ಕಲಾಕ್ಷೇತ್ರದಲ್ಲಿ ಕಳೆಗಟ್ಟಿದ ಗ್ರಾಮೀಣ ಸೊಗಡು


Team Udayavani, Apr 17, 2017, 12:29 PM IST

raj-nenapu.jpg

ಬೆಂಗಳೂರು: ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಗ್ರಾಮೀಣ ಸೊಗಡು. ಆವರಣದಲ್ಲಿ ರಾಗಿಯ ರಾಶಿ, ಪಕ್ಕದಲ್ಲಿ ನಿಂತ ಎತ್ತಿನ ಬಂಡಿ, ಅದಕ್ಕೆ ಪೂರಕವಾಗಿ ಡೊಳ್ಳುಕುಣಿತ, ಇದರೊಂದಿಗೆ ಮೇರು ನಟ ಡಾ.ರಾಜ್‌ಕುಮಾರ್‌ ಅವರ ನೆನಪುಗಳ ಬುತ್ತಿಯಿಂದ ಕಳೆಗಟ್ಟಿತ್ತು. ಹೆಸರೇ ಸೂಚಿಸುವಂತೆ ಅದು ಡಾ.ರಾಜ್‌ಕುಮಾರ್‌ ಜಾನಪದ ಹಬ್ಬ. ಈ ಹಬ್ಬಕ್ಕೆ ರಾಜ್‌ಕುಮಾರ್‌ ಅವರ ಸಹೋದರಿ ಎಸ್‌.ಪಿ. ನಾಗಮ್ಮ, ರಾಘವೇಂದ್ರ ರಾಜ್‌ಕುಮಾರ್‌ ದಂಪತಿ, ವರದರಾಜ್‌ ಮತ್ತು ರಾಜ್‌ಕುಮಾರ್‌ ಅವರ ಕುಟುಂಬ ಮತ್ತಷ್ಟು ಮೆರುಗು ತುಂಬಿತು.
 
ರಾಗಿ ಧಾನ್ಯದ ರಾಶಿಗೆ ರಾಜ್‌ಕುಮಾರ್‌ ಕುಟುಂಬ ಪೂಜೆ ಸಲ್ಲಿಸಿತು. ನಂತರ ಡೊಳ್ಳುಕುಣಿತ ಕಲಾವಿದರು ಮನರಂಜಿಸಿದರು. ಈ ಮಧ್ಯೆ ಚಾಮರಾಜನಗರ ಜಿಲ್ಲೆಯ ಮಂಟೇಸ್ವಾಮಿ ಮತ್ತು ಮಲೆಮಹದೇಶ್ವರನನ್ನು ಕುರಿತ ಜನಪದ ಗೀತೆಗಳನ್ನು ಮಕ್ಕಳು ಹಾಡಿದರೆ, ಅದೇ ಜಿಲ್ಲೆಯ ಸಾಹಿತಿಗಳು, ಜನಪದ ತಜ್ಞರು, ಅಭಿಮಾನಿಗಳು ಡಾ.ರಾಜ್‌ ಅವರೊಂದಿಗೆ ಕಳೆದ ಕ್ಷಣಗಳನ್ನು ಮೆಲುಕುಹಾಕಿದರು. 

ಜಾನಪದ ತಜ್ಞ ಡಾ.ಕೃಷ್ಣಮೂರ್ತಿ ಹನೂರು ಮಾತನಾಡಿ, “ಮಲೆಮಹದೇಶ್ವರ ಶ್ರವಣದೊರೆ ಸಂಹಾರಕ್ಕೆ ಹೋಗುವ ಮುನ್ನ ಗುಡಿಸಲಿನಲ್ಲಿ ಮುದ್ದಮ್ಮ ಮಾಡಿಟ್ಟಿದ್ದ ಸೊಪ್ಪಿನ ಸಾರು ಮತ್ತು ಮುದ್ದೆ ತಿಂದು ಮುಂದೆ ಹೋಗುತ್ತಾನೆ. ಅದೇ ರೀತಿ, ದೊಡ್ಡ ಯೂನಿಟ್‌ ಜತೆ ಸಿನಿಮಾ ಶೂಟಿಂಗ್‌ಗೆ ಬಂದಿದ್ದ ರಾಜ್‌ಕುಮಾರ್‌, ಯಾರದೋ ಒಬ್ಬರ ಮನೆಯಲ್ಲಿ ಊಟ ಮಾಡುತ್ತಾರೆ. ಇವು ಸರಳತೆಗೆ ಮಾದರಿಗಳು. ಡಾ.ರಾಜ್‌ಕುಮಾರ್‌ ಅವರು ನಿಷ್ಕಲ್ಮಷವಾಗಿ ಕನ್ನಡಿಗರನ್ನು ಪ್ರೀತಿಸಿದರು ಮತ್ತು ಗೌರವಿಸಿದರು. ಅದಕ್ಕೆ ಪೂರಕವಾಗಿ ಕನ್ನಡಿಗರೂ ಅವರಿಗೆ ಅಷ್ಟೇ ಪ್ರೀತಿ ಕೊಟ್ಟಿದ್ದಾರೆ’ ಎಂದು ಸ್ಮರಿಸಿದರು. 

ರಾಜ್‌ಕುಮಾರ್‌ ಅವರೇ ಹೇಳುವಂತೆ “ನಾನು ನಟಿಸಿದ ಎಲ್ಲ ಪಾತ್ರಗಳೂ ನನ್ನನ್ನು ತಿದ್ದಿದ ಪಾತ್ರಗಳು. ನಾನು ಅಭಿನಯಿಸಿದ್ದೆಲ್ಲವೂ ಅನುಭೂತಿಯೇ’. ರಾಜ್‌ಕುಮಾರ್‌ ಅವರ ತಂದೆ ಪುಟ್ಟಸ್ವಾಮಯ್ಯ ಕೂಡ ರಂಗಭೂಮಿಯಲ್ಲಿ ಅದ್ವಿತೀಯ ಪಾತ್ರಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡವರು. ಅವರಿಂದ ಸಹಜವಾಗಿಯೇ ಆ ಕಲೆ ಮತ್ತು ಅವರ ವಿನಯ ರಾಜ್‌ಗೆ ಬಳುವಳಿಯಾಗಿ ಬಂದಿದೆ. ನಂತರ ರಂಗಭೂಮಿಯಿಂದ ಸಿನಿಮಾರಂಗ ಪ್ರವೇಶಿಸುವ ಮೂಲಕ ಹೊಸರೂಪ ಕಂಡುಕೊಂಡರು ಎಂದು ಹೇಳಿದರು.  

ನಾ ನೋಡಿದ ಮೊದಲ ಸಿನಿಮಾ: ಸಾಹಿತಿ ಪ್ರೊ.ಕೆ. ಮರುಳಸಿದ್ದಪ್ಪ ಮಾತನಾಡಿ, “ನಾನು ನನ್ನ ಜೀವನದಲ್ಲಿ ನೋಡಿದ ಮೊದಲ ಸಿನಿಮಾ, ಬೇಡರ ಕಣ್ಣಪ್ಪ. ಅದು ಡಾ.ರಾಜ್‌ಕುಮಾರ್‌ ಅವರ ಮೊದಲ ಚಿತ್ರ ಆಗಿರದಿದ್ದರೂ, ಆ ಚಿತ್ರ ಅವರಿಗೆ ಅವರನ್ನು ಚಿತ್ರರಂಗದಲ್ಲಿ ಉಚ್ಛಾ†ಯ ಸ್ಥಿತಿ ತಲುಪಲು ನಾಂದಿಯಾಯಿತು. ರಾಜ್‌ಕುಮಾರ್‌ ಅವರೊಂದಿಗೆ ಊಟ ಮಾಡುವ ಸದವಕಾಶವೂ ನನಗೆ ಸಿಕ್ಕಿತು. ಅತ್ಯಂತ ಅಚ್ಚುಕಟ್ಟಾಗಿ ಊಟ ಮಾಡಿದ ಅವರು, ಕೊನೆಗೆ ಅಡುಗೆ ಮಾಡಿದವರಿಂದ ಹಿಡಿದು ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಅಷ್ಟು ಸಜ್ಜನಿಕೆ ವ್ಯಕ್ತಿತ್ವ ರಾಜ್‌ಕುಮಾರ್‌ ಅವರದ್ದು ಎಂದು ಮೆಲುಕು ಹಾಕಿದರು.

ಅಭಿಮಾನಿಗಳ ದೇವರು: ಜಾನಪದ ತಜ್ಞ ಡಾ.ಬೈರಮಂಗಲ ರಾಮೇಗೌಡ, “ಡಾ.ರಾಜ್‌ಕುಮಾರ್‌, ಅಭಿಮಾನಿಗಳೇ ದೇವರು’ ಎಂದರು. ಅದೇ ರೀತಿ, ಅಭಿಮಾನಿಗಳ ಪಾಲಿಗೆ ಡಾ. ರಾಜ್‌ ಕೂಡ ದೇವರಾದರು ಎಂದರು. ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ, “ರಾಜ್‌ಕುಮಾರ್‌, ಕನ್ನಡ ಪ್ರೇಕ್ಷಕರನ್ನು ಉನ್ನತ ಸ್ಥಿತಿಗೆ ಕೊಂಡೊಯ್ದರು. ಎನಗಿಂತ ಕಿರಿಯರಿಲ್ಲ ಎಂಬ ಮಾತಿನಂತೆ ತಮ್ಮ ಜೀವನದ ಮೂಲಕ ತೋರಿಸಿಕೊಟ್ಟರು. ಅವರು ಪುರಾಣ ಪುರುಷರಾಗಬೇಕಾದರೆ, ಇನ್ನೊಂದರಡು ಶತಮಾನಗಳು ಹಿಡಿಯುತ್ತದೆ’ ಎಂದು ಹೇಳಿದರು. ದೊಡ್ಡಹುಲ್ಲೂರು ರುಕ್ಕೋಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ “ನೇಗಿಲಯೋಗಿ ಡಾ.ರಾಜ್‌ಕುಮಾರ್‌’ ಕುರಿತ ಗೋಷ್ಠಿಯಲ್ಲಿ ಕವಿ ಚಂದ್ರಶೇಖರ ಪಾಟೀಲ (ಚಂಪಾ) ಮಾತನಾಡಿದರು.

ಟಾಪ್ ನ್ಯೂಸ್

1-eewqewq

UNICEF ಇಂಡಿಯಾಗೆ ಕರೀನಾ ಕಪೂರ್‌ ರಾಯಭಾರಿ

MOdi (3)

Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ

mamata

Sandeshkhali ಪ್ರಕರಣ ಬಿಜೆಪಿಯದ್ದೇ ಪಿತೂರಿ: ಸಿಎಂ ಮಮತಾ ಆಕ್ರೋಶ

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಿನ್ನದ ನಾಡಿನ ಕಲಾವಿದೆ ವಿದ್ಯಾಶ್ರೀ ಪ್ರತಿಭೆ ಅನಾವರಣ-ನೃತ್ಯಗಂಗಾ ಪ್ರದರ್ಶನ

ಚಿನ್ನದ ನಾಡಿನ ಕಲಾವಿದೆ ವಿದ್ಯಾಶ್ರೀ ಪ್ರತಿಭೆ ಅನಾವರಣ-ನೃತ್ಯಗಂಗಾ ಪ್ರದರ್ಶನ

Theft Case: ನಕಲಿ ಕೀ ಬಳಸಿ ಬ್ಯೂಟಿಷಿಯನ್‌ ಮನೆಗೆ ಕನ್ನ

Theft Case: ನಕಲಿ ಕೀ ಬಳಸಿ ಬ್ಯೂಟಿಷಿಯನ್‌ ಮನೆಗೆ ಕನ್ನ

Arrested: ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ 9 ವರ್ಷ ಬಳಿಕ ಬಂಧನ

Arrested: ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ 9 ವರ್ಷ ಬಳಿಕ ಬಂಧನ

Crime: ರೌಡಿಶೀಟರ್‌ನಿಂದ ಆಟೋ ಚಾಲಕನ ಹತ್ಯೆ

Crime: ರೌಡಿಶೀಟರ್‌ನಿಂದ ಆಟೋ ಚಾಲಕನ ಹತ್ಯೆ

Theft Case: ಕೆಲಸಕ್ಕಿದ್ದ ಮನೆಯಲ್ಲೇ 34 ಲಕ್ಷ ಒಡವೆ ಕದ್ದ ಕಳ್ಳಿ

Theft Case: ಕೆಲಸಕ್ಕಿದ್ದ ಮನೆಯಲ್ಲೇ 34 ಲಕ್ಷ ಒಡವೆ ಕದ್ದ ಕಳ್ಳಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Onion

Onion ರಫ್ತು ನಿಷೇಧ ತೆರವು: ಕಳೆದ ವರ್ಷಕ್ಕಿಂತ ಕಡಿಮೆ ಉತ್ಪಾದನೆ ಸಾಧ್ಯತೆ

1-eewqewq

UNICEF ಇಂಡಿಯಾಗೆ ಕರೀನಾ ಕಪೂರ್‌ ರಾಯಭಾರಿ

MOdi (3)

Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ

mamata

Sandeshkhali ಪ್ರಕರಣ ಬಿಜೆಪಿಯದ್ದೇ ಪಿತೂರಿ: ಸಿಎಂ ಮಮತಾ ಆಕ್ರೋಶ

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.