ಮಗ ಬಂದೇ ಬರುತ್ತಾನೆ.. ಮಗನನ್ನು ಕಳೆದುಕೊಂಡ ಸುರೇಶ್ ಅಂಗಡಿ ತಾಯಿಯ ರೋದನೆ
Team Udayavani, Sep 24, 2020, 11:47 AM IST
ಬೆಳಗಾವಿ: ಮಗನನ್ನು ಕಳೆದುಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿರುವ ತಾಯಿ ಸೋಮವ್ವ ಅಂಗಡಿ, ಮಗ ಬಂದೇ ಬರುತ್ತಾನೆ ಎಂದು ಅಳುತ್ತ ಕಾದು ಕುಳಿತಿದ್ದಾರೆ.
ಮಗ ಸುರೇಶ ಅಂಗಡಿಯ ಸಾವಿನ ಸುದ್ದಿ ತಿಳಿದು ಕಂಗಾಲಾಗಿರುವ ವೃದ್ಧ ತಾಯಿ, ಸದಾಶಿವಗರದ ಸಂಪಿಗೆ ರಸ್ತೆಯಲ್ಲಿರುವ ನಿವಾಸಕ್ಕೆ ಬಂದಿದ್ದಾರೆ. ಮಗ ನನ್ನ ಬಿಟ್ಟು ಹೋಗುವುದಿಲ್ಲ. ಪಾರ್ಲಿಮೆಂಟ್ ಮೀಟಿಂಗ್ ಮುಗಿಸಿ ಒಂದು ತಿಂಗಳ ನಂತರ ಬರ್ತೀನಿ ಅಂತ ಹೇಳಿ ಹೋಗಿದ್ದಾನೆ. ವಾಪಸ್ಸು ನನ್ನ ಭೇಟಿ ಆಗಲು ಬರುತ್ತಾನೆ ಎಂದು ಎದೆ ಬಡೆದುಕೊಳ್ಳುತ್ತ ಅಳುತ್ತಿದ್ದಾರೆ. ಮಗನನ್ನು ನೆನೆಸಿಕೊಂಡು ಅಳುತ್ತಿರುವ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಇಂದು ಸಂಜೆ ನಾಲ್ಕು ಗಂಟೆಗೆ ಸುರೇಶ್ ಅಂಗಡಿ ಅಂತ್ಯಕ್ರಿಯೆ
‘ಕೆ.ಕೆ. ಕೊಪ್ಪ ಊರಾಗ ಸಾಲಿ ಕಟ್ಟಿಸಿ ಶಿಕ್ಷಣ ಕೊಡ್ಸಾತಾನ, ಊರಾಗ ಗುಡಿ ಕಟ್ಟಿಸ್ಯಾನ. ನನ್ನ ಹೆಸರಲೇ ಸಾಲಿ ಕಟ್ಟಿಸಿ ಶಿಕ್ಷಣ ಕೊಡ್ಸಾತಾ. ಹಳ್ಳ್ಯಾಗಿಂದ ದಿಲ್ಲಿಗೆ ಹೋದ ಅಂತ ಹಿಗ್ಗಿ ಹಿಗ್ಗಿ ಹೇಳ್ತಿದ್ನಿ. ನನ್ನ ಬಿಟ್ಟ ಮಗ ಹೋಗಿಲ್ಲ… ಬರ್ತಾನ’ ಅಂತ ಕಣ್ಣೀರು ಹಾಕುತ್ತಿರುವ ತಾಯಿಯ ರೋದನೆ ಮುಗಿಲು ಮುಟ್ಟಿದೆ.
ವಾರದ ಹಿಂದೆ ಕೋವಿಡ್-19 ಸೋಂಕು ದೃಢಪಟ್ಟಿದ್ದ ಸುರೇಶ್ ಅಂಗಡಿಯವರು ಬುಧವಾರ ಸಂಜೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್
ಪ್ರಧಾನಿ ಮೋದಿಯಿಂದ ಮಾತ್ರ ದೇಶ ರಕ್ಷಣೆ ಸಾಧ್ಯ: ಕುಮಠಳ್ಳಿ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
MUST WATCH
ಹೊಸ ಸೇರ್ಪಡೆ
Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?
Election illegal: ನಿನ್ನೆ 2.31 ಕೋ. ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ
OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ
Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್