Mudalagi: ಹರಿಯುವ ನೀರಿನಲ್ಲಿ ಭಾರಿ ಪ್ರಮಾಣದ ನೊರೆ… ರೋಗ ಹರಡುವ ಭೀತಿಯಲ್ಲಿ ಸ್ಥಳೀಯರು
Team Udayavani, Jan 4, 2024, 12:28 PM IST
ಮೂಡಲಗಿ : ಹರಿಯುವ ನೀರಿನ ಮಧ್ಯೆ ನಿಧಾನಕ್ಕೆ ಬಂದು ಸೇರುತ್ತಿರುವ ಬಿಳಿ ಬಣ್ಣದ ನೊರೆ, ನೋಡ ನೋಡುತ್ತಿದ್ದಂತೆಯೆ ನೀರಿನ ಮೇಲೆಯೇ ರಾಶಿಯಾಗಿ ನಿಲ್ಲುತ್ತಿದ್ದು, ಪಟ್ಟಣದ ಮಧ್ಯದಲ್ಲಿ ಹರಿಯುವ ಹಳ್ಳದಲ್ಲಿ ಗುರುವಾರ ಬೆಳಿಗ್ಗೆ ಭಾರಿ ಪ್ರಮಾಣದಲ್ಲಿ ನೊರೆ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಇದೇ ಮೊದಲ ಬಾರಿಗೆ ಈ ರೀತಿ ಹಳ್ಳದಲ್ಲಿ ನೊರೆ ಹರಿದು ಬಂದಿದ್ದು, ಇದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಪಟ್ಟಣದ ಚರಂಡಿ, ಬಸ್ ನಿಲ್ದಾಣ ಪಕ್ಕದ ಶೌಚಾಲಯ ಬಳಿ ತ್ಯಾಜ್ಯ ತುಂಬಿದ್ದು, ಎಲ್ಲೆಂದರಲ್ಲಿ ಗಬ್ಬೆದ್ದು ನಾರಿತ್ತಿರುವ ವಾತಾವರಣ ಕಂಡು ಬಂದಿದೆ. ಈ ಅವಸ್ಥೆಯಿಂದ ಸೊಳ್ಳೆ, ನೋಣ, ಕ್ರೀಮಿ ಕೀಟಗಳಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ.
ಪಟ್ಟಣದ ಅರ್ಧ ಭಾಗದ ಮನೆಗಳ ಕೊಳಚೆ ನೀರು ಇದೇ ಹಳ್ಳಕ್ಕೆ ಬಿಡುತ್ತಾರೆ. ಚರಂಡಿ ನೀರಿನ ಜತೆಗೆ ಈ ಮಲಿನ ನೀರು ಹಳ್ಳದಲ್ಲಿ ಮಡುಗಟ್ಟಿ ನಿಂತು, ಜಲಮೂಲ ಕಲುಷಿತಗೊಂಡಿದೆ. ಮಳೆಕೊರತೆಯಿಂದ ಇತ್ತೀಚಿನ ವರ್ಷಗಳಲ್ಲಿ ಈ ಹಳ್ಳದಲ್ಲಿ ನೀರಿನ ಪ್ರಮಾಣವೂ ಕಡಿಮೆಯಾಗಿದೆ. ಆದರೆ, ಗುರುವಾರ ಹಳ್ಳದ ಒಡಲಲ್ಲಿದ್ದ ವಿಷಯುಕ್ತ ನೀರು ನೊರೆಯಾಗಿ ಪರಿವರ್ತನೆಯಾಗಿರಬಹುದು ಎಂಬ ಶಂಕೆಯನ್ನು ಈ ಭಾಗದ ಜನರು ವ್ಯಕ್ತಪಡಿಸಿದ್ದಾರೆ.
ಹಳ್ಳದಲ್ಲಿ ಈ ನೊರೆ ಕಾಣಿಸಿಕೊಂಡಿದ್ದರಿಂದ ಯಾವ ರೋಗ ಬರುತ್ತೇನೋ ಅನ್ನೋ ಭಯದಲ್ಲಿ ಹಳ್ಳದ ಪಕ್ಕದಲ್ಲಿ ಇರುವ ಮನೆಗಳ ಸಾರ್ವಜನಿಕರಲ್ಲಿ ಭಯ ಹುಟ್ಟುವಂತಾಗಿದೆ.
ಸುಮಾರು ತಿಂಗಳಿಂದ ಮಲಿನಗೊಂಡ ಹಳ್ಳದ ನೀರನ್ನ ಕಂಡು ಕಾಣದವರಂತೆ ವರ್ತಿಸುತ್ತಿರುವ ಪುರಸಭೆಯ ಮುಖ್ಯಧಿಕಾರಿ, ಇಂಜಿನಿಯರ್, ಆರೋಗ್ಯ ನಿರೀಕ್ಷಕ ಇನ್ನಾದರೂ ಜನರ ಹಿತದೃಷ್ಟಿಯಿಂದ ಈ ಸಮಸ್ಯೆಯಿಂದ ಜನರಿಗೆ ಪರಿಹಾರ ಮಾಡುತ್ತಾರೋ? ಕಾದು ನೋಡಬೇಕಿದೆ.
ಇದನ್ನೂ ಓದಿ: Watch: Ram Temple- ಭವ್ಯ ರಾಮಮಂದಿರ ಉದ್ಘಾಟನೆಯ ಆಮಂತ್ರಣ ಪತ್ರಿಕೆ ವಿಡಿಯೋ ನೋಡಿ…
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ ವ್ಯಂಗ್ಯ
MUST WATCH
ಹೊಸ ಸೇರ್ಪಡೆ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
Desi Swara: ಅಪಹಾಸ್ಯ ನೀಡಿದ ಅದೃಷ್ಟ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ