ಅನ್ನದಾತನ ಕೈಹಿಡಿದ ಚೆಂಡು ಹೂ
Team Udayavani, Oct 12, 2021, 2:59 PM IST
ಸಿರುಗುಪ್ಪ: ತಾಲೂಕಿನ ರಾರಾವಿ ಗ್ರಾಮದ ರೈತ ಚಂದ್ರಶೇಖರ್ಅರ್ಧ ಎಕರೆ ಜಮೀನಿನಲ್ಲಿ ಚೆಂಡು ಹೂ ಬೆಳೆ ಬೆಳೆದಿದ್ದುಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದು ದಸರಾ ಹಬ್ಬದಅಂಗವಾಗಿ ಬಳ್ಳಾರಿ ಮತ್ತು ಸಿರುಗುಪ್ಪದ ವ್ಯಾಪಾರಿಗಳುರೈತನ ಜಮೀನಿಗೆ ತೆರಳಿ ಹೂವನ್ನು ಖರೀದಿಸಲು ಮುಂದಾಗಿದ್ದಾರೆ.
ಕಳೆದ ಮೂರು ವರ್ಷಗಳಿಂದಲೂ ಚೆಂಡು ಹೂ ಮತ್ತುಸೇವಂತಿಗೆ ಹೂವನ್ನು ದಸರಾ ಮತ್ತು ದೀಪಾವಳಿ ಸಂದರ್ಭಕ್ಕೆಕಟಾವು ಬರುವಂತೆ ಬೆಳೆಯನ್ನು ಬೆಳೆಯುತ್ತಿರುವುದರಿಂದ ರೈತನು ತನ್ನ ಅರ್ಧ ಎಕರೆ ಚೆಂಡು ಹೂವಿನ ಬೆಳೆಬೆಳೆಯಲು ರೂ. 10 ಸಾವಿರ ವೆಚ್ಚವಾಗುತ್ತಿದ್ದು, ಬೆಳೆಬೆಳೆಯಲು ವೆಚ್ಚವಾದ ಹಣ ತೆಗೆದು ರೂ. 30ರಿಂದ40 ಸಾವಿರ ಆದಾಯ ಗಳಿಸುತ್ತಿದ್ದಾನೆ.
ಅರ್ಧ ಎಕರೆಗೆ8ರಿಂದ 10 ಕ್ವಿಂಟಲ್ ಇಳುವರಿ ಪಡೆಯುತ್ತಿದ್ದು, ಒಂದುಕ್ವಿಂಟಲ್ ಹೂವಿಗೆ ರೂ.5 ಸಾವಿರದಂತೆ ಮಾರಾಟಣಮಾಡುತ್ತಿದ್ದು, ಮಾರುಕಟ್ಟೆಯಲ್ಲಿ ಚೆಂಡುಹೂವಿಗೆದಸರಾ ಮತ್ತು ದೀಪಾವಳಿ ಸಂದರ್ಭದಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ.ಆದ್ದರಿಂದ ಬಳ್ಳಾರಿ ಮತ್ತು ಸಿರುಗುಪ್ಪದ ಹೂವಿನವ್ಯಾಪಾರಿಗಳು ರೈತನ ಹೊಲಕ್ಕೆ ಬಂದು ಹೂವನ್ನು ಖರೀದಿಸುತ್ತಿರುವುದರಿಂದ ರೈತನಿಗೆ ಮಾರುಕಟ್ಟೆಗೆ ಹೂವನ್ನುಸಾಗಿಸುವ ವೆಚ್ಚ ಉಳಿಯುತ್ತದೆ.
ಹೂವನ್ನು ಕಟಾವುಮಾಡಿದ ನಂತರ ವ್ಯಾಪಾರಿಗಳು ತೂಕ ಮಾಡಿಕೊಂಡುತಮ್ಮದೇ ವಾಹನದಲ್ಲಿ ಸಾಗಿಸುತ್ತಾರೆ.ತೋಟಗಾರಿಕೆ ಬೆಳೆಯಲ್ಲಿ ಬರುವ ಹೂವಿನ ಬೆಳೆಗೆ ನಮ್ಮತಾಲೂಕಿನಲ್ಲಿ ಹೆಚ್ಚಿನ ರೈತರು ಆಸಕ್ತಿ ತೋರಿಸುತ್ತಿಲ್ಲ. ಆದರೆರೈತ ಚಂದ್ರಶೇಖರ್ ಕಳೆದ ಮೂರು ವರ್ಷಗಳಿಂದ ಚೆಂಡುಹೂ, ಸೇವಂತಿಗೆ ಹೂವನ್ನು ಬೆಳೆದು ಉತ್ತಮ ಆದಾಯಪಡೆದು ಇತರೆ ರೈತರಿಗೆ ಮಾದರಿಯಾಗಿದ್ದಾನೆ.
ಆರ್.ಬಸವರೆಡ್ಡಿ ಕರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ