ಪ್ರತಿ ಗ್ರಾಮಕ್ಕೊಂದು ಸ್ಮಶಾನ ವ್ಯವಸ್ಥೆ
Team Udayavani, Mar 22, 2017, 9:15 AM IST
ವಿಧಾನಪರಿಷತ್ತು: ಜೀವಂತ ಬದುಕಿನಲ್ಲಂತೂ ಸಮಾನತೆ ಮರೀಚಿಕೆಯಾಗಿದೆ, ಸಾವು-ಸಮಾಯಲ್ಲಾದರೂ ಸಮಾನತೆ ತನ್ನಿ, ಜಾತಿಗೊಂದು ಸ್ಮಶಾನ ಯಾಕೆ, ಎಲ್ಲ ಜಾತಿಗಳಿಗೂ ಅನ್ವಯವಾಗುವಂತೆ ಗ್ರಾಮಕ್ಕೊಂದು ಸಾರ್ವಜನಿಕ ಸ್ಮಶಾನ ಮಾಡಿ.
ಈ ರೀತಿ ಸ್ಮಶಾನದ ವಿಚಾರದಲ್ಲಿ ಗಂಭೀರ ಸ್ವರೂಪದ ಚರ್ಚೆಗೆ ಬುಧವಾರ ಮೇಲ್ಮನೆ ವೇದಿಕೆಯಾಯಿತು.
ಪಕ್ಷೇತರರ ಸದಸ್ಯ ಎಂ.ಡಿ. ಲಕ್ಷ್ಮೀನಾರಾಯಣ (ಅಣ್ಣಯ್ಯ) “ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿವಿಧ ಸಮುದಾಯಗಳಿಗೆ
ರುದ್ರಭೂಮಿಗಾಗಿ ಸರ್ಕಾರಿ ಜಮೀನು ಮಂಜೂರು ಮಾಡುವ’ ಬಗ್ಗೆ ಪ್ರಸ್ತಾಪಿಸಿದರು. ಇದಕ್ಕೆ ಪೂರಕವಾಗಿ ಚರ್ಚೆ ಬೆಳೆಯಿತು.
ಕಾಂಗ್ರೆಸ್ನ ವಿ.ಎಸ್. ಉಗ್ರಪ್ಪ ಮಾತನಾಡಿ, ಮನುಷ್ಯನ ಜೀವಂತ ಬದುಕಿನಲ್ಲಿ ಸಮಾತೆ ಮರೀಚಿಕೆಯಾಗಿದೆ. ಆದರೆ ಆತನ ಸಾವಿನಲ್ಲಾದರೂ ಸಮಾನತೆ ತರಬೇಕು. ಜಾತಿ-ಧರ್ಮ ಆಧಾರಿತ ರುದ್ರಭೂಮಿಗಳನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ದಲಿತರಿಗೆ-ಸವರ್ಣೀಯರಿಗೆ ಬೇರೆ ಬೇರೆ ಸ್ಮಶಾನ ಅನ್ನುವುದನ್ನು ಸರ್ಕಾರ ನಿಲ್ಲಿಸಬೇಕು. ಅಂತ್ಯಕ್ರಿಯೆಗಳಲ್ಲಿನ ಭೇದ-ಭಾವ ಹೊಗಲಾಡಿಸಲು ನೀತಿ ರೂಪಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿಯ ರಾಮಚಂದ್ರಗೌಡ ಮಾತನಾಡಿ, ಮನುಷ್ಯ ಬದುಕಿರುವವರೆಗೆ ಮಾತ್ರ ಜಾತಿ, ಸತ್ತ ಮೇಲೆ ಯಾವ ಜಾತಿ, ಸತ್ತ ಮೇಲೆ ಎಲ್ಲರೂ ಹೆಣ ಎಂದು ಹೇಳುತ್ತಾರೆ. ದೇವಸ್ಥಾನಕ್ಕೆ, ಹೊಟೇಲ್ಗಳಿಗೆ ಹೋಗಲು ಜಾತಿ ಬೇಕಿಲ್ಲ. ಆದರೆ, ಸ್ಮಶಾನಕ್ಕೆ ಹೋಗಲು ಜಾತಿ ಬೇಕು. ಧರ್ಮಕ್ಕೊಂದು ಸ್ಮಶಾನ ಒಪ್ಪಬಹುದು. ಆದರೆ, ಜಾತಿಗೊಂದು ಸ್ಮಶಾನ ಮಾಡುತ್ತಾ ಹೋದರೆ ಹೇಗೆ. ಜಾತಿಗೊಂದು ಸ್ಮಶಾನ ಬೇಕಾ ಅಥವಾ ಧರ್ಮಕ್ಕೊಂದು ಸ್ಮಶಾನ ಬೇಕಾ ಅನ್ನುವುದನ್ನು ಸರ್ಕಾರ ಮೊದಲು ತೀರ್ಮಾನಿಸಬೇಕು ಎಂದು ಸಲಹೆ ನೀಡಿದರು.
ಗ್ರಾಮಕ್ಕೊಂದು ಸ್ಮಶಾನ: ಚರ್ಚೆಗೆ ಉತ್ತರಿಸಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ರಾಜ್ಯದ ಪ್ರತಿ ಗ್ರಾಮಕ್ಕೊಂದು ಸ್ಮಶಾನ ವ್ಯವಸ್ಥೆ ಮಾಡಲಾಗುವುದು. ಸ್ಮಶಾನಕ್ಕಾಗಿ ಸರ್ಕಾರಿ ಜಮೀನು ಲಭ್ಯವಿದ್ದರೆ ವಾರದೊಳಗೆ ಅದನ್ನು ಸ್ಮಶಾನ ಭೂಮಿ ಎಂದು ಕಾಯ್ದಿರಿಸಲು ಕ್ರಮ ಕೈಗೊಳ್ಳಲಾಗುವುದು. ಖಾಸಗಿ ಜಮೀನಿದ್ದರೆ ಸಂಬಂಧಪಟ್ಟವರಿಂದ ಅದನ್ನು ಖರೀದಿಸಲಾಗುವುದು. ಅವಶ್ಯಕತೆ ಬಿದ್ದ ಕಡೆ ಜಮೀನು ಸ್ವಾಧೀನ ಸಹ ಪಡಿಸಿಕೊಳ್ಳಲಾಗುವುದು. 2014-15ನೇ ಸಾಲಿನಲ್ಲಿ ರುದ್ರಭೂಮಿ ಸೌಲಭ್ಯಕ್ಕಾಗಿ ಖಾಸಗಿ ಜಮೀನು ಖರೀದಿಸಲು ಅವಶ್ಯಕತೆಯಿದ್ದ 11 ಜಿಲ್ಲೆಗಳಿಗೆ 9.99 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ