ಕೊಲ್ಕತ್ತಾಗೆ ಜೀವಂತ ಹೃದಯ ರವಾನೆ
Team Udayavani, May 22, 2018, 7:45 AM IST
ಬೆಂಗಳೂರು: ಸೋಮವಾರ ಬೆಳಗ್ಗೆ ಬೆಂಗಳೂರಿನಿಂದ ಕೊಲ್ಕತ್ತಾಗೆ ಜೀವಂತ ಹೃದಯ ರವಾನೆಯಾಗಿದ್ದು, ಜಾರ್ಖಂಡ್ ಮೂಲಕ ದಿಲ್ಚಂದ್(39) ಎಂಬ ವ್ಯಕ್ತಿಗೆ ಹೃದಯವನ್ನು ಯಶಸ್ವಿಯಾಗಿ ಕಸಿ ಮಾಡಲಾಗಿದೆ.
ಶನಿವಾರ ನಗರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ವರುಣ್ (21) ಎಂಬುವರು ತೀವ್ರವಾಗಿ ಗಾಯಗೊಂಡು ಸ್ಪರ್ಶ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಭಾನುವಾರ ಅವರ ಮಿದುಳು ನಿಷ್ಕ್ರಿಯಗೊಂಡು ಸಾವನ್ನಪಿದ ಹಿನ್ನೆಲೆಯಲ್ಲಿ ಅವರು ಕುಟುಂಬದವರು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದ್ದರು.
ಆ ಹಿನ್ನೆಲೆಯಲ್ಲಿ ಆಸ್ಪತ್ರೆಯ ವೈದ್ಯರು ಮೊದಲಿಗೆ ಚೆನ್ನೈನ ಫೋರ್ಟೀಸ್ ಆಸ್ಪತ್ರೆಯನ್ನು ಸಂಪರ್ಕಿಸಿದ್ದಾರೆ. ಆದರೆ, ಅಲ್ಲಿ ಯಾರೂ ಹೃದಯ ಕಸಿ ರೋಗಿಗಳು ದಾಖಲಾಗಿರಲಿಲ್ಲ. ನಂತರ ಕೊಲ್ಕತ್ತಾ ಆಸ್ಪತ್ರೆಗೆ ಸಂಪರ್ಕಿಸಿದಾಗ ಹೃದಯ ಕಸಿಗಾಗಿ ದಿಲ್ಚಂದ್ ಅವರು ದಾಖಲಾಗಿರುವುದು ತಿಳಿಸಿದೆ. ಆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಕೊಲ್ಕತ್ತಾಗೆ ಜೀವಂತ ಹೃದಯ ರವಾನೆ ಮಾಡಲಾಗಿದ್ದು, ಇಬ್ಬರ ರಕ್ತದ ಗುಂಪುಗಳು ಒಂದೇ ಆಗಿದ್ದರಿಂದ ಹೃದಯ ಕಸಿಗೆ ಸಹಾಯಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.