ಬಿಸಿಲನಾಡಿನ ಕೆರೆಗಳೆಲ್ಲ ಈ ಬಾರಿ ಭರ್ತಿ!
ಕಂಗೆಟ್ಟಿದ್ದ ರೈತರ ಆತಂಕ ದೂರಒಟ್ಟು 89 ಕೆರೆಗಳಲ್ಲಿ ಬಹುತೇಕ ನೀರು ಸಂಗ್ರಹನೀರಿನ ಮಟ್ಟ ಏರಿಕೆ
Team Udayavani, Nov 4, 2019, 2:56 PM IST
ವೆಂಕೋಬಿ ಸಂಗನಕಲ್ಲು
ಬಳ್ಳಾರಿ: ಮುಂಗಾರಿನ ಅವಕೃಪೆಯಿಂದ ಕಂಗೆಟ್ಟಿದ್ದ ರೈತರಿಗೆ ಹಿಂಗಾರಿನಲ್ಲಿ ಸುರಿದ ಉತ್ತಮ ಮಳೆಯಿಂದಾಗಿ ಗಣಿ ಜಿಲ್ಲೆಯಲ್ಲಿನ ಬಹುತೇಕ ಕೆರೆಗಳು ಭರ್ತಿಯಾಗಿ ರೈತರ ಆತಂಕವನ್ನು ದೂರ ಮಾಡಿದೆ.
ಹೌದು…! ಪ್ರಸಕ್ತ ವರ್ಷ ಮಾನ್ ಸೂನ್ ಪೂರ್ವ (ಮುಂಗಾರು) ಮಳೆ ಕೈಕೊಟ್ಟಿದ್ದರಿಂದ ಜಿಲ್ಲೆಯ ಜೀವನಾಡಿ ತುಂಗಭದ್ರಾ ಜಲಾಶಯ ತುಂಬುವುದೇ ಎಂಬ ಅನುಮಾನ ಕಾಡಿತ್ತು. ಮಾನ್ಸೂನ್ ಆರಂಭವಾದ ನಂತರ ಉತ್ತಮ ಮಳೆ ಆಗಲಿದೆ ಎಂಬ ರೈತರ ನಿರೀಕ್ಷೆಯೂ ಹುಸಿಯಾಗಿತ್ತು.
ಆದರೆ, ನಡೆದಿದ್ದೇ ಬೇರೆ. ಮಾನ್ಸೂನ್ ಕೊನೆ ದಿನಗಳು, ಹಿಂಗಾರಿನ ಆರಂಭದ ದಿನಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿ ತುಂಗಭದ್ರಾ ಜಲಾಶಯ ಹಾಗೂ ಬಹುತೇಕ ಕೆರೆಗಳು ಈ ಬಾರಿ ಭರ್ತಿಯಾಗಿದೆ.
ಹಲವು ಕಡೆ ಕೆರೆಗಳು ಕೋಡಿ ಹರಿದು ಅಲ್ಪಸ್ವಲ್ಪ ಅವಾಂತರ ಸೃಷ್ಟಿಸಿದ್ದು ಒಂದೆಡೆಯಾದರೆ, ವರುಣನ ಮುನಿಸಿನಿಂದಾಗಿ ರೈತರಲ್ಲಿ ಮಡುಗಟ್ಟಿದ್ದ ಆತಂಕ ದೂರವಾದಂತಾಗಿದೆ. ಜಿಲ್ಲೆಯ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವ ಬಹುತೇಕ ಕೆರೆಗಳು ಈ ವರ್ಷ ನೀರು ಕಂಡಿವೆ. ಒಟ್ಟು 89 ಕೆರೆಗಳ ಪೈಕಿ 6 ಕೆರೆಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಕೆರೆಗಳು ಭರ್ತಿಯಾಗಿವೆ.
ಇದು ರೈತರು, ಗ್ರಾಮೀಣ ಭಾಗದ ಜನರ ಸಂತಸಕ್ಕೆ ಕಾರಣವಾಗಿದೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವ 89 ಕೆರೆಗಳಲ್ಲಿ 9 ಕೆರೆಗಳು ಸಂಪೂರ್ಣ ಭರ್ತಿಯಾಗಿ ಕೋಡಿ ಹರಿದಿವೆ. ಇನ್ನು ಹಡಗಲಿ ತಾಲೂಕಿನ ಹಿರೇಹಡಗಲಿ, ದೇವಗೊಂಡನಹಳ್ಳಿ, ಬೂದನೂರು ಕೆರೆಗಳು ಭರ್ತಿಯಾಗಿವೆ.
ಹಗರಿಬೊಮ್ಮನಹಳ್ಳಿ ತಾಲೂಕಿನ ಬನ್ನಿಕಲ್ಲು, ಬಲ್ಲಹುಣಸಿ ಕೆರೆಗಳಲ್ಲೂ ಶೇ. 100ರಷ್ಟು ನೀರು ಸಂಗ್ರಹವಾಗಿದೆ. ಹೊಸಪೇಟೆ ತಾಲೂಕಿನ ಹೊಸ ಚಿನ್ನಾಪುರ, ಸಂಡೂರು ತಾಲೂಕಿನ ಓಬಳಾಪುರ, ಜೋಗಾ, ಕೋಡಾಲು ಕೆರೆಗಳು ಸಂಪೂರ್ಣ ಭರ್ತಿ ಆಗಿವೆ. ಹೂವಿನ ಹಡಗಲಿಯ ಜಿ. ಕೋಡಿಹಳ್ಳಿ ಕೆರೆ ಶೇ.70, ಹಗರನೂರು ಕೆರೆ ಶೇ.60, ಹಗರಿಬೊಮ್ಮನಹಳ್ಳಿ ತಾಲೂಕಿನ ಜಿ.ಕೋಡಿಹಳ್ಳಿ ಕೆರೆ ಶೇ. 80ರಷ್ಟು, ಹೊಸಕೆರೆ ಶೇ.60ರಷ್ಟು ಭರ್ತಿ ಆಗಿವೆ.
ಹೊಸಪೇಟೆ ತಾಲೂಕಿನ ಡಿ.ಎನ್. ಕೆರೆ ಶೇ.75, ಕಾಕುಬಾಳ ಕೆರೆ ಶೇ. 80, ನಲ್ಲಾಪುರದ ಎರಡೂ ಕೆರೆಗಳು ಶೇ. 85, ನಾಗಲಾಪುರ ಕೆರೆ ಶೇ. 60ರಷ್ಟು ಭರ್ತಿ ಆಗಿವೆ. ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಕೆರೆ ಶೇ. 63ರಷ್ಟು ನೀರು ಕಂಡಿವೆ. ಸಂಡೂರು ತಾಲೂಕಿನ ಸಿ.ಕೆ. ಹಳ್ಳಿ ಕೆರೆ ಶೇ. 70ರಷ್ಟು, ರಾಘವಪುರ ಕೆರೆ ಶೇ. 60ರಷ್ಟು ಭರ್ತಿ ಆಗಿವೆ. ಬಳ್ಳಾರಿ ತಾಲೂಕಿನ ಬೆಳಗಲ್ಲು ಕೆರೆ ಶೇ. 44, ಮುಂಡ್ರಿಗಿ ಕೆರೆ ಶೇ. 47, ಹೊನ್ನಳ್ಳಿ ಕೆರೆ ಶೇ. 44, ಸಂಜೀವರಾಯನಕೋಟೆ ಕೆರೆ ಶೇ. 49, ಜಾನೆಕುಂಟೆ ಕೆರೆ ಶೇ. 44, ಹೊನ್ನಳ್ಳಿ ತಾಂಡಾ ಕೆರೆ ಶೇ. 46, ಹಲಕುಂದಿ ಕೆರೆ ಶೇ.
46, ಹರಗಿನಡೋಣಿ ಕೆರೆ ಶೇ.44 ರಷ್ಟು ತುಂಬಿವೆ.
ಹೊಸಪೇಟೆ ತಾಲೂಕಿನ ಶೆಟ್ಟಿಕೆರೆ ಶೇ. 40, ಬ್ಯಾಲಕುಂದಿ ಕೆರೆ ಶೇ. 50, ಜೋಗಯ್ಯನ ಕೆರೆ ಶೇ. 50ರಷ್ಟು ಭರ್ತಿ ಆಗಿವೆ. ಹೂವಿನಹಡಗಲಿ ತಾಲೂಕು ತಳಕಲ್ಲಿನ ಕೆರೆ ಶೇ.35, ದಾಸನಹಳ್ಳಿ ಕೆರೆ ಶೇ.40, ಹಗರಿಬೊಮ್ಮನಹಳ್ಳಿಯ ದಶ್ಮಾಪುರ ಕೆರೆ ಶೇ. 50ರಷ್ಟು, ಹನಸಿ ಕೆರೆ ಶೇ. 35, ಮಾಗಿಮಾವಿನಹಳ್ಳಿಯ ಸಣ್ಣ ಕೆರೆ ಶೇ. 35, ಚಿತ್ರಂಪಳ್ಳಿ ಕೆರೆ ಶೇ. 40, ಕೂಡ್ಲಿಗಿ ತಾಲೂಕಿನ ಬೈರದೇವರಗುಡ್ಡ ಕೆರೆ, ಕರ್ನಾರ ಹಟ್ಟಿ ಕೆರೆ ಶೇ.50, ಚೌಡಾಪುರ ಕೆರೆ ಶೇ. 35, ಸುಂಕದಕಲ್ಲು ಕೆರೆ ಶೇ.45, ರಾಯಪುರ ಕೆರೆ ಶೇ. 35, ಟಿ. ಬಸಾಪುರದ ಎರಡೂ ಕೆರೆಗಳು, ತಿಮ್ಲಾಪುರ, ಗಂಡಬೊಮ್ಮನಹಳ್ಳಿ ಕೆರೆ ಶೇ.40, ಇಮದಾಪುರ ಕೆರೆ ಶೇ. 32ರಷ್ಟು ಭರ್ತಿ ಆಗಿವೆ.
ಉಳಿದಂತೆ 33 ಕೆರೆಗಳು ಶೇ. 30ಕ್ಕೂ ಹೆಚ್ಚು, 29 ಕೆರೆಗಳು ಶೇ. 30ರಷ್ಟು ನೀರು ಭರ್ತಿಯಾಗಿವೆ. ಮಳೆಗಾಲ ಆರಂಭವಾದ ಸಂದರ್ಭದಲ್ಲಿ ಚಿಂತೆಗೀಡಾಗಿದ್ದ ರೈತರು ಇದೀಗ ಸಂತಸದಲ್ಲಿದ್ದಾರೆ. ಒಂದು ಕಡೆ ಹಿಂಗಾರು ಬೆಳೆ ನಿರೀಕ್ಷಿತ ಮಟ್ಟದಲ್ಲಿ ಫಸಲು ಕೊಡಲಾರದು ಎಂದು ತಿಳಿದು ಚಿಂತಿತರಾಗಿದ್ದರೂ ಕೆರೆಗಳ ನೀರಿನ ಮಟ್ಟದಿಂದ ಖುಷಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್