ಬಿಎಸ್ಎನ್ಎಲ್ ಗುಣಮಟ್ಟಕ್ಕೆ 1500 ಕೋಟಿಗಿಂತ ಅಧಿಕ ವೆಚ್ಚ
Team Udayavani, Dec 1, 2017, 7:30 AM IST
ಬೆಂಗಳೂರು: ಬಿಎಸ್ಎನ್ಎಲ್ನ ಉತ್ತಮ ನೆಟ್ವರ್ಕ್ ಮತ್ತು ಗುಣಮಟ್ಟದ ಸೇವೆಗಳಿಗಾಗಿ ಮೂರು ವರ್ಷಗಳಲ್ಲಿ
ಕರ್ನಾಟಕಕ್ಕಾಗಿ ಕೇಂದ್ರ ಸರ್ಕಾರ 1,500 ಕೋಟಿ ರೂ.ಗಿಂತ ಅಧಿಕ ಹಣ ಖರ್ಚು ಮಾಡಿದೆ ಎಂದು ಕೇಂದ್ರ ಸಂಹವನ
ಖಾತೆ (ಸ್ವತಂತ್ರ ಖಾತೆ) ರಾಜ್ಯ ಸಚಿವ ಮನೋಜ್ ಸಿನ್ಹ ತಿಳಿಸಿದರು.
ನಗರದ ಹೋಟೆಲ್ ಲಲಿತ್ ಅಶೋಕ್ನಲ್ಲಿ ಗುರುವಾರ ಭಾರತ್ ಸಂಚಾರ್ ನಿಗಮ ಲಿ., (ಬಿಎಸ್ಎನ್ಎಲ್)
ಹಮ್ಮಿಕೊಂಡಿದ್ದ “ಎನ್ಎಂಎಸ್- ಬ್ರಾಡ್ಬ್ಯಾಂಡ್’ ಮತ್ತು “ಎನ್ಎಂಎಸ್- ಎಂಪಿಎಲ್ಎಸ್’ ವ್ಯವಸ್ಥೆ ಲೋಕಾರ್ಪಣೆ
ಮಾಡಿ ಮಾತನಾಡಿದರು.
ರಾಜ್ಯದಲ್ಲಿ ಜಿಎಸ್ಎನ್, ಒಎಫ್ಸಿ, ವೈ- ಫೈ ಸೇರಿ ವಿವಿಧ ಸೇವೆಗಳನ್ನು ಮೇಲ್ದರ್ಜೆಗೇರಿಸುವುದು ಸೇರಿದಂತೆ
ಹಲವು ಗುಣಮಟ್ಟದ ಸೇವೆಗಳಿಗೆ ಈ ಹಣ ವಿನಿಯೋಗಿಸಲಾಗಿದೆ. ಇನ್ನೂ ಸಾಕಷ್ಟು ಪ್ರಗತಿ ಸಾಧಿಸಬೇಕಿದೆ. ಈ ನಿಟ್ಟಿನಲ್ಲಿ ಬಿಎಸ್ಎನ್ಎಲ್ ಮುಂದಿನ ದಿನಗಳಲ್ಲಿ ಕಾರ್ಯನಿರ್ವಹಿಸಲಿದೆ ಎಂಬ ವಿಶ್ವಾಸ ಇದೆ ಎಂದರು.
ಡಿಜಿಟಲ್ ಜವಾಬ್ದಾರಿ: ಸರ್ಕಾರದ ಕನಸು “ಡಿಜಿಟಲ್ ಇಂಡಿಯಾ’ ಸಾಕಾರಗೊಳ್ಳುವಲ್ಲಿ ಬಿಎಸ್ಎನ್ಎಲ್
ಜವಾಬ್ದಾರಿ ಹೆಚ್ಚಿದೆ. ಇದನ್ನು ಇಲಾಖೆ ಸಮರ್ಥವಾಗಿ ನಿಭಾಯಿಸಲಿದೆ ಎಂದು ಸಚಿವ ಮನೋಜ್ ಸಿನ್ಹ ವಿಶ್ವಾಸ
ವ್ಯಕ್ತಪಡಿಸಿದರು. ದೇಶದ ಒಂದು ಲಕ್ಷ ಗ್ರಾಮಗಳಲ್ಲಿ ಬ್ರಾಡ್ಬ್ಯಾಂಡ್ ಸಂಪರ್ಕ ಕಲ್ಪಿಸುವ ಯೋಜನೆ ಈಗಾಗಲೇ
ಕೈಗೆತ್ತಿಕೊಂಡಿದ್ದು, ಇದರಡಿ ಕೈಗೆತ್ತಿಕೊಂಡ ರಾಜ್ಯದ ಗ್ರಾಮಗಳಿಗೆ ಬ್ರಾಡ್ಬ್ಯಾಂಡ್ ಸಂಪರ್ಕ ಕಲ್ಪಿಸುವ ಕೆಲಸ
ಬಹುತೇಕ ಪೂರ್ಣಗೊಂಡಿದೆ. ಎರಡನೇ ಹಂತದಲ್ಲಿ ಒಂದೂವರೆ ಲಕ್ಷ ಗ್ರಾಮಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ
ಎಂದು ಮಾಹಿತಿ ನೀಡಿದರು.
ದೂರಸಂಪರ್ಕ ಸಚಿವಾಲಯದ ಕಾರ್ಯದರ್ಶಿ ಅರುಣಾ ಸುಂದರರಾಜನ್ ಮಾತನಾಡಿ, ಬಿಎಸ್ಎನ್ ಎಲ್ ಡಿಜಿಟಲ್ ಬಿಲ್ ಪಾವತಿಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಈ ನಿಟ್ಟಿನಲ್ಲಿ ಮತ್ತಷ್ಟು ಪ್ರಯತ್ನಗಳು ನಡೆಯಬೇಕಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ