ಕೊರೊನಾ ನಿರ್ವಹಣೆಯಲ್ಲಿ ಸಮನ್ವಯತೆ
Team Udayavani, May 27, 2021, 2:43 PM IST
ಬೆಂಗಳೂರು: ದೇಶ ಹಾಗೂ ರಾಜ್ಯವನ್ನು ಕಾಡುತ್ತಿರುವಕೊರೊನಾ ನಿರ್ವಹಣೆಯಲ್ಲಿ ಕೇಂದ್ರ, ರಾಜ್ಯಸರ್ಕಾರಗಳ ಕಾರ್ಯವೈಖರಿ, ಪಕ್ಷದಲ್ಲಿ ಆಂತರಿಕಬೆಳವಣಿಗೆಗಳು, ಟೂಲ್ ಕಿಟ್ ಪ್ರಕರಣ ಸೇರಿದಂತೆಪ್ರಸಕ್ತ ವಿದ್ಯಮಾನಗಳ ಕುರಿತು ಬಿಜೆಪಿ ರಾಷ್ಟ್ರೀಯಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ “ಉದಯವಾಣಿ’ಯೊಂದಿಗೆ ಮನ ಬಿಚ್ಚಿ ಮಾತನಾಡಿದ್ದಾರೆ.
ಕೊರೊನ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದಕಾರ್ಯವೈಖರಿಯ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಕಳೆದ 15 ದಿನಗಳಲ್ಲಿ ಸಮನ್ವಯತೆಕಾಣಿಸುತ್ತಿದೆ. ನಿಜವಾದ ಸಮಸ್ಯೆಗುರುತಿಸಿ ಪರಿಹಾರ ಒದಗಿಸುವ ಕೆಲಸಮಾಡುತ್ತಿದ್ದಾರೆ. ಆರಂಭದಲ್ಲಿ ನಮಗೆಸ್ವಲ್ಪ ಗೊಂದಲ ಆಯ್ತು. ಅದಕ್ಕೆ ಕಾರಣವೇಗವಾಗಿ ಕೊರೊನಾ ಬಂದಿದ್ದು, ಬೆಡ್, ರೆಮ್ಡೆಸಿವಿಯರ್, ಆಕ್ಸಿಜನ್ ಸಿಗದಿರುವುದು. ಆಕ್ಸಿಜನ್ಸಮಸ್ಯೆ ಆಗುತ್ತದೆ ಎಂದು ಯಾರೂ ಆಲೋಚನೆಮಾಡಿರಲಿಲ್ಲ. ಈಗ ಬದಲಾವಣೆ ಕಣ್ಣಿಗೆ ಕಾಣಿಸುತ್ತಿದೆ.
ಕೇಂದ್ರ, ರಾಜ್ಯ ಸರ್ಕಾರಗಳು ಕೊರೊನಾಗಿಂತ ಚುನಾವಣೆಗೆ ಆದ್ಯತೆ ನೀಡಿದ್ದವು ಎಂಬ ಆರೋಪ ಕೇಳಿ ಬರುತ್ತಿದೆ?
ಮುಂದಾಲೋಚನೆ ಇಲ್ಲದೆ ಇದ್ದಿದ್ದರೆ,ಒಂದು ವರ್ಷದಲ್ಲಿ ಲಸಿಕೆ ಉತ್ಪಾದನೆಮಾಡಲು ಸಾಧ್ಯವಾಗುತ್ತಿರಲಿಲ್ಲ. ಸ್ವತಃ ಪ್ರಧಾನಿಲ್ಯಾಬ್ಗಳಿಗೆ ಹೋಗಿ ವಿಜ್ಞಾನಿಗಳಿಗೆ ಉತ್ತೇಜನ ನೀಡಿದರು. ಆ ಸಮಯದಲ್ಲಿ ಮೋದಿ ವಿರೋಧಿಗಳುವ್ಯಾಕ್ಸಿನೇಷನ್ ವಿರುದ್ಧ ಏನು ಮಾತನಾಡಿದರು ಎನ್ನುವುದು ಅಂಗೈ ಹುಣ್ಣಿನಷ್ಟೇ ಸ್ಪಷÌ. ಆತ್ಮವಿಶ್ವಾಸಇರುವ ಪ್ರಧಾನಿ ನರೇಂದ್ರ ಮೋದಿ ಇಲ್ಲದಿದ್ದರೆ, ಸಾವಿನಸಂಖ್ಯೆ ಇನ್ನೂ ಎರಡು ಪಟ್ಟು ಹೆಚ್ಚಾಗುತ್ತಿತ್ತು.
ಚಾಮರಾಜನಗರ ದುರಂತಕ್ಕೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡಬೇಕು ಅಂತಹೇಳಿದ್ದಿರಿ,ಆದರೆ, ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ ?
ದುರಂತದ ಬಗ್ಗೆ ಕೋರ್ಟ್ ರಚಿಸಿದ್ದ ಸಮಿತಿ ಕೋರ್ಟ್ಗೆವರದಿ ನೀಡಿದೆ. ಕೋರ್ಟ್ ಏನು ಹೇಳುತ್ತದೆಯೋಅದನ್ನು ನೋಡಬೇಕು. ಕೋರ್ಟ್ ಹೇಳಿದ ಮೇಲೆಯಾರನ್ನೂ ರಕ್ಷಿಸಲಾಗುವುದಿಲ್ಲ. ಸರ್ಕಾರ ಸಂದರ್ಭಬಂದಾಗ ತನ್ನ ಇಚ್ಛಾಶಕ್ತಿಯನ್ನು ಪ್ರಕಟಗೊಳಿಸಬೇಕು.
ಡಾ.ಅಶ್ವತ್ಥನಾರಾಯಣ,ಡಾ. ಸುಧಾಕರ್ ನಡುವೆ ಭಿನ್ನಾಭಿಪ್ರಾಯ ಹೆಚ್ಚಾಗಿದೆಯಲ್ಲಾ ?
ಇಬ್ಬರೂ ವೈದ್ಯರಿದ್ದಾರೆ,ಬುದ್ದಿವಂತರಿದ್ದಾರೆ. ಇಬ್ಬರನಡುವಿನ ಭಿನ್ನಾಭಿಪ್ರಾಯಗಮನಿಸಿದ್ದೇನೆ. ಪರಸ್ಪರಸಮಾಲೋಚಿಸಿ ಹೇಳಿಕೆ ನೀಡಿದರೆ, ಅನಗತ್ಯ ಗೊಂದಲಸೃಷ್ಟಿಯಾಗುವುದು ತಪ್ಪುತ್ತದೆ.
ಶಂಕರ ಪಾಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
MUST WATCH
ಹೊಸ ಸೇರ್ಪಡೆ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ