ನಾನು ಬದುಕಿರಲು ಜಾಫರ್ ಶರೀಫ್ ಕಾರಣ: ದ್ವಾರಕೀಶ್
Team Udayavani, Nov 26, 2018, 6:20 AM IST
ಬೆಂಗಳೂರು:“ನನಗೆ ಗಾಡ್ಫಾದರ್ ಅಂತಹ ಇದ್ರೆ ಅದು ಜಾಫರ್ ಶರೀಫ್’ ಹೀಗೆ ಹೇಳಿ ಗದ್ಗದಿತರಾದರು ಹಿರಿಯ ನಟ, ನಿರ್ಮಾಪಕ ದ್ವಾರಕೀಶ್.
ಅವರು ಹೀಗೆ ಹೇಳಲು ಕಾರಣ ಜಾಫರ್ ಶರೀಫ್ ಮಾಡಿದ ಸಹಾಯ. ದ್ವಾರಕೀಶ್ ಅವರ ಹೃದಯ ಶಸ್ತ್ರಚಿಕಿತ್ಸೆಯನ್ನು ಮಾಡಿಸಿದವರು ಜಾಫರ್ ಶರೀಫ್. ಈ ಬಗ್ಗೆ ಮಾತನಾಡಿದ ದ್ವಾರಕೀಶ್, “ನಾನು ಇವತ್ತು ಬದುಕಿರಲೂ ಕಾರಣ ಜಾಫರ್ ಶರೀಫ್.
ನನ್ನ ಹಾರ್ಟ್ ಆಪರೇಷನ್ ಮಾಡಿಸಿದ್ದು ಅವರೇ. ನನಗೆ ಗಾಡ್ಫಾದರ್ ಅಂತಹ ಇದ್ರೆ ಅದು ಜಾಫರ್ ಶರೀಫ್. ಅವರಿಲ್ಲದೇ ನಾನಿಲ್ಲ. ಅವರೇ ನನಗೆಲ್ಲ. ನನ್ನ ಹೆಂಡತಿ ಚಿತ್ರದುರ್ಗದವಳು. ಜಾಫರ್ ಶರೀಪ್ ಕೂಡಾ ಚಿತ್ರದುರ್ಗ. ಅಂಬುಜಾ ಹಾಗೂ ಜಾಫರ್ “ಹೋಗೋ ಬಾರೋ’ ಎಂದು ಮಾತನಾಡಿಸುತ್ತಿದ್ದರು. ನಿನ್ನೆ ಅವಳನ್ನು ಕರೆದುಕೊಂಡು ಹೋಗಿ ಅಂತಿಮ ದರ್ಶನ ಮಾಡಿಕೊಂಡು ಬಂದೆ. ರೈಲ್ವೆ ಸಚಿವರಾಗಿದ್ದಾಗ ಜಾಫರ್ ಶರೀಫ್, ಸಾಕಷ್ಟು ಕೆಲಸವನ್ನು ಮಾಡಿದ್ದಾರೆ. ಕನ್ನಡಿಗರಿಗೆ ಕೆಲಸ ಕೊಟ್ಟಿದ್ದಾರೆ. ಬಹಳ ಜನಕ್ಕೆ ಸಹಾಯ ಮಾಡಿದ್ದಾರೆ ಕೂಡಾ. ಇತ್ತೀಚೆಗಷ್ಟೇ ಅವರಲ್ಲಿ ಫೋನ್ನಲ್ಲಿ ಮಾತನಾಡಿದ್ದೆ. ಇವತ್ತು ಒಬ್ಬ ದೊಡ್ಡ ನಾಯಕನನ್ನು ಕಳೆದುಕೊಂಡಿದ್ದೇವೆ’ ಎಂದು ದ್ವಾರಕೀಶ್ ಹನಿಗಣ್ಣಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…