ಪೌರಾಣಿಕ ಪಾತ್ರಗಳು ಮಾದರಿಯಾಗಲಿ
Team Udayavani, Sep 17, 2018, 12:23 PM IST
ಬೆಂಗಳೂರು: ಸಾಧನಾ ಮಾರ್ಗದಲ್ಲಿ ಇರುವವರಿಗೆ ಭಾರತೀಯ ಮಹಾಕಾವ್ಯದ ಮೇರು ವ್ಯಕ್ತಿತ್ವಗಳು ಮಾದರಿ ಆಗಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಕತ್ತರಿಗುಪ್ಪೆಯ ಪೂರ್ಣಪ್ರಜ್ಞ ಧ್ಯಾನಪೀಠದ ಸಭಾಂಗಣದಲ್ಲಿ ಮಾಧ್ವ ಯುವ ಪ್ರತಿಷ್ಠಾನ ಸಂಸ್ಥೆಯ ದಶಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಅವರು, ರಾಮಾಯಣ- ಮಹಾಭಾರತ ಕಾಲದಲ್ಲಿ ರಾಜನೀತಿ, ಪ್ರಜಾನೀತಿ ಸರ್ವಜನಪ್ರಿಯವಾಗಿತ್ತು. ಆದರೆ, ಇಂದು ಸಾಂಸ್ಕೃತಿಕ, ಧಾರ್ಮಿಕ ವಲಯಗಳಿಗೆ ರಾಜಾಶ್ರಯ ಅತಿ ಕಡಿಮೆಯಾಗಿದೆ. ಇಂಥ ಸಂದರ್ಭದಲ್ಲಿ ನಮ್ಮ ಸಮಾಜದ ಸಾಧಕರನ್ನು ಗುರುತಿಸುವುದು, ಗೌರವಿಸುವುದು ನಮ್ಮ ಹೆಮ್ಮೆಯಾಗಬೇಕು ಎಂದು ಹೇಳಿದರು.
ಈ ನಿಟ್ಟಿನಲ್ಲಿ ಮಾಧ್ವ ಯುವ ಪ್ರತಿಷ್ಠಾನ ನಮ್ಮ ಸಂಸ್ಕೃತಿ ಪಾಲನೆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದೆ ಎಂದು ಶ್ಲಾ ಸಿದರು. ಜತೆಗೆ,ಯುವ ಸಮುದಾಯದ ಜಿಜ್ಞಾಸೆಯನ್ನು ಆನ್ ಲೈನ್ ಮೂಲಕ ಪರಿಹರಿಸಿ ಧರ್ಮ-ಸಂಸ್ಕೃತಿ ಮಾರ್ಗದಲ್ಲಿ ನಡೆಯಲು ಪ್ರೇರಣೆ ನೀಡುತ್ತಿರುವುದು ಮಾದರಿ ಕಾರ್ಯ ಎಂದರು.
ಕಾರ್ಯಕ್ರಮದಲ್ಲಿ ವಿದ್ವಾಂಸ ಕೇಶವಾಚಾರ್ಯ, ಪತ್ರಕರ್ತ ಎ.ಆರ್ ರಘುರಾಮ್, ಸಮೀರ ರಾವ್ ಮೂಗೂರು, ಕದ್ರಿ ಶ್ರೀ ಕೃಷ್ಣ, ಧಾರ್ಮಿಕ ಗ್ರಂಥ ಪ್ರಕಾಶಕ ವಿಜಯ ವಿಕ್ರಮ ದಾಸ, ಮಹಿಳಾ ಸಂಘಟಕಿ ಪದ್ಮಜಾ ಅವರಿಗೆ ಮಾಧ್ವ ಯುವ ಪ್ರತಿಷ್ಠಾನದಿಂದ “ಮಾಧ್ವರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಪೇಜಾವರ ಮಠದ ಕಿರಿಯ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥರು, ಪ್ರತಿಷ್ಠಾನದ ಅಧ್ಯಕ್ಷ ಅರವಿಂದ ಮದಭಾವಿ, ಮುಖ್ಯ ಸಂಚಾಲಕ ಬಿಂದು ಮಾಧವಾಚಾರ್ಯ ಕೆರೂರು ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
MUST WATCH
ಹೊಸ ಸೇರ್ಪಡೆ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ
ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ