ಪಾಟೀಲ ಸಂಧಾನಕ್ಕೆ ಮುಂದಾದ ಖಂಡ್ರೆ
ಜಿಪಂ ಉಪಾಧ್ಯಕ್ಷ ಸ್ಥಾನದಿಂದ ಇಳಿಸಿ ಉಚ್ಛಾಟನೆ ಮತ್ತೆ ಪಕ್ಷ ಸಂಘಟನೆಗೆ ಮುಂದಾಗುವಂತೆ ಸೂಚನೆ
Team Udayavani, Apr 12, 2019, 1:23 PM IST
ಬೀದರ: ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಸ್ಥಾನ ಕಳೆದುಕೊಂಡ ಹಿನ್ನೆಲೆಯಲ್ಲಿ ಮುನಿಸಿಕೊಂಡಿರುವ ಡಾ|ಪ್ರಕಾಶ ಪಾಟೀಲ ಜೊತೆಗೆ ಗುರುವಾರ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಅವರು ಖಾಸಗಿ ಹೋಟೆಲ್ನಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದರು.
ಕಳೆದ ಫೆಬ್ರವರಿಯಲ್ಲಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರ
ವಿರುದ್ಧ ಕಾಂಗ್ರೆಸ್ ಸದಸ್ಯರೆ ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಪಕ್ಷದ
ಮಾತಿಗೆ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರು ಕ್ಯಾರೆ ಎನ್ನಲಿಲ್ಲ. ಆಗ ಕಾಂಗ್ರೆಸ್ ಪಕ್ಷ
ಅಧ್ಯಕ್ಷೆ ಭಾರತಿಬಾಯಿ ಶೇರಿಕಾರ ಹಾಗೂ ಮರಾಠ ಮುಖಂಡ ಡಾ|
ಪ್ರಕಾಶ ಪಾಟೀಲ ಅವರನ್ನು ಉಪಾಧ್ಯಕ್ಷ ಸ್ಥಾನದಿಂದ ಕೆಳಗಿ ಇಳಿಸುವ
ಜತೆಗೆ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಿ ಆದೇಶ ಹೊರಡಿಸಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಮರಾಠ ಸಮುದಾಯ
ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಉತ್ತರ ನೀಡುವ ನಿಟ್ಟಿನಲ್ಲಿ ಗುಪ್ತವಾಗಿ ಸಭೆ ಕೂಡ ನಡೆಸಿತ್ತು.
ಅಲ್ಲದೆ, ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಮರಾಠ ಮುಖಂಡರೊಂದಿಗೆ
ಸುದ್ದಿಗೋಷ್ಠಿ ನಡೆಸಿ ಮರಾಠ ಸಮುದಾಯ ನಮ್ಮ ಜತೆಗೆ ಇದೆ ಎಂದು
ಬಿಂಬಿಸುವ ಕೆಲಸ ಮಾಡಿದ್ದರು. ಅದೇ ರೀತಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಕೂಡ ಮರಾಠ ಮುಖಂಡರನ್ನು ಮುಂದೆ ಮಾಡಿ ಸುದ್ದಿಗೋಷ್ಠಿ
ನಡೆಸಿ ಮರಾಠರು ಕಾಂಗ್ರೆಸ್ ಜತೆಗೆ ಇಲ್ಲ ಬಿಜೆಪಿ ಜತೆಗೆ ಇದ್ದಾರೆ ಎಂದು ಪ್ರತಿ ಉತ್ತರ ನೀಡಿದ್ದರು.
ಎರಡು ಪಕ್ಷಗಳ ಸುದ್ದಿಗೋಷ್ಠಿಯಲ್ಲಿ ಜಿಪಂ ಉಪಾಧ್ಯಕ್ಷ ಸ್ಥಾನದಿಂದ ಪ್ರಕಾಶ
ಪಾಟೀಲ ಉಚ್ಚಾಟನೆ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಅಲ್ಲದೆ, ಮರಾಠ ಮುಖಂಡರು ಕೂಡ ಪ್ರಕಾಶ ಪಾಟೀಲ ಉಚ್ಚಾಟನೆ
ವಿರುದ್ಧ ಧ್ವನಿ ಎತ್ತಿದ್ದರು. ಪರಿಸ್ಥಿತಿ ಕೈ ಮೀರಿ ಹೋಗುತ್ತಿರುವುದನ್ನು ಅರಿತ
ಖಂಡ್ರೆ, ಪಾಟೀಲ ಜೊತೆ ಚರ್ಚೆ ನಡೆಸಿ ಮುಂಬರುವ ದಿನಗಳಲ್ಲಿ ತಮ್ಮನ್ನು ಸೂಕ್ತ ಸ್ಥಾನಕ್ಕೆ ಪರಿಗಣಿಸಲಾಗುವುದು ಎಂದು ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ.
ಇಷ್ಟಕ್ಕೆಲ್ಲಾ ಕಾರಣವಾದ ಮರಾಠ ಮುಖಂಡ ಡಾ| ಪ್ರಕಾಶ ಪಾಟೀಲ
ಅವರನ್ನು ಬಿಜೆಪಿಯವರು ಸಂಪರ್ಕ ಮಾಡಿದ್ದಾರೆ ಎಂದು ತಿಳಿದು ಖುದ್ದು
ಈಶ್ವರ ಖಂಡ್ರೆ ಮನ ಒಲಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಗುರುವಾರ ನಡೆದ ಮಾತುಕತೆಯಲ್ಲಿ ಪ್ರಕಾಶ ಪಾಟೀಲ ಕೂಡ ಪಕ್ಷದ ನಡೆ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ. ಉಪಾಧ್ಯಕ್ಷ ಸ್ಥಾನದಿಂದ
ಇಳಿಸಿದರೆ ಪರವಾಗಿಲ್ಲ. ಯಾವ ಕಾರಣಕ್ಕೆ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಣೆ
ಮಾಡಿ ಮಾನ ಹಾನಿ ಮಾಡಿದ್ದಿರಿ ಎಂದು ಖಂಡ್ರೆ ಅವರಿಗೆ ಪ್ರಶ್ನಿಸಿದ್ದಾರೆ.
ಈ ಮಧ್ಯೆ ಮಾತನಾಡಿದ ಈಶ್ವರ ಖಂಡ್ರೆ ಅವರು, ಹಳೆಯ ವಿಷಯಗಳನ್ನು
ಮರೆತು ಬಿಡಿ, ಸಂಪರ್ಕದ ಕೊರತೆ ಹಿನ್ನೆಲೆಯಲ್ಲಿ ಕೆಲವೊಂದು ತಪ್ಪುಗಳು
ನಡೆದಿರಬೇಕು. ಇದೀಗ ಚುನಾವಣೆಯಲ್ಲಿ ಮುಂಚೂಣೆಯಲ್ಲಿ ಇದ್ದು, ಕೆಲಸ ಮಾಡಿ ಎಂದು ತಿಳಿಸಿದ್ದಾರೆಂದು ಮರಾಠ ಮುಖಂಡ ಹಾಗೂ ಜಿಪಂ ಮಾಜಿ
ಉಪಾಧ್ಯಕ್ಷ ಪ್ರಕಾಶ ಪಾಟೀಲ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ
ಜಿಲ್ಲಾ ಪಂಚಾಯತ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸಿದ ನಂತರ ಇಂದಿನ ವರೆಗೆ ಯಾರೂ ಸಂಪರ್ಕ ಮಾಡಿದಿಲ್ಲ. ಆದರೆ, ಗುರುವಾರ ಈಶ್ವರ ಖಂಡ್ರೆ ಮಾತುಕತೆ ನಡೆಸಿದ್ದಾರೆ. ಹಳೆಯ ವಿಷಯಗಳನ್ನುಮರೆತು ಮತ್ತೆ ಪಕ್ಷ ಸಂಘಟನೆಗೆ ಮುಂದಾಗುವಂತೆ ಹೇಳಿದ್ದಾರೆ.
ಡಾ| ಪ್ರಕಾಶ ಪಾಟೀಲ,
ಜಿಪಂ ಮಾಜಿ ಉಪಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
D. K. Shivakumar-ಎಚ್ಡಿಕೆ ಜಗಳದಲ್ಲಿ ಬಿಜೆಪಿ ತಲೆಹಾಕಲ್ಲ: ಆರ್.ಅಶೋಕ್
JDS ಜತೆ ಮೈತ್ರಿ, ಅವಲೋಕನ ಸಭೆಯಲ್ಲಿ ನಿರ್ಧಾರ: ಮಹೇಶ ಟೆಂಗಿನಕಾಯಿ
Election Commission ಮೇಲ್ಮನೆ ಚುನಾವಣೆ: ಬಲಗೈ ತೋರು ಬೆರಳಿಗೆ ಶಾಯಿ
Gundlupete ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳ ಸಾವು
ECI; ಮತದಾನದ ಅಂಕಿಅಂಶಗಳ ಆರೋಪ ಮಾಡಿದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಆಯೋಗದ ಕಿಡಿ