ನಾರಿಹಳ್ಳ ಮಲೀನ: ಆತಂಕದಲ್ಲಿ ಜನ
Team Udayavani, Jul 29, 2020, 3:02 PM IST
ಸಂಡೂರು: ಸಂಡೂರಿನ ಜಲಮೂಲವಾದ ನಾರಿಹಳ್ಳಕ್ಕೆ ನಿತ್ಯ ಮಾಲೀನ್ಯವಾಗುತ್ತಿದ್ದು ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಯಾವುದೇ ರೀತಿಯ ರಕ್ಷಣೆ ಇಲ್ಲದ ಪರಿಣಾಮ ಕುಡಿಯುವ ನೀರು ಮಲೀನವಾಗುತ್ತಿದೆ.
ಯಶವಂತನಗರದಿಂದ ತಾರಾನಗರದ ತಟದಲ್ಲಿ ನಿತ್ಯ ನೂರಾರು ಅದಿರು ಲಾರಿಗಳು, ಗ್ರಾನೈಟ್ ಲಾರಿಗಳು ನಾರಿಹಳ್ಳದಲ್ಲಿಯೇ ಸ್ವಚ್ಛತೆ ಕಾರ್ಯ ಮಾಡುತ್ತಿದ್ದು ಯಾರು ಹೇಳಿದರೂ ಸಹ ಅದನ್ನು ಬಿಡುತ್ತಿಲ್ಲ. ಶಾಸಕ ಈ. ತುಕಾರಾಂ ಅವರು ಸಂಡೂರಿನಿಂದ ಯಶವಂತನಗರಕ್ಕೆಹೋಗುವ ಸಂದರ್ಭದಲ್ಲಿ ನಾರಿಹಳ್ಳದಲ್ಲಿ ಅದಿರು ಲಾರಿಗಳ ಸ್ವಚ್ಛತೆ ಕಾರ್ಯ ಕೈಗೊಂಡಾಗ ಖುದ್ದು ಶಾಸಕರೇ ತಮ್ಮ ವಾಹನವನ್ನು ಬಿಟ್ಟು ಅದಿರು ಲಾರಿ ಚಾಲಕರಿಗೆ ಕೈಮುಗಿದು ಸ್ವಾಮಿ ಇದು ಕುಡಿಯುವ ನೀರು, ನೀವೇ ಕುಡಿಯುತ್ತೀರಿ. ಇತ್ತೀಚೆಗೆ ನಾರಿಹಳ್ಳದಲ್ಲಿ ಬುರುಗು ಹರಿಯುತ್ತಿದೆ. ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ತಕ್ಷಣ ನಿಮ್ಮ ಲಾರಿಗಳನ್ನು ಹಳ್ಳದಿಂದ ಹೊರತನ್ನಿ ಎಂದು ಮನವಿ ಮಾಡಿದರು.
ಈ ಫೋಟೋವನ್ನು ಲಾರಿ ಚಾಲಕರು-ಕ್ಲಿನರ್ಗಳೇ ತೆಗೆದು ವೈರಲ್ ಮಾಡಿದ್ದಾರೆ. ಇದರಿಂದ ಬಹಳಷ್ಟು ಲಾರಿ ಚಾಲಕರು ಜಾಗೃತರಾಗುವರೇ ಕಾದು ನೋಡಬೇಕಾಗಿದೆ. ಶಾಸಕರು ತಾಲೂಕು ಪಂಚಾಯಿತಿ ಸಭೆ ನಡೆಸಿ ಯಾವುದೇ ಕಾರಣಕ್ಕೂ ನಾರಿಹಳ್ಳದಲ್ಲಿ ಯಾವುದೇ ವಾಹನಗಳನ್ನು ತೊಳೆಯಬಾರದು ಎಂದು ಬೋರ್ಡ್ ಹಾಕಬೇಕು. ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಪುರಸಭೆ, ತಹಶೀಲ್ದಾರ್ ಹಾಗೂ ಎಲ್ಲ ಅಧಿಕಾರಿಗಳಿಗೂ ಸೂಚನೆ ನೀಡಿದರೂ ನಾರಿಹಳ್ಳ ಮಲೀನವಾಗುತ್ತಿರುವುದು ಮಾತ್ರ ನಿಲ್ಲುತ್ತಿಲ್ಲ. ನಿತ್ಯ ನಲ್ಲಿಯಲ್ಲಿ ಬರುವ ನೀರು ಸಹ ಹೊಲಸಾಗುತ್ತಿರುವುದು ಸಾರ್ವಜನಿಕರಲ್ಲಿ ಅತಂಕವನ್ನು ಉಂಟುಮಾಡಿದೆ. ನಾರಿಹಳ್ಳ ಜಲಾಶಯಕ್ಕ ನೀರಿನ ಮೂಲಗಳಾದ ಬಂಡ್ರಿ, ಯಶವಂತನಗರ, ಕಾಳಿಂಗೇರಿ, ಚೋರುನೂರು, ಅಂಕಮನಾಳ್ ಓಬಳಾಪುರ ಕರೆಗಳಿಂದ ನೀರು ಹರಿದು ಬರುತ್ತವೆ. ಆ ಎಲ್ಲ ಭಾಗದ ನೀರಿನಲ್ಲಿಯೂ ಸಹ ಅದಿರು ಲಾರಿಗಳ ಧೂಳಿನ ಜೊತೆಗೆ ಸ್ವಚ್ಛತೆ ನಡೆಯುತ್ತಿವೆ. ಕನಿಷ್ಠವೆಂದರೂ ತಾಲೂಕಿನಾದ್ಯಂತ 5 ಸಾವಿರಕ್ಕೂ ಹೆಚ್ಚು ಲಾರಿಗಳು ಸ್ವಚ್ಛತೆ ಕಾರ್ಯಗಳನ್ನು ಇದರಲ್ಲಿಯೇ ಮಾಡುತ್ತಿದ್ದು ಯಾರೂ ಸಹ ತಡೆಯುವ ಪ್ರಯತ್ನ ಮಾಡುತ್ತಿಲ್ಲ ಎನ್ನುವುದು ಅತಂಕಕ್ಕೆ ಕಾರಣವಾಗಿದೆ.
-ಬಸವರಾಜ ಬಣಕಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್