ಖಾಲಿ ಬಿದ್ದಿವೆ 30 ಆಕ್ಸಿಜನ್  ಬೆಡ್‌ಗಳು


Team Udayavani, May 20, 2021, 3:25 PM IST

Oxygen Bed

ಬೆಂಗಳೂರು: ಒಂದೊಂದು ಆಕ್ಸಿಜನ್‌ ಹಾಸಿಗೆಗಾಗಿ ಕೊರೊನಾ ಸೋಂಕಿತರು ಪರದಾಡುತ್ತಿದ್ದಾರೆ. ರೋಗಿಗಳನ್ನು ಆ್ಯಂಬುಲೆನ್ಸ್‌ನಲ್ಲಿ ಒಂದು ದಿಕ್ಕಿನಿಂದಮತ್ತೂಂದು ದಿಕ್ಕಿಗೆ ಅಲೆದಾಡುತ್ತಿದ್ದಾರೆ. ಆದರೆ,ನಗರದ ಹೃದಯಭಾಗದಲ್ಲಿ ಕಳೆದ  ಐದು ತಿಂಗಳಿಂದ 30ಕ್ಕೂ ಹೆಚ್ಚು ಆಕ್ಸಿಜನ್‌ ಹಾಸಿಗೆಗಳುಖಾಲಿ ಬಿದ್ದಿವೆ!

ಮಾಗಡಿ ರಸ್ತೆಯಲ್ಲಿರುವ ಕುಷ್ಠರೋಗಆಸ್ಪತ್ರೆಯಲ್ಲಿ ಆಮ್ಲಜನಕ ಸೇರಿದಂತೆ ಎಲ್ಲ ಅಗತ್ಯಸೌಲಭ್ಯಗಳನ್ನು ಒಳಗೊಂಡ 30ಕ್ಕೂ ಹೆಚ್ಚುಹಾಸಿಗೆಗಳು ಜನವರಿಯಿಂದ ಖಾಲಿ ಇವೆ. ಸರ್ಕಾರ ಇತ್ತ ತಿರುಗಿಯೂ ನೋಡಿಲ್ಲ. ವೈದ್ಯರನ್ನೂನಿಯೋಜಿಸಿಲ್ಲ. ಇದರಿಂದ ಲೆಕ್ಕಕ್ಕುಂಟು ಸೇವೆಗಿಲ್ಲ ಎನ್ನುವಂತಾಗಿದೆ. ಕ್ಸಿಜನ್‌ ಸಹಿತ ಹಾಸಿಗೆಗಳ ವಾರ್ಡ್‌ ಇದ್ದೂ ಇಲ್ಲದಂತಾಗಲು ಪ್ರಮುಖ ಕಾರಣ ಉದ್ದೇಶಿತ  ಆಸ್ಪತ್ರೆಯಲ್ಲಿನ ವೈದ್ಯರನ್ನು ಇತರೆ ಆಸ್ಪತ್ರೆಗಳಿಗೆ ನಿಯೋಜನೆ ಮಾಡಿದ್ದು, ರೋಗಿಗಳ ಚಿಕಿತ್ಸೆ ಮತ್ತು ನಿರ್ವಹಣೆ ವೈದ್ಯಕೀಯ ಸಿಬ್ಬಂದಿ ಕೊರತೆ ಉಂಟಾಗಿದೆ ಎಂದು ಮೂಲಗಳು  ಉದಯವಾಣಿಗೆ ತಿಳಿಸಿವೆ.

ರೋಗಿಗಳ ಒತ್ತಡ ಕಡಿಮೆ ಇದೆ ಎಂಬ ನೆಪದಲ್ಲಿ ಕುಷ್ಠರೋಗ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 6 ವೈದ್ಯರು, 6 ಶುಶ್ರೂಷಕರು, ಇಬ್ಬರು ಲ್ಯಾಬ್‌ಟೆಕ್ನಿಷಿಯನ್‌ ಸೇರಿ 14 ಜನ ವೈದ್ಯಕೀಯ ಸಿಬ್ಬಂದಿಯನ್ನು ಕೆ.ಸಿ.ಜನರಲ್‌ ಆಸ್ಪತ್ರೆ ಮತ್ತು ಜಯನಗರಜನರಲ್‌ ಆಸ್ಪತ್ರೆಗೆ ನಿಯೋಜಿಸಲಾಗಿದೆ.

ಇದರಿಂದ ಸೋಂಕು ಹಾವಳಿ ಪೀಕ್‌ನಲ್ಲಿರುವಹಾಗೂ ಆಕ್ಸಿಜನ್‌ ಹಾಸಿಗೆಗಳಿಗೆ ತೀವ್ರ ಬೇಡಿಕೆ ಇರುವ ಸಂದರ್ಭದಲ್ಲೇ ವಾರ್ಡ್‌ನಲ್ಲಿ ವೈದ್ಯಕೀಯ ಸಿಬ್ಬಂದಿ ಇಲ್ಲದಂತಾಗಿದೆ. ಕೊರೊನಾ ಸೋಂಕಿನಿಂದ ದೇಹದಲ್ಲಿ ಆಮ್ಲಜನಕ ಕೊರತೆಯಿಂದ ನನ್ನ ಪತಿ ತೀವ್ರ ಒದ್ದಾಡುತ್ತಿದ್ದರು.ಆಕ್ಸಿಜನ್‌ ಬೆಡ್‌ಗಾಗಿ ಹೆಬ್ಟಾಳದ ಸುತ್ತಮುತ್ತ ಆರೆಂಟು ಆಸ್ಪತೆಗಳಿಗೆ ಅಲೆದಾಡಿದ್ದಾಯಿತು. ಕೊನೆಗೆ ವೈಟ್‌ಫೀಲ್ಡ್‌ನಲ್ಲಿ ಬೆಡ್‌ ದೊರಕಿತು. ನಿತ್ಯಸಾವಿರಾರು ರೂಪಾಯಿ ಬಿಲ್‌ ಆಗುತ್ತಿದೆ. ಒಂದುವೇಳೆ ಇಲ್ಲಿಯೇ ಕುಷ್ಠರೋಗ ಆಸ್ಪತ್ರೆಯಲ್ಲಿ ಸಿಕ್ಕಿದ್ದರೆ,ಎಷ್ಟೋ ಅನುಕೂಲ ಆಗುತ್ತಿತ್ತು ಎಂದು ಹೆಬ್ಟಾಳನಿವಾಸಿ ರಾಜೇಶ್ವರಿ ತಿಳಿಸಿದರು.

ಈ ಮಧ್ಯೆ ಆಕ್ಸಿಜನ್‌ ಹಾಸಿಗೆಗಳ ವಾರ್ಡ್‌ಸೌಲಭ್ಯದ ಸಮರ್ಪಕ ಬಳಕೆ ಆಗದಿರುವುದಕ್ಕೆಆರೋಗ್ಯ ಇಲಾಖೆಯದ್ದು ಮಾತ್ರವಲ್ಲ; ಸಾರ್ವಜನಿಕರ ತಪ್ಪುಕಲ್ಪನೆ ಕೂಡ ಕಾರಣ ಎನ್ನಲಾಗಿದೆ. ಇದಕ್ಕೂಮುನ್ನ ಕಳೆದ ಸೆಪ್ಟೆಂಬರ್‌- ಡಿಸೆಂಬರ್‌ ಅವಧಿಯಲ್ಲಿಇಲ್ಲಿನ ಆಕ್ಸಿಜನ್‌ಹಾಸಿಗೆಗಳ ವಾರ್ಡ್‌ಕಾರ್ಯನಿರ್ವಹಿಸಿದೆ. ಆಗ,ಕುಷ್ಠರೋಗ ಆಸ್ಪತ್ರೆ ಎಂಬಕಾರಣಕ್ಕೆಕೆಲ ಸೋಂಕಿತರು ಇಲ್ಲಿ ದಾಖಲಾಗಲು ಹಿಂದೇಟು ಹಾಕಿದ್ದಾರೆ.

ಇದೇ ಕಾರಣಕ್ಕೆ ಬಿಬಿಎಂಪಿ ವಾರ್‌ ರೂಂಪೋರ್ಟಲ್‌ನಲ್ಲಿ ಈ ಆಸ್ಪತ್ರೆಯನ್ನು ಮಾಗಡಿ ರಸ್ತೆಯಕೋವಿಡ್‌ ಕೇರ್‌ ಸೆಂಟರ್‌ ಎಂದು ನಮೂದಿಸಿದಉದಾಹರಣೆಯೂ ಇದೆ.ಪೋರ್ಟಲ್‌ನಲ್ಲಿ ಹಾಸಿಗೆ ಬುಕ್ಕಿಂಗ್‌ಮಾಡಿಸಿದ ರೋಗಿಗಳು ಅಥವಾ ಅವರಸಂಬಂಧಿಗಳು ಆ್ಯಂಬುಲೆನ್ಸ್‌ನಲ್ಲಿ ಕುಷ್ಠರೋಗಆಸ್ಪತ್ರೆ ಬಾಗಿಲಿಗೆ ಬರುತ್ತಿದ್ದಂತೆ, ಈ ಆಸ್ಪತ್ರೆಗೆ ದಯವಿಟ್ಟು ಬೇಡ. ಬೇರೆ ಕಡೆ ಕರೆದೊಯ್ಯಿರಿ ಎಂದು ಅಲವತ್ತುಕೊಂಡ ಉದಾಹರಣೆಗಳು ಇವೆ. ಆಗ ಆಸ್ಪತ್ರೆ ಸಿಬ್ಬಂದಿ, ಭಯಪಡುವ ಅಗತ್ಯವಿಲ್ಲ. ತಪ್ಪುಕಲ್ಪನೆ ಬದಿಗೊತ್ತಿ, ದಾಖಲಾಗಿಎಂದು ಬೇಡಿಕೊಂಡರೂ ಕೆಲವರು ವಾಪಸ್‌ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದೇ ಕಾರಣಕ್ಕೆ 2020ರ ಸೆಪ್ಟೆಂಬರ್‌- 2021ರಜನವರಿ ಮೊದಲ ವಾರದವರೆಗೆ ಈ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆದುಕೊಂಡ ಸೋಂಕಿತರು ಕೇವಲ 40ಜನ. ನಂತರದಲ್ಲಿ ರೋಗಿಗಳ ಒತ್ತಡವೂ ಕಡಿಮೆಇದ್ದುದರಿಂದ ಬೇರೆಕಡೆಗೆ ಸಿಬ್ಬಂದಿಯನ್ನು ನಿಯೋಜಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.