ಯಂತ್ರಗಳ ಸಂತೆಯಲ್ಲಿ ಟೆಕ್‌ ಮಾತು


Team Udayavani, Nov 19, 2019, 9:51 AM IST

bng-tdy-1

ಬೆಂಗಳೂರು: ಅಲ್ಲಿ ತಂತ್ರಜ್ಞಾನಗಳು ಮಾತನಾಡುತ್ತಿದ್ದವು. ಬಂದ ಅತಿಥಿಗಳಿಗೆ ಯಂತ್ರಗಳೇ ಆತಿಥ್ಯ ನೀಡುತ್ತಿದ್ದವು. ಅದೇ ಯಂತ್ರಗಳು ಕೆಲ ಮಳಿಗೆಗಳಲ್ಲಿ ವ್ಯವಹಾರವನ್ನೂ ನಡೆಸುತ್ತಿದ್ದವು!

ಹೌದು, ಹೆಸರೇ ಸೂಚಿಸುವಂತೆ ಅದು ತಂತ್ರಜ್ಞಾನಗಳ ಸಂತೆ. ಕಣ್ಣು ಹಾಯಿಸಿದ ಕಡೆಯೆಲ್ಲಾ ತಂತ್ರಜ್ಞಾನ ಕುರಿತ ಫ‌ಲಕಗಳು, ಸಹಾಯ ಬೇಕೆ ಕೇಳುತ್ತಾ ಓಡಾಡುವ ರೋಬೋಗಳು, ಮಾಹಿತಿ ವಿನಿಮಯ ಸಭೆಗಳು, ಚರ್ಚಾಗೋಷ್ಠಿಗಳು, ನೂತನ ತಂತ್ರಜ್ಞಾನಗಳ ಪ್ರದರ್ಶನ.- ಇದು ಮೊದಲ ದಿನದ ಸಮ್ಮಿಟ್‌ನ ಚಿತ್ರಣ.ಈ ಮೂಲಕ ಬೆಂಗಳೂರು ಅರಮನೆ ಸಂಪೂರ್ಣ ತಾಂತ್ರಿಕ ಮಾಹಿತಿ ಕಣಜವಾಗಿತ್ತು. ಕಾರ್ಯಕ್ರಮ ಉದ್ಘಾಟನೆಗೆ ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎಸ್‌ ಅಶ್ವತ್ಥ ನಾರಾಯಣ ಅವರನ್ನು ಮಿತ್ರಾ-ಮಿತ್ರಿ ಎಂಬ ರೊಬೋಟ್‌ಗಳು “ವೆಲ್‌ ಕಮ್‌” ಎಂದು ಹೇಳುವ ಮೂಲಕ ಸಮ್ಮಿಟ್‌ಗೆ ಸ್ವಾಗತ ಕೋರಿದವು. ಆನಂತರ ವೇದಿಕೆಯಲ್ಲಿ ಕೆಲ ನಿಮಿಷಗಳ ಲೇಜರ್‌ ಶೋನಲ್ಲಿ ಬೆಂಗಳೂರು ನಡೆದು ಬಂದ ಹಾದಿ ಸಂಪೂರ್ಣ ಚಿತ್ರಣ ಕಟ್ಟಿಕೊಡಲಾಯಿತು. ಈ ಶೋನಲ್ಲಿ ಕೆಂಪೇಗೌಡರಿಂದ ನಿರ್ಮಿಸಿದ ಬೆಂಗಳೂರು ಇಂದು ಐಟಿ ಬಿಟಿ ಹಬ್‌ ಆಗಿ ನಿಲ್ಲುತ್ತದೆ. ಉದ್ಘಾಟನಾ ಸಮಾರಂಭ ಮುಗಿಯುತ್ತಿದ್ದಂತೆ ವಿವಿಧ ಕೊಠಡಿಗಳಲ್ಲಿ ಚರ್ಚಾಗೋಷ್ಠಿಗಳು ಆರಂಭವಾದವು. ಇಲ್ಲಿ ವಿವಿಧ ಕ್ಷೇತ್ರಗಳ ತಂತ್ರಜ್ಞಾನಕ್ಕೆ ಸಂಬಂಧಿಸಿದ ನೂರಾರು ವಿಚಾರಗಳಿಗೆ ವಿಜ್ಞಾನಿಗಳು, ತಾಂತ್ರಿಕ ಪರಿಣಿತರು ದನಿಯಾದರು.

ಮೊದಲ ದಿನ ಮುವತ್ತಕ್ಕೂ ಹೆಚ್ಚು ಗೋಷ್ಠಿಗಳು, ಹತ್ತಾರು ತಾಂತ್ರಿಕ ಒಪ್ಪಂದಗಳು ನಡೆದವು. ಈ ಬಾರಿ ಸಮ್ಮಿಟ್‌ನಲ್ಲಿ ನೂತನವಾಗಿ ಪರಿಚಯಿಸಿರುವ ಮಿತ್ರಾ-ಮಿತ್ರಿ ರೋಬೋಗಳು ಎಲ್ಲೆಡೆ ಸಂಚರಿಸಿ ಸಹಾಯ ಬೇಕೆ? ಎಂದು ಕೇಳುತ್ತಿದ್ದವು. ಕಸ ಬುಟ್ಟಿ ಹಿಡಿದು, ಪ್ರಶ್ನೋತ್ತರ ಆಯ್ಕೆ ಇರುವ ಟ್ಯಾಬ್‌ಲೈಡ್‌ಗಳನ್ನು ಹಿಡಿದು ಸಮ್ಮಿಟ್‌ನ ಆವರಣದಲ್ಲಿ ಓಡಾಗುತ್ತಿದ್ದವು. ಇವುಗಳನ್ನು ಆಚ್ಚರಿಯಿಂದ ನೋಡುತ್ತಿದ್ದ ವೀಕ್ಷಕರು ಮಾತನಾಡಿಸಿ, ಫೋಟೊ ತೆಗೆಸಿಕೊಂಡು ಖುಷಿ ಪಟ್ಟರು.

ಸಮ್ಮಿಟ್‌ನಲ್ಲಿ ನೂತನ ಆವಿಷ್ಕಾರಗಳಿಗೆ ವೇದಿಕೆಯಾಗಿ ಇನ್ನೂರಕ್ಕೂ ಹೆಚ್ಚು ಮಳಿಗೆಗಳನ್ನು ಹಾಕಲಾಗಿದೆ. ಇಲ್ಲಿಗೆ ವಿವಿಧೆಡೆಯಿಂದ ಬಂದಿದ್ದ ಯುವ ವಿಜ್ಞಾನಿಗಳು, ಉದ್ಯಮಿಗಳು, ತಾಂತ್ರಿಕ ವಿದ್ಯಾರ್ಥಿಗಳು, ತಂತ್ರಜ್ಞಾನ ಆಸಕ್ತರು ಸೇರಿದಂತೆ ಸಾವಿರಾರು ಮಂದಿ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ಜಲಮಂಡಳಿಯು ಮಳೆನೀರಿ ಕೋಯ್ಲು, ಎಸ್‌ಟಿಪಿ ಬಳಕೆ ಸೇರಿದಂತೆ ಜಲಜಾಗೃತಿ ಮಳಿಗೆ ಹಾಕಿತ್ತು. ಉಳಿದಂತೆ ಸರ್ಕಾರದ ವಿವಿಧ ಇಲಾಖೆಗಳು ಯೋಜನೆಗಳ ಕುರಿತು ಮಾಹಿತಿ ಮಳಿಗೆಗಳನ್ನು ಹಾಕಿದ್ದವು. ಇನ್ನು ಸಮ್ಮಿಟ್‌ನ ಹೊರ ಭಾಗದಲ್ಲಿ ಐ ಲವ್‌ ಬೆಂಗಳೂರು, ಐ ಲವ್‌ ಟೆಕ್‌ ಸಮ್ಮಿಟ್‌ ಎಂಬ ಆಕರ್ಷಕ ಫ‌ಲಕಗಳನ್ನು ಹಾಕಿದ್ದು, ಸಮ್ಮಿಟ್‌ಗೆ ಭೇಟಿಕೊಟ್ಟ ಬಹುತೇಕರು ಫ‌ಲಕಗಳ ಮುಂದೆ ಒಂದು ಫೋಟೊ ಕ್ಲಿಕ್ಕಿಸಿಕೊಂಡು ಹೋಗುತ್ತಿದ್ಧ ದೃಶ್ಯ ಸಾಮಾನ್ಯವಾಗಿತ್ತು.

 

-ಜಯಪ್ರಕಾಶ್‌ ಬಿರಾದಾರ್‌

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.