ಪೆಟ್ರೋಲ್ ಮುಗಿವ ತನಕ ಕದ್ದ ಬೈಕ್ನಲ್ಲಿ ಸುತ್ತಾಟ!
Team Udayavani, Oct 1, 2022, 2:21 PM IST
ಬೆಂಗಳೂರು: ಶೋಕಿಗಾಗಿ ಬೈಕ್ ಕಳ್ಳತನ ಮಾಡಿ ಪೆಟ್ರೋಲ್ ಖಾಲಿ ಆಗುವವರೆಗೂ ತಿರುಗಾಡಿ ಪರಾರಿಯಾಗುತ್ತಿದ್ದ ಇಬ್ಬರು ಆರೋಪಿಗಳನ್ನು ಸಂಜಯ್ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸುಹೇಲ್, ರಿಯಾಜ್ ಬಂಧಿತರು. ಆರೋಪಿಗಳಿಂದ 6 ದ್ವಿಚಕ್ರವಾಹನ ಜಪ್ತಿ ಮಾಡಲಾಗಿದೆ.
ಆರೋಪಿಗಳು ಮದ್ಯಪಾನ ಮಾಡಿ ನಗರದ ವಿವಿಧೆಡೆ ತಿರುಗಾಡುತ್ತಿದ್ದರು. ಅವರಿಗೆ ಇಷ್ಟ ಆಗುವ ಬೈಕ್ ಅನ್ನು ಹುಡುಕಿ ಲಾಕ್ ಮುರಿದು ಕದ್ದೊಯ್ಯು ತ್ತಿದ್ದರು. ಬೈಕ್ನ ಪೆಟ್ರೋಲ್ ಖಾಲಿ ಯಾಗುವ ತನಕ ಸುತ್ತಾಡುತ್ತಿದ್ದರು. ಪೆಟ್ರೋಲ್ ಖಾಲಿಯಾಗುತ್ತಿದ್ದಂತೆ ಬೈಕ್ ಅನ್ನು ರಸ್ತೆ ಬದಿ ಬಿಟ್ಟು ಪರಾರಿ ಯಾಗುತ್ತಿದ್ದರು. ಕೆಲ ಬೈಕ್ಗಳನ್ನು ಸಿಕ್ಕಿದ ಬೆಲೆಗೆ ಮಾರಾಟ ಮಾಡಿದ್ದರು.
ಸಿಸಿ ಕ್ಯಾಮೆರಾ ಕೊಟ್ಟ ಸುಳಿವು : ಸಂಜಯ್ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಬೈಕ್ ಕಳ್ಳತನವಾಗಿತ್ತು. ಈ ಬಗ್ಗೆ ಬೈಕ್ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬೈಕ್ ಕಳ್ಳತನವಾದ ಆಸು-ಪಾಸಿನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದಾಗ ಆರೋಪಿಗಳು ಕದ್ದ ಬೈಕ್ನಲ್ಲಿ ಹೋಗಿರುವುದು ಕಂಡು ಬಂದಿತ್ತು. ಸಿಸಿ ಕ್ಯಾಮೆರಾ ದೃಶ್ಯದಲ್ಲಿ ಸೆರೆಯಾದ ಆರೋಪಿಗಳ ಮುಖಚಹರೆ ಆಧರಿಸಿ ಶೋಧ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ