ಕಾರುಗಳಿಗೆ ಸಾಲ ಸಿಗೋದು ಕಷ್ಟವೇನಲ್ಲ


Team Udayavani, Oct 14, 2019, 3:07 AM IST

karugalige

ಬೆಂಗಳೂರು: ಪ್ರಸ್ತುತ ಪರಿಸ್ಥಿತಿಗಳಲ್ಲಿ ಕಾರು ಕೊಳ್ಳುವ ಗ್ರಾಹಕರಿಗೆ ಶೋ ರೂಂ ಮತ್ತು ಬ್ಯಾಂಕ್‌ಗಳು ತುಂಬಾ ಗ್ರಾಹಕ ಸ್ನೇಹಿಯಾಗಿದೆ. ಸಾಮಾನ್ಯರು ಈ ಹಿಂದೆ ಕಾರ್‌ ಲೋನ್‌ ಪಡೆಯಲು ಬ್ಯಾಂಕ್‌ ಮ್ಯಾನೇಜರ್‌ಗಳ ಮುಂದೆ ಹರಸಾಹಸ ಪಡಬೇಕಿತ್ತು. ಆದರೆ, ಇಂದಿನ ಚಿತ್ರಣ ಸಂಪೂರ್ಣವಾಗಿ ತದ್ವಿರುದ್ದವಾಗಿದೆ. ಇಂದು ಕಾರ್‌ ಕೊಳ್ಳುವ ಗ್ರಾಹಕರು ಸಿಕ್ಕರೇ ಸಾಕು ಕ್ಷಣದಲ್ಲಿ ಸಾಲ ಮಂಜೂರು ಮಾಡಲು ಬ್ಯಾಂಕರ್‌ಗಳು ಸಿದ್ಧರಿದ್ದಾರೆ.

ಕಾರು ಕೊಳ್ಳುವುದು ಕಷ್ಟದ ಮಾತು ಎನ್ನುತ್ತಿದ್ದ ಕಾರ್‌ ಪ್ರಿಯರಿಗೆ ಈ ವರ್ಷ ಗೋಲ್ಡನ್‌ ಇಯರ್‌ ಎಂದೇ ಕರೆಯಬಹುದು. ಸದ್ಯ ಆಟೋಮೊಬೈಲ್‌ ಮಾರುಕಟ್ಟೆ ಮಂದಗತಿಯಲ್ಲಿ ಸಾಗುತಿದ್ದು, ಇದಕ್ಕೆ ವೇಗ ನೀಡಲು ಕಾರ್‌ ಕಂಪನಿಗಳು ಮತ್ತು ಶೋ ರೂಂಗಳು ಈ ಹಿಂದೆಂದೂ ನೀಡದಂತ ಆಫ‌ರ್‌ಗಳನ್ನು ನೀಡುತ್ತಿವೆ. ಹಿಂದಿನಂತೆ ಬ್ಯಾಂಕ್‌ ಲೋನ್‌ ಪಡೆ ಯಲು ಗ್ರಾಹಕರು ಬ್ಯಾಂಕ್‌ಗಳಿಗೆ ಅಲೆದಾ ಡುವಂತ ಪರಿಸ್ಥಿತಿ ಈಗ ಮಾಯವಾಗಿದೆ. ಈಗ ಶೋ ರೂಂಗಳಲ್ಲೇ ಬ್ಯಾಂಕ್‌ಗಳು ಲೋನ್‌ ವಿಭಾಗಗಳನ್ನು ತೆರೆದಿದ್ದು, ಬ್ಯಾಂಕ್‌ ಗಳಲ್ಲಿ ಕೂಡ ಕಾರ್‌ ಲೋನ್‌ ಗಳಿಗೆ ಪ್ರತ್ಯೇಕ ವಿಭಾಗಗಳಿವೆ. ಎರಡೂ ವಿಭಾಗಗಳಲ್ಲಿ ಕಾರ್‌ ಲೋನ್‌ ಬಗ್ಗೆ ಮಾಹಿತಿ ನೀಡಲಾಗುತ್ತದೆ.

ಗ್ರಾಹಕರ ಪಾನ್‌ ಕಾರ್ಡ್‌ ಮಾಹಿತಿ ನೀಡಿದರೆ ಕ್ಷಣದಲ್ಲೇ ಸಿಬಿಲ್‌ ಸ್ಕೋರ್‌ ಮಾಹಿತಿ ಸಿಗುತ್ತದೆ. ಸಂಬಳ, ಬ್ಯಾಂಕ್‌ ಅಕೌಂಟ್‌, ಕಾರ್ಯನಿರ್ವಹಿಸುವ ಕಚೇರಿ ಸಂಬಂಧ ಅಗತ್ಯ ದಾಖಲೆಗಳನ್ನು ಪೂರೈಸಿದರೆ ಗ್ರಾಹಕರ ಸಿಬಿಲ್‌ ಸ್ಕೋರ್‌ ಮತ್ತು ಆದಾಯಕ್ಕೆ ಅನುಗುಣವಾಗಿ ಗ್ರಾಹಕರ ಲೋನ್‌ ಮಿತಿಯನ್ನು ಸ್ಥಳದಲ್ಲೇ ತಿಳಿಸುತ್ತಾರೆ. ಗ್ರಾಹಕರ ಸಮ್ಮತಿ ಸೂಚಿಸಿದರೆ ಸ್ಥಳದಲ್ಲೇ ಲೋನ್‌ ಕೂಡ ಅಪ್ರೂವ್‌ ಮಾಡಿ ಕಾರ್‌ ಖರೀದಿಸಲು ಸಹಕರಿಸುತ್ತಾರೆ. ಇದಿಷ್ಟು ಸ್ಪಾಟ್‌ ಲೋನ್‌ ಪ್ರಕ್ರಿಯೆಯಾದರೆ, ಆನ್‌ ಲೈನ್‌ನಲ್ಲಿ ಕಾರ್‌ ಲೋನ್‌ ಪಡೆಯುವುದು ಮತ್ತಷ್ಟು ಸುಲಭವಾಗಿದೆ.

ಲೋನ್‌ ಪ್ರೊಸೆಸಿಂಗ್‌ ಫೀಸ್‌ ಫ್ರೀ: ಈ ಹಿಂದೆ ಕಾರ್‌ ಲೋನ್‌ ಪಡೆಯಲು ಗ್ರಾಹಕರು ಕಾರ್‌ ಲೋನ್‌ ಪ್ರೊಸೆಸಿಂಗ್‌ ಫೀಸ್‌ ಕಟ್ಟಬೇಕಿತ್ತು. ಅಂದರೆ ತಾವು ಲೋನ್‌ ಪಡೆಯುವ ಮೊತ್ತದಲ್ಲಿ ಶೇ. 1ರಷ್ಟು ಪ್ರೊಸೆಸಿಂಗ್‌ ಫೀಸ್‌ ಎಂದು ಬ್ಯಾಂಕ್‌ ಗಳಿಗೆ ಕಟ್ಟಬೇಕಿತ್ತು. ಆದರೆ ಈಗ ಇದನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ಪ್ರೊಸೆಸಿಂಗ್‌ ಫೀಸ್‌ ಇಲ್ಲದೆ ಲೋನ್‌ ನೀಡುತ್ತಿವೆ . ಒಂದು ವೇಳೆ ಗ್ರಾಹಕ 10ಲಕ್ಷ ರೂ.ನ ಕಾರ್‌ ಲೋನ್‌ ಪಡೆದರೆ 10ಸಾವಿರ ರೂ.ನಷ್ಟು ಉಳಿತಾಯ ಮಾಡಬಹುದು ಎನ್ನುತ್ತಿವೆ ಬ್ಯಾಕಿಂಗ್‌ ವಲಯಗಳು.

100% ಫೈನಾನ್ಸ್‌ ಸ್ಕೀಂ: ಈ ಹಿಂದೆ ಕಾರುಗಳನ್ನು ಖರೀದಿಸಲು ಕಾರಿನ ಒಟ್ಟು ಬೆಲೆಯ ಕನಿಷ್ಠ ಶೇ.30ರಷ್ಟು ಡೌನ್‌ ಪೇಯೆ¾ಂಟ್‌ ಮಾಡಬೇಕಿತ್ತು. ಇನ್ನುಳಿದ ಶೇ.70ಕ್ಕೆ ಬ್ಯಾಂಕ್‌ಗಳು ಫೈನಾನ್ಸ್‌ ಮಾಡುತಿದ್ದವು. ಆದರೆ, ಈಗ ಪ್ರಸಕ್ತ ಸಾಲಿನಲ್ಲಿ ಏಪ್ರಿಲ್‌ ತಿಂಗಳಿಂದ ಮಾರುಕಟ್ಟೆಗೆ ಹೊಸದಾಗಿ ಪರಿಚಯವಾಗುತ್ತಿರುವ ಕಾರುಗಳಿಗೆ ಬ್ಯಾಂಕ್‌ಗಳು 100 % ಫೈನಾನ್ಸಿಂಗ್‌ ಮಾಡುತ್ತಿವೆ.

ಬಡ್ಡಿ ದರ ಕಡಿಮೆ ಮಾಡಲಾಗಿದೆ: ಕಳೆದ ವರ್ಷ ಕಾರ್‌ ಲೋನ್‌ ಬಡ್ಡಿ ದರ ಶೇ.9.5 -10ರವರೆಗೆ ಇತ್ತು. ಆದರೆ ಈಗ ಅದು ಶೇ.8.6ಕ್ಕೆ ಇಳಿದಿದೆ. ಇದರಿಂದ ಗ್ರಾಹಕರು ಸುಮಾರು 10 ರಿಂದ 20ಸಾವಿರದಷ್ಟು ಪ್ರತಿ ವರ್ಷ ಉಳಿತಾಯ ಮಾಡಬಹುದು,. ಇಡೀ ಭಾರತೀಯ ಬ್ಯಾಂಕಿಂಗ್‌ ಇತಿಹಾಸದಲ್ಲೇ ಇಷ್ಟು ಕಡಿಮೆ ಕಾರ್‌ ಲೋನ್‌ ಬಡ್ಡಿ ದರ ಹಿಂದೆಂದೂ ಕಾಣಲು ಸಾಧ್ಯವಿಲ್ಲ.

ಪ್ರಸಕ್ತ ಸಾಲಿನಲ್ಲಿ ಕಾರು ಲೋನ್‌ ಮೇಲಿನ ಬಡ್ಡಿ ದರ ಕಡೆಮೆ ಮಾಡಲಾಗಿದೆ. ಕಳೆದ ವರ್ಷಕ್ಕಿಂತ ಶೇ.1ರಷ್ಟು ಕಾರ್‌ ಲೋನ್‌ ಬಡ್ಡಿ ಕಡಿತಗೊಳಿಸಲಾಗಿದೆ. ಕಾರ್‌ ಕೊಳ್ಳುವವರ ಸಹಾಯಕ್ಕೆ ಬ್ಯಾಂಕ್‌ಗಳು ಸದಾ ಸಿದ್ದವಾಗಿವೆ. ಕಾರ್‌ ಲೋನ್‌ ನೀಡಲು ಲೋನ್‌ ಮೇಳಗಳನ್ನು ಮಾಡಲಾಗುತ್ತಿದೆ. ಆಟೋಮೊಬೈಲ್‌ ಮಾರುಕಟ್ಟೆ ಮತ್ತೆ ಚೇತರಿಸಿಕೊಳ್ಳುತ್ತಿದೆ.
-ನಾಗರಾಜ್‌, ಬ್ಯಾಂಕ್‌ ನೌಕರ ಸಂಘದ ಕಾರ್ಯದರ್ಶಿ

ಬ್ಯಾಂಕ್‌ಗಳಲ್ಲಿ ಹಿಂದಿಗಿಂತಲೂ ಕಾರಿನ ಸಾಲಗಳು ಸುಲಭವಾಗಿ ಸಿಗುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ಕಾರು ಕೊಳ್ಳುವ ಗಾರಹಕರಿಗೆ ಹೆಚ್ಚು ಬೇಗ ಸಾಲ ದೊರೆಯಲಿದ್ದು, ಈ ಹಿಂದೆ ಬ್ಯಾಂಕ್‌ ಗಳು ಪಡೆಯುತಿದ್ದ ಲೋನ್‌ ಪ್ರೊಸೆಸಿಂಗ್‌ ಫೀಸ್‌ ಈಗ ಪಡೆಯುತ್ತಿಲ್ಲ. ಗ್ರಾಹಕರ ಆದಾಯದ ವಿವರಗಳನ್ನು ಪರಿಶೀಲಿಸಿ 30ನಿಮಿಷದಲ್ಲಿ ಕಾರ್‌ ಲೋನ್‌ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ.
-ಶ್ರೀನಿವಾಸ್‌, ಬ್ಯಾಂಕ್‌ ಕಾರ್‌ ಲೋನ್‌ ವಿಭಾಗದ ಮುಖ್ಯಸ್ಥ

* ಲೋಕೇಶ್‌ ರಾಮ್‌

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.