ಕಂಪ್ಲಿಯಲ್ಲಿ ಸುರೇಶ್ ಬಾಬು ಗೆಲುವು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ: ಹಿರೇಮಠ
Team Udayavani, Dec 30, 2022, 4:57 PM IST
ಕುರುಗೋಡು : ಕಂಪ್ಲಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಟಿ.ಹೆಚ್.ಸುರೇಶ್ ಬಾಬು ಅವರು ಜನ ಪರ ಕಾಳಜಿ ಹೊಂದಿರುವಂತಹ ಹೃದಯವಂತ ನಾಯಕ ಅವರು ಮುಂದಿನ ಚುನಾವಣೆಯಲ್ಲಿ ಅವರ ಗೆಲುವನ್ನು ಯಾರಿಂದಲೂ ತಪ್ಪಿಸಲು ಆಗುವುದಿಲ್ಲ ಎಂದು ವಿರೂಪಾಕ್ಷಯ್ಯ ಹಿರೇಮಠ ತಿಳಿಸಿದರು
ಕುರುಗೋಡಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸುರೇಶ್ ಬಾಬು ಅವರ ಆಪ್ತ ಸಹಾಯಕ ಹಿರೇಮಠ , ಬಹುತೇಕ ರಾಜಕಾರಣಿಗಳು ಒಮ್ಮೆ ಶಾಸಕರಾದರೆ ಸಾಕು ಸಾರ್ವಜನಿಕರಿಂದ ದೂರ ಉಳಿದು ಚುನಾವಣೆ ಬಂದಾಗ ಮಾತ್ರ ಬರುತ್ತಾರೆ. ಆದರೆ ಸುರೇಶ್ ಬಾಬು ಅವರು ಎರಡು ಬಾರಿ ಶಾಸಕರಾದರೂ ಜನರ ಮೇಲೆ ದರ್ಪ ತೋರದೆ ನಿತ್ಯ ಜನರ ಮಧ್ಯ ಇದ್ದು ಅವರ ಸಮಸ್ಯೆಗಳನ್ನು ಬಗೆಹರಿಸುವ ನಾಯಕತ್ವದ ಗುಣ ಹೊಂದಿದ್ದಾರೆ. ಅವರ ಜೊತೆಗೆ ಅವರ ಆಪ್ತ ಸಹಾಯಕರು ಹಾಗೂ ಕಾರ್ಯಕರ್ತರು ಕೂಡ ಜನರಿಗೆ ಸ್ಪಂದಿಸುವ ಕಾರ್ಯಗಳು ಮಾಡುತ್ತಿದ್ದೇವೆ ಎಂದರು.
ಕ್ಷೇತ್ರದ ಬಡವರಲ್ಲಿ ಬಡವರಾಗಿ ಕ್ಷೇತ್ರದ ಜನರಿಗೆ ದಾರಿ ದೀಪವಾಗಿದ್ದಾರೆ. ಇಂಥ ನಾಯಕನನ್ನು ಕಳೆದುಕೊಂಡರೆ ಮುಂದೊಂದು ದಿನ ನಮಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಆದ್ದರಿಂದ ಸುರೇಶ್ ಬಾಬು ಅವರ ಮೇಲೆ ಜನ ಬೆಂಬಲ ಇದೆ ಕ್ಷೇತ್ರದ ಜನಶ್ರಿವಾದ ಈ ಬಾರಿ ಕಂಪ್ಲಿ ಯಲ್ಲಿ ಬಿಜೆಪಿ ಬಾವುಟ ಅರಲಿದೆ ಎಂದರು.
ಕಂಪ್ಲಿ ವಿಧಾನಸಭಾ ಕ್ಷೇತ್ರದಿಂದ ಯಾರೇ ಸ್ಪರ್ಧಿಸಿದರು ಕೂಡ ಟಿ.ಹೆಚ್. ಸುರೇಶ್ ಬಾಬು ಅವರ ಗೆಲುವನ್ನು ತಪ್ಪಿಸುವುದು ಅಸಾಧ್ಯ. ಇವರ ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರದ ಜನರು ಮರೆತಿಲ್ಲ. ಕ್ಷೇತ್ರದ ಮತದಾರರು ಬುದ್ಧಿವಂತರಿದ್ದಾರೆ ಯಾರಿಗೆ ಮತ ನೀಡಬೇಕು ಎಂಬುವುದು ಅವರಿಗೆ ಚನ್ನಾಗಿ ಗೊತ್ತಿದೆ ಎಂದರು.
ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದ ಹಿನ್ನಲೆಯಲ್ಲಿ, ಕ್ಷೇತ್ರದ ಅಲುವು ಗ್ರಾಮಗಳಿಗೆ ನಮ್ಮ ಯುವ ಮಿತ್ರರೊಂದಿಗೆ ಭೇಟಿ ನೀಡಿ. ಟಿ ಹೆಚ್.ಸುರೇಶ್ ಬಾಬು ಅವರ ಅಭಿವೃದ್ಧಿಯ ಕಾರ್ಯಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸುವ ಪ್ರಯತ್ನ ಮಾಡುತಿದ್ದೇವೆ.ಟಿ.ಹೆಚ್. ಸುರೇಶ್ ಬಾಬು ಅವರ ಗೆಲುವಿಗೆ ನಿಷ್ಕಲ್ಮಶ ವಾಗಿ ಸೇವೆ ಮಾಡಲು ನಾವು ಕಂಕಣ ಬದ್ಧರಾಗಿದ್ದೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
MUST WATCH
ಹೊಸ ಸೇರ್ಪಡೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು