ಕೋವಿಡ್ ಸೆಂಟರ್ನಲ್ಲಿ ಉಚಿತ ಚಿಕಿತ್ಸೆ
Team Udayavani, Jun 2, 2021, 4:18 PM IST
ನೆಲಮಂಗಲ: 60 ಬೆಡ್ನ ಕೋವಿಡ್ಸೆಂಟರ್ ಜತೆ 200 ಬೆಡ್ ವ್ಯವಸ್ಥೆಮಾಡಲು ನಾವು ಸಿದ್ಧರಾಗಿದ್ದೇವೆ. ಅನುಮತಿ ನೀಡಬೇಕಷ್ಟೇ ಎಂದು ಪರಿಪೂರ್ಣ ಸನಾತನ ಚಾರಿಟಬಲ್ಟ್ರಸ್ಟ್ನ ಡಾ.ಶ್ರೀ ಎ.ವಿ.ಶ್ರೀನಿವಾಸನ್ಸ್ವಾಮೀಜಿ ತಿಳಿಸಿದರು.
ತಾಲೂಕಿನ ಅರ್ಜುನ ಬೆಟ್ಟಹಳ್ಳಿಯಪರಿಪೂರ್ಣ ಸನಾತನ ಚಾರಿಟಬಲ್ಟ್ರಸ್ಟ್ ಆವರಣದಲ್ಲಿ 60 ಬೆಡ್ನಕೋವಿಡ್ ಸೆಂಟರ್ಗೆ ಚಾಲನೆ ನೀಡಿಮಾತನಾಡಿ, ಕೊರೊನಾ ಗ್ರಾಮೀಣಪ್ರದೇಶದ ಜನರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ಬಡವರು ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ. ಅಂತವರಿಗೆ ಉಚಿತವಾಗಿಕೋವಿಡ್ ಸೆಂಟರ್ ಆರಂಭಮಾಡಿದ್ದೇವೆ. ಈ ಸೆಂಟರ್ನಲ್ಲಿಸಂಪೂರ್ಣ ಉಚಿತ ಚಿಕಿತ್ಸೆ ನೀಡಲಾಗುವುದು, ಶ್ರೀಮಂತರು ದಾನಮಾಡಬಹುದು ಎಂದರು.
ಬೆಂಗಳೂರು ಜಿಪಂ ಮಾಜಿ ಸದಸ್ಯ ಮರಿಸ್ವಾಮಿ ಮಾತನಾಡಿ, ಕೊರೊನಾ ಸಮಯದಲ್ಲಿ ಶ್ರೀಗಳು ಉಚಿತ ಚಿಕಿತ್ಸೆಗೆ ಮುಂದಾಗಿದ್ದು, ಬಡ ಜನರಿಗೆ ಅನುಕೂಲವಾಗಲಿದೆ. ಸರ್ಕಾ ರ ಹಾಗೂ ಅಧಿಕಾರಿಗಳು ಶ್ರೀಗಳ ಜತೆ ನಿಲ್ಲಬೇಕಿದೆ ಎಂದರು.