ಅಕ್ಷರದಲ್ಲಡಗಿದೆ ಸೋಲು-ಗೆಲುವಿನ ಭವಿಷ್ಯ!
ಗ್ರಾಪಂ ಅಭ್ಯರ್ಥಿಗಳ ಹೆಸರಿನ ಮೊದಲ ಅಕ್ಷರ ಆಧರಿಸಿ ಭವಿಷ್ಯ ನುಡಿದ ನಾಗೇನಹಳ್ಳಿಯ ನಂಜುಡೇಶ್ವರ ತಾತ
Team Udayavani, Dec 19, 2020, 6:28 PM IST
ಬಳ್ಳಾರಿ: ತಾಲೂಕಿನ ಡಿ. ನಾಗೇನಹಳ್ಳಿಯ ಶ್ರೀಗುರು ಮರುಳಸಿದ್ಧಾಶ್ರಮದ ನಂಜುಂಡೇಶ್ವರ ತಾತನವರು ಡಿ. 22ರಂದುನಡೆಯಲಿರುವ ಮೊದಲ ಹಂತದ ಗ್ರಾಪಂ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಹೆಸರಿನ ಮೊದಲ ಅಕ್ಷರವನ್ನು ಆಧರಿಸಿಅವರ ಸೋಲು-ಗೆಲುವುಗಳ ಭವಿಷ್ಯನುಡಿದಿದ್ದು ಸೋಲುವ ಅಭ್ಯರ್ಥಿಗಳು ಗೆಲ್ಲಲು ಪರಿಹಾರವನ್ನು ಸಹ ಸೂಚಿಸಿದ್ದಾರೆ.
ಈ ಹಿಂದೆ 2018ರಲ್ಲಿ ನಡೆದ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲೂ ತಾತನವರು ನುಡಿದಿದ್ದ ಭವಿಷ್ಯ ನಿಜವಾಗಿತ್ತು. ಜತೆಗೆ ನೆರೆಯ ಆಂಧ್ರಪ್ರದೇಶದಲ್ಲಿ 2019ರಲ್ಲಿನಡೆದ ವಿಧಾನಸಭೆ ಚುನಾವಣೆಯಲ್ಲೂತೆಲುಗುದೇಶಂ ಪಕ್ಷ ಅಧಿ ಕಾರಕ್ಕೆ ಬರಲ್ಲ ಎಂದು ನುಡಿದಿದ್ದ ಭವಿಷ್ಯ ನಿಜವಾಗಿದ್ದು; ಇದೀಗ ಗ್ರಾಪಂ ಚುನಾವಣೆಯಲ್ಲೂ ತಾತನವರ ಭವಿಷ್ಯ ನಿಜವಾಗಲಿದೆ ಎಂದು ಭಕ್ತರು ವಿಶ್ವಾಸ ವ್ಯಕ್ತಪಡಿಸುತ್ತಾರೆ. ತಾತನವರು ನುಡಿದಿರುವ ಭವಿಷ್ಯದಂತೆ
ಬು, ಗ, ಯೆ, ತಿ, ಪೆ, ಮ, ಕೆ, ವೆ, ಚು,ಯೊ, ತು, ಗಿ, ಧ, ಪೊ, ಕೊ, ಮಿ, ಚೆ, ವೊ,ಕಿ, ಹಿ, ಮು, ರಾ, ತೆ, ಭ, ಗು, ಪಾ, ಕ, ಹ, ಮೆ, ರಿ, ತೊ, ಭಿ, ಗೆ, ಡ, ಚೂ, ಲ ಹೆಸರಿನ ಮೊದಲ ಈ ಅಕ್ಷರವುಳ್ಳ ಅಭ್ಯರ್ಥಿಗಳಿಗೆ ಶೇ. 100ರಷ್ಟು ಗೆಲುವು ಸಾಧಿಸಲಿದ್ದಾರೆ ಎಂದು ತಾತನವರು ಖಚಿತಪಡಿಸಿದ್ದಾರೆ.
ಅದೇ ರೀತಿ ಡೊ, ದೊ, ಯಿ, ಚಿ, ಡಿ, ಯು, ದೆ, ಚಿ, ಯ, ಡ, ನೊ, ಡು ಅಕ್ಷರಗಳ ಹೆಸರಿನ ಅಭ್ಯರ್ಥಿಗಳಿಗೆ ಶೇ. 80ರಷ್ಟು ಗೆಲುವು, ಢ, ಭ, ಚೆ, ಅ, ಧ, ಟೊ, ಈ, ಧ, ಪಿ, ಉ, ಪ, ಎ, ಫ ಅಕ್ಷರಗಳ ಹೆಸರಿನ ಅಭ್ಯರ್ಥಿಗಳಿಗೆ ಶೇ. 70 ರಷ್ಟು ಗೆಲುವು ಸಾಧ್ಯವಿದೆ.
ಇನ್ನುಳಿದ ಛ, ಥ, ಸಿ, ರೊ, ಶು, ಸ, ನ, ರೆ, ಬೆ, ಜಿ, ಲು, ಷ, ಶೊ, ಝ ಸೇರಿ ಇನ್ನಿತರೆ ಅಕ್ಷರಗಳ ಹೆಸರಿನ ಅಭ್ಯರ್ಥಿಗಳಿಗೆ ಶೇ. 50ರಷ್ಟು ಗೆಲ್ಲುವ ಸಾಧ್ಯತೆಯಿದೆ. ಶೇ 50, 70, 80ರಷ್ಟು ಗೆಲ್ಲುವ ಸಾಧ್ಯತೆಯುಳ್ಳಅಭ್ಯರ್ಥಿಗಳು ರಾಶಿಬಲ ಹೆಚ್ಚಿರುವಮತದಾರರನ್ನು ಕರೆದೊಯ್ದು ಮೊದಲು ಮತದಾನ ಮಾಡಿಸಿದರೆ ಅಂತಹವರಿಗೆಅವರ ಬಲದಿಂದ ಗೆಲ್ಲುವ ಸಾಧ್ಯತೆಗಳು ದಟ್ಟವಾಗಿವೆ. ಕೆಲವೆಡೆ ಒಂದೇ ಅಕ್ಷರದ ಹೆಸರಿನ ಅಭ್ಯರ್ಥಿಗಳು ಪರಸ್ಪರ ಪ್ರತಿಸ್ಪರ್ಧಿಗಳಾದಲ್ಲಿ ಅಂತಹ ಕಡೆ ತೀವ್ರ ಪೈಪೋಟಿ ಎದುರಾಗಲಿದ್ದು, ಇಬ್ಬರು ಉತ್ತಮವಾಗಿ ಮತಗಳನ್ನು ಪಡೆದು, ಕೇವಲ 20-25 ಮತಗಳ ಅಂತರದಿಂದಯಾರಾದರೊಬ್ಬರು ಗೆಲುವು ಸಾಧಿಸಲಿದ್ದಾರೆ ಎಂದು ತಾತನವರು ಅಭ್ಯರ್ಥಿಗಳಿಗೆ ಪರಿಹಾರ ಮಾರ್ಗಗಳನ್ನು ಸಹ ಸೂಚಿಸಿದ್ದಾರೆ. ಆದರೆ, ಈ ಹಿಂದೆ ನಿಜವಾದಂತೆ ಗ್ರಾಪಂ ಚುನಾವಣೆಯಲ್ಲೂ ತಾತನವರ ಭವಿಷ್ಯ ನಿಜವಾಗಲಿದೆಯಾ ಅಥವಾ ಇಲ್ಲವಾ ಎಂಬುದು ಫಲಿತಾಂಶ ಹೊರಬೀಳುವ ಡಿ. 30ರವರೆಗೆ ಕಾದು ನೋಡಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್