ತಹಶೀಲ್ದಾರ್ ಚಾಲಕನಿಗೆ ಕೋವಿಡ್ 19 ಪಾಸಿಟಿವ್
Team Udayavani, Jun 28, 2020, 7:25 AM IST
ನೆಲಮಂಗಲ: ತಹಶೀಲ್ದಾರ್ ಚಾಲಕನಿಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ವಾರಿಯರ್ಗಳಾಗಿ ಕೆಲಸ ನಿರ್ವಹಿಸುತ್ತಿರುವ ಕಂದಾಯ ಇಲಾಖೆ ಸಿಬ್ಬಂದಿಗೆ ಆತಂಕ ಎದುರಾಗಿದೆ. ರಾಯಲ್ ನಗರದ ನಿವಾಸಿ 29 ವರ್ಷದ ಚಾಲಕ ಗ್ರಾಮ ಸಹಾಯಕ ಸೇವೆಯೋಂದಿಗೆ ಹೆಚ್ಚುವರಿಯಾಗಿ ತಹಶೀಲ್ದಾರ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ.
ಈತನಿಗೆ ಶನಿವಾರ ಕೋವಿಡ್ 19 ಸೋಂಕು ದೃಢವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈತ ಜೂ.12ರಂದು ರಜೆ ಮೇಲೆ ತೆರಳಿದ್ದು, ಚಾಲಕನಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಆದರೆ ಒಂದು ಬಾರೀ ತಾಲೂಕು ಕಚೇರಿಗೆ ಬಂದು ಹೋಗಿ ದ್ದಾನೆ ಎಂದು ತಹಶೀಲ್ದಾರ್ ಶ್ರೀನಿವಾಸ್ ತಿಳಿಸಿದರು.
ಹಿಂದೆ ಕೋವಿಡ್ 19 ಸೋಂಕಿತರಾದ ತಿರುಮಲಾಪುರದ ವ್ಯಕ್ತಿ ಹಾಗೂ ಆರೋಗ್ಯ ನಿರೀಕ್ಷಕ ತಾಲೂಕು ಕಚೇರಿಯಲ್ಲಿ ಓಡಾಟ ಮಾಡಿರುವುದರಿಂದ ಸಾರ್ವಜನಿಕ ಓಡಾಟಕ್ಕೆ ನಿಯಂತ್ರಣ ಮಾಡಲಾಗಿತ್ತು. ಈಗ ತಹಶೀಲ್ದಾರ್ ಚಾಲಕನಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ನಗರದ ಜನರಿಗೆ ಆತಂಕ ಎದುರಾಗಿದೆ.
ಡೀಸಿ ಆದೇಶಕ್ಕೆ ಎಳ್ಳು ನೀರು: ವಾರ್ಡ್ ನಂ.15 ಹಾಗೂ 10ನ್ನು ಸೀಲ್ ಡೌನ್ ಮಾಡಲಾಗಿದ್ದು, ಈ ಪ್ರದೇಶದಲ್ಲಿ ವಾಸಿಸುವ ಎಲ್ಲ ಕುಟುಂಬಗಳನ್ನು ಹೋಮ್ ಕ್ವಾರಂಟೈನ್ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶ ನೀಡಿದರೂ ಪಾಸಿಟಿವ್ ವ್ಯಕ್ತಿ ಮನೆಯ ರಸ್ತೆಯ ಜನರೇ ಓಡಾಡಿ, ಆದೇಶಕ್ಕೆ ಎಳ್ಳು ನೀರು ಬಿಟ್ಟಂತಾಗಿದೆ. ವಾರ್ಡ್ 10ರಲ್ಲಿ ರಸ್ತೆಗೆ ಹಾಕಲಾಗಿದ್ದ ಬ್ಯಾರಿಕೇಡ್ ಸರಿಸಿ ಓಡಾಟ ಮಾಡುತ್ತಿರುವುದು ಕಂಡು ಬಂದಿದೆ. ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?