Fraud: ಪಚ್ಚೆಕಲ್ಲು ಮಾರಾಟದ ಹೆಸರಿನಲ್ಲಿ ಉದ್ಯಮಿಗೆ 51 ಲಕ್ಷ ರೂ. ವಂಚನೆ


Team Udayavani, Jan 6, 2024, 11:08 AM IST

Fraud: ಪಚ್ಚೆಕಲ್ಲು ಮಾರಾಟದ ಹೆಸರಿನಲ್ಲಿ ಉದ್ಯಮಿಗೆ 51 ಲಕ್ಷ ರೂ. ವಂಚನೆ

ಬೆಂಗಳೂರು: ಕೋಟ್ಯಂತರ ರೂ. ಬೆಲೆ ಬಾಳುವ ಪಚ್ಚೆಕಲ್ಲು ಖರೀದಿಸಲು ಸಹಕರಿಸಿದರೆ ಮಾರಾಟ ಮಾಡಿ ಬಂದ ದುಡ್ಡಿನಲ್ಲಿ ಹೆಚ್ಚಿನ ಲಾಭಾಂಶ ನೀಡುವುದಾಗಿ ಉದ್ಯಮಿಯೊಬ್ಬರಿಗೆ ಬರೋಬ್ಬರಿ 51 ಲಕ್ಷ ರೂ. ಟೋಪಿ ಹಾಕಿದ್ದಾರೆ.

ಉದ್ಯಮಿ ರಿಚ್‌ಮಂಡ್‌ ಟೌನ್‌ನ ನಿವಾಸಿ ಶೌಕತ್‌ ಅಲಿ (50) ವಂಚನೆಗೊಳಗಾದವರು. ಇವರು ನೀಡಿದ ದೂರಿನ ಆಧಾರದ ಮೇಲೆ ಅಶೋಕ್‌ ನಗರ ಠಾಣೆಯಲ್ಲಿ ಅಶ್ವಕ್‌ ಬೇಗ್‌, ಶಾನವಾಜ್‌ ಮಿರ್ಜಾ, ಸಾಜೀದ್‌ ವಿರುದ್ಧ ಎಫ್ಐಆರ್‌ ದಾಖಲಾಗಿದೆ.

15 ವರ್ಷಗಳಿಂದ ಆರೋಪಿಗಳು ದೂರುದಾರ ಶೌಕತ್‌ ಅಲಿಗೆ ಪರಿಚಯವಿದ್ದರು. 2023 ಏಪ್ರಿಲ್‌ನಲ್ಲಿ ದೂರವಾಣಿ ಕರೆಮಾಡಿ ನನಗೆ ಗೊತ್ತಿರುವ ಒಬ್ಬರ ಬಳಿ ಪಚ್ಚೆಕಲ್ಲು ಇದ್ದು ಅದನ್ನು ಖರೀದಿಸಲು ಕೂಡ ಒಬ್ಬರು ತಯಾರಿದ್ದು, ಅದನ್ನು ಖರೀದಿ ಮಾಡಲು ನಮ್ಮ ಬಳಿ ಹಣವಿಲ್ಲ ಎಂದು ಆರೋಪಿಗಳು ದೂರುದಾರರಿಗೆ ತಿಳಿಸಿದ್ದರು. ನೀವು ಹಣ ನೀಡಿದರೆ ಅದನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭ ನೀಡುವುದಾಗಿ ಆಮೀಷವೊಡ್ಡಿದ್ದರು. ಈ ಬಗ್ಗೆ ದೂರುದಾರರು ವಿಚಾರಿಸಿದಾಗ 53 ಲಕ್ಷ ರೂ. ಎಂದಿದ್ದರು.

ಆದರೆ, ಇದನ್ನು 1 ಕೋಟಿ ರೂ.ಗೆ ಖರೀದಿಸುವವರು ನಮಗೆ ಗೊತ್ತಿದ್ದಾರೆ ಎಂದು ಆರೋಪಿಗಳು ಶೌಕತ್‌ ಅಲಿಯನ್ನು ನಂಬಿಸಿದ್ದರು. ನೀವು ಈಗ ಹಣ ಹಾಕಿದರೆ ನಿಮ್ಮ ಹಣವನ್ನು ಡಬಲ್‌ ಮಾಡಿಕೊಡುವುದಾಗಿ ಹೇಳಿದ್ದರು. ಆರೋಪಿಗಳ ಮಾತಿನ ಮೋಡಿಗೆ ಮರುಳಾದ ಶೌಕತ್‌ ಅಲಿ, ಹಂತವಾಗಿ ಆರೋಪಿಗಳಿಗೆ 51 ಲಕ್ಷ ರೂ. ನೀಡಿದ್ದರು.

ಅಸಲು ದುಡ್ಡು ನೀಡದೇ ವಂಚನೆ: ಇದಾದ ಬಳಿಕ ಪಚ್ಚೆ ಕಲ್ಲು ಎಂದು ಯಾವುದೋ ಕಲ್ಲನ್ನು ತೆಗೆದುಕೊಂಡು ಶೌಕತ್‌ ಅಲಿ ಮನೆಗೆ ಬಂದ ಆರೋಪಿಗಳು ಇವರನ್ನು ವೈಟ್‌ಫೀಲ್ಡ್‌ ನ­ಲ್ಲಿರುವ ಸ್ವಾಮೀಜಿಯೊಬ್ಬರ ಬಳಿ ಕರೆದೊಯ್ದು ಪರಿಚಯಿಸಿ ಇವರೇ ನಿಮ್ಮ ಪಚ್ಚೆ ಕಲ್ಲನ್ನು ತೆಗೆದುಕೊಳ್ಳುವವರು ಎಂದು ಹೇಳಿದ್ದರು. ನಂತರ ಸ್ವಾಮೀಜಿಯವರು ಕೆಲದಿನಗಳ ನಂತರ ನನ್ನಿಂದ ಪಚ್ಚೆ ಕಲು ಮಾರಾಟ ಮಾಡಲು ಆಗುವುದಿಲ್ಲವೆಂದು ತಿಳಿಸಿದ್ದರು. ನಂತರ ಆಶ್ವಾಕ್‌ ಅವರು ಜೈಪುರದಲ್ಲಿ ಚೀನಾದಿಂದ ಬಂದಿರುವವರು ಇದನ್ನು ತೆಗೆದುಕೊಳ್ಳುತ್ತಾರೆ ಎಂದು ಹೇಳಿದಾಗ ಶೌಕತ್‌ ಅವರೊಂದಿಗೆ ಜೈಪುರಕ್ಕೆ ಹೋಗಿ 1 ತಿಂಗಳು ತಂಗಿದ್ದರು. ಇಷ್ಟಕ್ಕೆ ಸುಮ್ಮನಾಗದ ಆರೋಪಿಗಳು ನಾವು ಮಾರಾಟ ಮಾಡಿ ಹಣ ನೀಡುತ್ತೇವೆ, ನೀವು ಬೆಂಗಳೂರಿಗೆ ಹೋಗಿ ಎಂದು ಹೇಳಿದ್ದರು.

ಇದಾದ ಬಳಿಕ ಹಲವು ತಿಂಗಳು ಕಳೆದರೂ ಆರೋಪಿಗಳು ಅಸಲು ದುಡ್ಡು ಕೊಡದೇ, ಲಾಭಾಂಶವೂ ನೀಡದೇ ವಂಚಿಸಿರುವುದು ಶೌಕತ್‌ ಅಲಿ ಗಮನಕ್ಕೆ ಬಂದಿದೆ.

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.