ಮಠಗಳಿಂದ ಶಿಕ್ಷಣ ಕ್ರಾಂತಿ: ಶ್ರೀರಾಮುಲು
Team Udayavani, Feb 3, 2020, 12:37 PM IST
ಖಾನಾಪುರ: ತುಮಕೂರಿನ ಸಿದ್ಧಗಂಗಾ ಮಠ, ಚಿತ್ರದುರ್ಗದ ಮುರುಘಾಮಠ, ಹುಬ್ಬಳ್ಳಿಯ ಸಿದ್ಧಾರೂಢ ಮಠ ಸೇರಿದಂತೆ ಕರ್ನಾಟಕದ ಮಠಗಳು ಶಿಕ್ಷಣ, ಸಾಮಾಜಿಕ, ಕಾರ್ಯಗಳನ್ನು ಮಾಡುತ್ತಿವೆ ಎಂದು ಸಚಿವ ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದರು.
ಚಿಕ್ಕಮುನವಳ್ಳಿಯ ಆರೂಢ ಮಠದಲ್ಲಿ ರವಿವಾರ ನಡೆದ ಬ್ರಹ್ಮಲೀನ ಸದಾಶಿವಾನಂದ ಮಹಾಸ್ವಾಮೀಜಿ 10ನೇ ಪುಣ್ಯಸ್ಮರಣೆ ದಶಮಾನೋತ್ಸವದ ಅಂಗವಾಗಿ ಅಖೀಲ ಕರ್ನಾಟಕ 40ನೇ ಬೃಹತ್ ವೇದಾಂತ ಪರಿಷತ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದ ಎಲ್ಲ ಧರ್ಮಗಳು ಒಂದೇ ಎನ್ನುವ ತತ್ವಗಳನ್ನು ಸಾರುತ್ತಿವೆ. ಸತ್ಯ ಮತ್ತು ಧರ್ಮಗಳು ನಮ್ಮ ಜೊತೆ ಶಾಶ್ವತವಾಗಿ ಬರಬೇಕು. ಮಠ ಮಾನ್ಯಗಳು ಸರಕಾರ ಮಾಡದ ಜನಪರ ಕಾರ್ಯಗಳನ್ನು ಮಾಡುತ್ತಿವೆ ಎಂದರು. ಬಂಗಾರಮಕ್ಕಿಯ ವೀರಾಂಜನೇಯ ಕ್ಷೇತ್ರದ ಮಾರುತಿ ಗುರೂಜಿ, ಆರೂಢ ಮಠದ ಶಿವಪುತ್ರ ಶ್ರೀಗಳು, ಜೋಡಕುರಳಿ ಸಿದ್ಧಾರೂಢ ಮಠದ ಚಿದ್ಗನಾನಂದ ಶ್ರೀಗಳು, ಬಿಜೆಪಿ ಮುಖಂಡರಾದ ವಿಠಲ ಹಲಗೇಕರ, ಬಾಬಣ್ಣ ಪಾಟೀಲ, ತಾಪಂ ಸದಸ್ಯ ಶ್ರೀಕಾಂತ ಇಟಗಿ, ಮಾಜಿ ತಾಪಂ ಸದಸ್ಯ ಮಲ್ಲಪ್ಪ ಮಾರಿಹಾಳ, ಜಿಲ್ಲಾ ಆರೋಗ್ಯಾಧಿಕಾರಿ ವಿ.ಎಸ್.ಮುನಿಹಾಳ ಸೇರಿದಂತೆ ಇತರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ