ರಸ್ತೆ ಅಪಘಾತ: ಬಾಲಕಿ ದುರ್ಮರಣ
Team Udayavani, May 1, 2019, 3:00 AM IST
ಬೆಂಗಳೂರು: ಅಣ್ಣನ ಹುಟ್ಟುಹಬ್ಬಕ್ಕೆ ಉಡುಗೊರೆ ಖರೀದಿಸಿ ಮನೆಗೆ ವಾಪಸ್ ಬರುತ್ತಿದ್ದ ಎಂಟು ವರ್ಷದ ಬಾಲಕಿಯ ಮೇಲೆ ಟ್ಯಾಂಕರ್ ಹರಿದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಾಣಸವಾಡಿ ಸಂಚಾರ ಠಾಣಾ ವ್ಯಾಪ್ತಿಯ ಲಿಂಗಾರಾಜುಪುರ ಆಯಿಲ್ ಮಿಲ್ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಶಕ್ತಿವೇಲು ಎಂಬುವರ ಪುತ್ರಿ ಜನನಿ (8) ಮೃತ ಬಾಲಕಿ. ಕೃತ್ಯ ಎಸಗಿದ ಟ್ಯಾಂಕರ್ ಚಾಲಕ ಪ್ರದೀಪ್ನನ್ನು ಬಂಧಿಸಲಾಗಿದೆ ಎಂದು ಬಾಣಸವಾಡಿ ಸಂಚಾರ ಪೊಲೀಸರು ಹೇಳಿದರು. ಲಿಂಗರಾಜುಪುರದ ಆಯಿಲ್ ಮಿಲ್ ರಸ್ತೆಯ ಜಾನಕಿರಾಮ ಲೇಔಟ್ನಲ್ಲಿ ವಾಸವಾಗಿರುವ ಶಕ್ತಿವೇಲು ಅವರಿಗೆ ಇಬ್ಬರು ಮಕ್ಕಳು.
ಈ ಪೈಕಿ ಮಂಗಳವಾರ ಹಿರಿಯ ಪುತ್ರ ತನುಷ್ ಜನ್ಮದಿನವಿತ್ತು. ಈ ಹಿನ್ನೆಲೆಯಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ಜನನಿ ಬೆಳಗ್ಗೆ 10 ಗಂಟೆ ಸುಮಾರಿಗೆ ಸಹೋದರನ ಹುಟ್ಟಹಬ್ಬಕ್ಕೆ ಉಡುಗೊರೆ ತರಲು ಅಂಗಡಿ ಹೋಗಿ ವಾಪಸ್ ಬರುತ್ತಿದ್ದಾಗ, ವೇಗವಾಗಿ ಬಂದ ಟಿಪ್ಪರ್ ಹಿಂದಿನಿಂದ ಜನನಿಗೆ ಡಿಕ್ಕಿ ಹೊಡೆದಿದೆ.
ಕೆಳಗೆ ಬಿದ್ದ ಆಕೆ ಮೇಲೆ ಟಿಪ್ಪರ್ನ ಹಿಂಭಾಗದ ಚಕ್ರಗಳು ಹರಿದು ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ವಿಷಯ ತಿಳಿದು ಸ್ಥಲೀಸರು ಪ್ರಕರಣ ಳಕ್ಕೆ ಧಾವಿಸಿದ ಪೊದಾಖಲಿಸಿಕೊಂಡು ಟಿಪ್ಪರ್ ಚಾಲಕನನ್ನು ಬಂಧಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ. ಪ್ರಕರಣ ಬಾಣಸವಾಡಿ ಸಂಚಾರ ಠಾಣೆಯಲ್ಲಿ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ