ಧಾರ್ಮಿಕ ಕಾರ್ಯಗಳಿಂದ ಶ್ರೇಯಸ್ಸು: ಶ್ರೀಶೈಲ ಶ್ರೀ
Team Udayavani, Jun 17, 2021, 10:19 PM IST
ಸಿರುಗುಪ್ಪ: ನಾವು ಸಾರ್ವಜನಿಕರಿಗಾಗಿ ಮಾಡುವ ಸೇವೆಯಿಂದಾಗಿ ನಮಗಾಗುವ ಉಪಯೋಗಕ್ಕಿಂತ ಜನರು ಆ ಕಲ್ಯಾಣ ಮಂಟಪಗಳಲ್ಲಿ ಮಾಡುವ ಶುಭಕಾರ್ಯಗಳಲ್ಲಿನ ಪುಣ್ಯದ ಪಾಲು ನಮಗೂ ದೊರೆಯುತ್ತದೆ. ನಾವು ಮಾಡುವ ಧಾರ್ಮಿಕ ಕಾರ್ಯಗಳೇ ನಮಗೆ ಶ್ರೇಯಸ್ಸು ತರುತ್ತವೆಂದು ಶ್ರೀಶೈಲಪೀಠದ 1008 ಜಗದ್ಗುರು ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು.
ನಗರದಲ್ಲಿರುವ ಪಿನಾಕಿನಿ ಆಶ್ರಮಕ್ಕೆ ಮಂಗಳವಾರ ಭೇಟಿ ನೀಡಿ ನಿರ್ಮಾಣವಾಗುತ್ತಿರುವ ನೂತನ ಕಲ್ಯಾಣ ಮಂಟಪದ ಕಾಮಗಾರಿಯನ್ನು ಪರಿಶೀಲನೆ ನಡೆಸಿ ಮಾತನಾಡಿದ ಅವರು, ಕೊರೊನಾ ಮಹಾಮಾರಿಗೆ ಪೂಜ್ಯರು, ಕೊಡುಗೈದಾನಿಗಳು, ಬಲಿಯಾಗುತ್ತಿರುವುದು ವಿಷಾದನೀ ಯವಾದದ್ದು ಜಗತ್ತಿನಿಂದ ಕೊರೊನಾವನ್ನು ದೂರಮಾಡಿ ಮನುಕುಲಕ್ಕೆ ಒಳಿತು ಮಾಡುವಂತೆ ಭಗವಂತನಲ್ಲಿ ಪ್ರಾರ್ಥಿಸೋಣ. ಕಟ್ಟಡದ ಶೇ. 50ರಷ್ಟು ಕಾಮಗಾರಿ ನಡೆದಿದ್ದು ಕಾಮಗಾರಿಯ ಕಾರ್ಯಯೋಜನೆ ನಮಗೆ ಖುಷಿ ತಂದಿದೆ.
ಸರ್ಕಾರದ ಸೇವೆ, ಭಕ್ತರ ಸೇವೆಯಿಂದಾಗಿ ಪಿನಾಕಿನಿ ಆಶ್ರಮದಲ್ಲಿ ಕಟ್ಟಡ ನಿರ್ಮಾಣ ಪ್ರಾರಂಭವಾದಾಗಿನಿಂದ ಪ್ರವಾಹ, ಕೊರೊನಾ ಒಂದನೇ ಮತ್ತು ಎರಡನೇ ಅಲೆಯಂಥ ಸಂಕಷ್ಟ ಸಮಯದಲ್ಲೂ ಭಕ್ತರು ಶಕ್ತಿಮೀರಿ ಗುರುಸೇವೆ, ಧಾರ್ಮಿಕ ಸೇವೆ, ಸಾಮಾಜಿಕ ಸೇವೆಗೆ ಸಹಾಯ ಮಾಡುತ್ತಿರುವುದು ಸಂತಸದ ಸಂಗತಿಯಾಗಿದ್ದು ಇನ್ನೂ ಈ ಕಾಮಗಾರಿಯ ಸೇವೆಗಾಗಿ ವಾಗ್ಧಾನ ನೀಡಿರುವ ಭಕ್ತರು ಗುರುಸೇವೆಗೆ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಮುಂದಾಬೇಕೆಂದು ಕರೆನೀಡಿದರು.
ಮಾಜಿ ಶಾಸಕ ಚಂದ್ರಶೇಖರಯ್ಯ ಸ್ವಾಮಿ, ಬಿಎಲ್ಡಿ ಬ್ಯಾಂಕ್ ಅಧ್ಯಕ್ಷ ಚೊಕ್ಕಬಸವನಗೌಡ, ಮುಖಂಡರಾದ ಎಚ್.ಕೆ. ಮಲ್ಲಿಕಾರ್ಜುನಯ್ಯ ಸ್ವಾಮಿ, ಚನ್ನಬಸವನಗೌಡ, ಎನ್.ಜಿ. ಬಸವರಾಜಪ್ಪ, ಶಿವಶಂಕರಗೌಡ, ಯು. ಅಮರೇಶಪ್ಪ, ಆರ್. ಬಸವಲಿಂಗಪ್ಪ, ದೊಡ್ಡ ವೀರೇಶಗೌಡ, ಟಿ.ಎಂ. ಶಿವಕುಮಾರ, ಬಿ.ಎಂ. ಯರಿಸ್ವಾಮಿ, ಬಿ.ಎಂ.ಜಡಿಸ್ವಾಮಿ, ಎನ್.ವೀರನಗೌಡ, ಎಂ. ವೀರನಗೌಡ, ಎ. ಶಿವರುದ್ರಗೌಡ, ನಾ.ಮ. ಜಗದೀಶ, ಶಂಭುಲಿಂಗಯ್ಯ ಗಾಣದಾಳ್, ಮಂಜುನಾಥಗೌಡ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ