ಅನ್ನದಾತನ ಕೈಹಿಡಿದ ಬಾಳೆಗೆ ಬಂಪರ್‌ ಬೆಲೆ


Team Udayavani, Aug 28, 2021, 1:53 PM IST

28-10

„ಆರ್‌.ಬಸವರೆಡ್ಡಿ ಕರೂರು

ಸಿರುಗುಪ್ಪ: ತಾಲೂಕಿನ ಶಾನವಾಸಪುರ ಮತ್ತು ದೇಶನೂರು ಗ್ರಾಮದಲ್ಲಿ ತೋಟಗಾರಿಕೆ ಬೆಳೆಯಾದ ಬಾಳೆ ಬೆಳೆದ ರೈತರಿಗೆ ಉತ್ತಮ ಆದಾಯ ಬಂದಿದೆ. ಶಾನವಾಸಪುರ‌ ಗ್ರಾಮದ ರೈತ ವಿರುಪಾಕ್ಷಿಗೌಡ ತನ್ನ 7 ಎಕರೆಯಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್‌ ಯೋಜನೆಯಡಿ ಹನಿ ನೀರಾವರಿಗೆ 1,90,000, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ರೂ. 61ಸಾವಿರ ಸಹಾಯಧನ ಪಡೆದು ಬಾಳೆ ಬೆಳೆಗೆ ಹನಿನೀರಿನ ಸೌಲಭ್ಯ ಕಲ್ಪಿಸಿಕೊಂಡು ಒಂದು ಎಕರೆಗೆ ರೂ. 3 ಲಕ್ಷದಂತೆ 7 ಎಕರೆಗೆ ಒಟ್ಟು ರೂ. 21 ಲಕ್ಷಗಳ ಆದಾಯ ಪಡೆದಿದ್ದು, ಇವರ ಜಮೀನಿನಲ್ಲಿ ಬೆಳೆದ ಬಾಳೆ ಹಣ್ಣುಗಳು ಸೀಮಾಂಧ್ರದ ಅನಂತಪುರ ಹಣ್ಣು ಮಾರಾಟದ ಏಜೆನ್ಸಿಯ ಮೂಲಕ ನೇಪಾಳ ದೇಶಕ್ಕೆ ರಫ್ತಾಗಿದೆ.

ಈ ರೈತನ ಜಮೀನಿನಲ್ಲಿ ಬೆಳೆದ ಒಂದೊಂದು ಬಾಳೆಗೊನೆಯು 30-40 ಕೆಜಿ ತೂಕವಿದ್ದು, ಒಂದು ಕೆಜಿ ರೂ.11 ರಿಂದ 12ಗೆ ಮಾರಾಟವಾಗಿದ್ದು ಉತ್ತಮ ಲಾಭ ದೊರೆಯಲು ಸಾಧ್ಯವಾಗಿದೆ. ನರೇಗಾ ಯೋಜನೆಯಡಿ ತೋಟಗಾರಿಕೆ ಇಲಾಖೆ ವತಿಯಿಂದ2020-21ನೇ ಸಾಲಿನಲ್ಲಿ ದೇಶನೂರು ಗ್ರಾಮದ ರೈತ ನೂರ್‌ ಅಹಮ್ಮದ್‌ ತನ್ನ 1 ಎಕರೆ ಜಮೀನಿನಲ್ಲಿ ಜಿ-9 ತಳಿಯಅಂಗಾಂಶದಬಾಳೆಬೆಳೆಯನ್ನುಬೆಳೆದಿದ್ದು, ಕೂಲಿವೆಚ್ಚ ಮತ್ತು ಸಾಮಾಗ್ರಿ ವೆಚ್ಚವಾಗಿ ರೂ. 70 ಸಾವಿರ ಸಹಾಯಧನ ಪಡೆದಿದ್ದಾನೆ.

ಬಾಳೆ ಬೆಳೆ ಸಮೃದ್ಧವಾಗಿ ಬೆಳೆದಿದ್ದು, ಈ ರೈತನ ಜಮೀನಿನಲ್ಲಿ ಬೆಳೆದ ಬಾಳೆ ಗೊನೆಗಳು 20 ರಿಂದ 30 ಕೆಜಿ ತೂಕವಿದ್ದು, ಸುಮಾರು 22 ಟನ್‌ ಬಾಳೆ ಗೊನೆಗಳನ್ನು ಕಟಾವು ಮಾಡಿ ಲಾಕ್‌ ಡೌನ್‌ ಸಮಯದಲ್ಲಿ ಒಂದು ಕೆಜಿಗೆ ರೂ. 6ಕ್ಕೆ ಮಾರಾಟ ಮಾಡಿ ಸಿಂಧನೂರಿನ ಹಣ್ಣಿನ ವ್ಯಾಪಾರಿಗಳಗ ಮೂಲಕ ಮಾರಾಟ ಮಾಡಿದ್ದು, ಒಂದು ಎಕರೆಗೆ ಸುಮಾರು ರೂ.2 ಲಕ್ಷ ಲಾಭ ಪಡೆದಿದ್ದು, ಇನ್ನುಳಿದ 5ಟನ್‌ ಬಾಳೆ ಬೆಳೆ ಬೆಳೆಯು ಕಟಾವು ಹಂತದಲ್ಲಿದ್ದು, ಸದ್ಯ ಒಂದು ಕೆಜಿಗೆ ರೂ. 10ರಂತೆ ಮಾರುಕಟ್ಟೆಯಲ್ಲಿ ಬಾಳೆಹಣ್ಣು ಮಾರಾಟವಾಗುತ್ತಿರುವುದರಿಂದ ರೂ. 50 ಸಾವಿರ ಲಾಭ ಬರುವ ನಿರೀಕ್ಷೆಯಿದೆ ಎನ್ನುತ್ತಾರೆ.

ನಮ್ಮ ಜಮೀನಿನಲ್ಲಿ ತೋಟಗಾರಿಕೆ ಇಲಾಖೆಯಿಂದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಮತ್ತು ಹನಿ ನೀರಾವರಿ ಯೋಜನೆಯಡಿ ಸಹಾಯಧನ ಪಡೆದು ಬಾಳೆ ಬೆಳೆಯನ್ನು 7 ಎಕರೆಯಲ್ಲಿ ಬೆಳೆದಿದ್ದು, ಉತ್ತಮ ಇಳುವರಿ, ಹೆಚ್ಚು ಬೆಲೆ ದೊರೆತಿರುವುದರಿಂದ ಒಂದು ಎಕರೆಗೆ ರೂ. 3 ಲಕ್ಷದಂತೆ 7 ಎಕರೆಗೆ ರೂ.21ಲಕ್ಷ ಲಾಭ ಪಡೆದಿದ್ದೇನೆ, ನಮ್ಮ ಜಮೀನಿನ ಹಣ್ಣುಗಳು ನೇಪಾಳ ದೇಶಕ್ಕೆ ರಫ್ತಾಗಿವೆ ಎಂದು ಶಾನವಾಸಪುರ ಗ್ರಾಮದ ಬಾಳೆ ಬೆಳೆದ ರೈತ ವಿರುಪಾಕ್ಷಿಗೌಡ ತಿಳಿಸಿದ್ದಾರೆ. ನಮ್ಮ ಹೊಲದಲ್ಲಿ ಬೆಳೆದ ಬಾಳೆ ಹಣ್ಣು ಉತ್ತಮ ಗುಣಮಟ್ಟದ್ದಾಗಿದ್ದರಿಂದ ವ್ಯಾಪಾರಿಗಳು ನಮ್ಮ ಜಮೀನಿಗೆ ಬಂದು ಹಣ್ಣುಗಳ ತೂಕ ಮತ್ತು ಗಾತ್ರ ನೋಡಿ, ಹಣ್ಣುಗಳನ್ನು ಖರೀದಿ ಮಾಡಿದ್ದು, ರೂ.2 ಲಕ್ಷ ಲಾಭ ಬಂದಿದ್ದು, ಇನ್ನೂ ರೂ.50 ಸಾವಿರ ಲಾಭ ಬರುವ ನಿರೀಕ್ಷೆ ಇಟ್ಟುಕೊಂಡಿದ್ದೇನೆಂದು ದೇಶನೂರು ರೈತ ಅಹಮ್ಮದ್‌ ತಿಳಿಸಿದ್ದಾರೆ.

ತಾಲೂಕಿನಲ್ಲಿ ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳಡಿಸಹಾಯಧ® ‌ಪಡೆದುಬಾಳೆಬೆಳೆದ ರೈತರಿಗೆ ಉತ್ತಮ ಇಳುವರಿ ಬಂದಿದ್ದು. ಉತ್ತಮ ಆದಾಯವನ್ನು ತಂದುಕೊಟ್ಟಿದೆ. ಆದ್ದರಿಂದ ಹೆಚ್ಚಿನ ರೈತರು ತೋಟಗಾರಿಕೆ ಬೆಳೆಗಳನ್ನು ಬೆಳೆದರೆ ಉತ್ತಮ ಆದಾಯ ಗಳಿಸಲು ಅನುಕೂಲವಾಗುತ್ತದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ವಿಶ್ವನಾಥ ತಿಳಿಸಿದ್ದಾರೆ.

ಟಾಪ್ ನ್ಯೂಸ್

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

Neha Hiremath Case; Protest by BJP-JDS-ABVP across the state

Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.