಧಿ ಪಥದ ಯೋಜನೆ ಅಗತ್ಯ

ನಿರಂತರ ಗಸ್ತು ತಿರುಗಿದರು… :

ನಗರದ ಸಂಚಾರ ಸೇರಿ ಎಲ್ಲಾ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 15000 ಅಧಿಕಾರಿ- ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರು. ಇದರೊಂದಿಗೆ ಹಿರಿಯ ಪೊಲೀಸ್‌ ಅಧಿಕಾರಿಗಳು ಸೇರಿ ಹೊಯ್ಸಳ, ಗಸ್ತು ಪೊಲೀಸರು ಎಲ್ಲೆಡೆ ನಿರಂತರವಾಗಿ ಗಸ್ತು ತಿರುಗುತ್ತಿದ್ದು, ಹೋಟೆಲ್‌ನಿಂದ ಗ್ರಾಹಕರು ಹೊರಬಾರದಂತೆ ನೋಡಿಕೊಳ್ಳುವಂತೆ ಮಾಲಿಕರಿಗೆ ಸೂಚಿಸಿದ್ದರು. ಹೀಗಾಗಿ ಯಾರೂ ಹೊರಬಾರದೆ ಹೋಟೆಲ್‌ ಆವರಣದಲ್ಲೇ ಹೊಸವರ್ಷಾಚರಣೆ ಆಚರಿಸಿಕೊಂಡು ಮನೆಗೆ ತೆರಳಿದರು. ಈ ಮಧ್ಯೆ ತಡರಾತ್ರಿ ಕೆಲವೆಡೆ ಮದ್ಯ ಸೇವಿಸಿ ವಾಹನ ಚಾಲನೆ ಮಾಡಲು ಮುಂದಾದ ಚಾಲಕರನ್ನು ವಶಕ್ಕೆ ಪಡೆದು ಕಾನೂನು ಕ್ರಮಕೈಗೊಳ್ಳಲಾಯಿತು.

ವಾಹನ ತಪಾಸಣೆ :

ರಾತ್ರಿ 10 ಗಂಟೆಯಿಂದಲೇ ನೈಸ್‌ ರಸ್ತೆ ಸೇರಿ ನಗರದ ಎಲ್ಲೆಡೆ ನಿಯೋಜಿಸಲಾಗಿರುವ ಚೆಕ್‌ ಪೋಸ್ಟ್‌ಗಳಲ್ಲಿ ವಾಹನಗಳ ತಪಾಸಣೆ ನಡೆಸಲಾಯಿತು. 191 ಕಡೆ ನಾಕಾಬಂದಿ ಹಾಕಲಾಗಿದ್ದು, 60 ಸೆಕ್ಟರ್‌ಗಳನ್ನು ನಿರ್ಮಾಣ ಮಾಡಲಾಗಿತ್ತು. ಜತೆಗೆ ಮಹಿಳೆಯರ ರಕ್ಷಣೆಗೆ ಆದ್ಯತೆ ನೀಡಿರುವ ಪೊಲೀಸರು ಪ್ರತಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಮಹಿಳಾಸಹಾಯವಾಣಿ ಕೇಂದ್ರ ತೆರೆಯಲಾಗಿತ್ತು. ಅಲ್ಲದೆ, ನಗರದ 45 ಮೇಲ್ಸೇತುವೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು.

ರಂಗು ಪಡೆದಿತ್ತು 2020 :  ಕಳೆದ ಹೊಸ ವರ್ಷಾಚರಣೆ(2020) ಸಂದರ್ಭದಲ್ಲಿ ರಂಗುರಂಗಿನ ದೀಪಗಳು,ಜನಜಂಗುಳಿಯೊಂದಿಗೆ ಬೆಂಗಳೂರಿನ ರಸ್ತೆಗಳುಕಂಗೊಳಿಸುತ್ತಿದ್ದವು. ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ,ಚರ್ಚ್‌ಸ್ಟ್ರೀಟ್‌, ಕೋರಮಂಗಲ, ಇಂದಿರಾನಗರ ಸೇರಿ ಬೆಂಗಳೂರಿನ ಕೆಲ ರಸ್ತೆಗಳು ಪ್ರತಿ ವರ್ಷ ವಿವಿಧ ಬಣ್ಣದ ದೀಪಗಳಿಂದ ರಂಗುಪಡೆದಿದ್ದವು. ಜತೆಗೆ ಸಾವಿರಾರು ಮಂದಿ ರಸ್ತೆ ಮಧ್ಯೆ ನಿಂತು ಹೊಸವರ್ಷವನ್ನು ಭವ್ಯವಾಗಿ ಸ್ವಾಗತಿಸಿದ್ದರು.

ಟಾಪ್ ನ್ಯೂಸ್

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.