ಅನಧಿಕೃತ ಲೇಔಟ್ ಮಾಲೀಕರಿಗೆ ನೋಟಿಸ್‌

ವಿವಿಧ ತಾಲೂಕುಗಳಲ್ಲಿನ ಅಕ್ರಮದ ಮಾಹಿತಿ ನೀಡಲು ತಹಶೀಲ್ದಾರ್‌ಗೆ ಸೂಚನೆ

Team Udayavani, Aug 24, 2019, 10:45 AM IST

24-April-8

ಚಿತ್ರ: ವಸತಿ ವಿನ್ಯಾಸದ ಸಂಗ್ರಹ ಚಿತ್ರ.

ಬೀದರ: ಹುಮನಾಬಾದ ತಾಲೂಕಿನ ಮೂರು ಪುರಸಭೆ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಿರ್ಮಾಣಗೊಂಡ ಅನಧಿಕೃತ ಲೇಔಟ್‌ಗಳ ಮಾಲೀಕರಿಗೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಹಶೀಲ್ದಾರ್‌ ಅವರು ನೋಟಿಸ್‌ ನೀಡುವ ಪ್ರಕ್ರಿಯೆ ಆರಂಭಿಸಿದ್ದಾರೆ.

ಸದ್ಯ ಬೀದರ ತಾಲೂಕಿನ ವಿವಿಧ ಅನಧಿಕೃತ ಲೇಔಟ್‌ಗಳ ವಿರುದ್ಧ ಜಿಲ್ಲಾಡಳಿ ಕಾನೂನು ಕ್ರಮಕ್ಕೆ ಮುಂದಾಗಿದ್ದು, ಜಿಲ್ಲೆಯ ವಿವಿಧ ತಾಲೂಕುಗಳಲ್ಲಿನ ಅನಧಿಕೃತ ಲೇಔಟ್‌ಗಳ ಮಾಹಿತಿ ನೀಡುವಂತೆ ಜಿಲ್ಲಾಡಳಿತ ಆಯಾ ತಾಲೂಕಿನ ತಹಶೀಲ್ದಾರ್‌ಗೆ ಸೂಚಿಸಿದ್ದಾರೆ. ತಹಶೀಲ್ದಾರ್‌ರ ಆದೇಶದ ಮೇರೆಗೆ ವಿವಿಧ ಗ್ರಾಮೀಣ ಭಾಗದ ಕಂದಾಯ ಅಧಿಕಾರಿಗಳು ಭೂ ಮಾಲೀಕರಿಗೆ ನೋಟಿಸ್‌ ನೀಡುವ ಕೆಲಸ ನಿರ್ವಹಿಸುತ್ತಿದ್ದಾರೆ.

ಹುಮನಾಬಾದ, ಚಿಟಗುಪ್ಪ, ದುಬಲಗುಂಡಿ, ಮನ್ನಾಎಖೇಳ್ಳಿ, ಹಳ್ಳಿಖೇಡ (ಬಿ) ಸೇರಿದಂತೆ ವಿವಿಧ ಪ್ರಮುಖ ಕಡೆಗಳಲ್ಲಿ ಹೆಚ್ಚು ಅಕ್ರಮ ಲೇಔಟ್‌ಗಳು ರಚನೆಗೊಂಡು, ನೋಟರಿ ಮೂಲಕ ಸಾರ್ವಜನಿಕರಿಗೆ ಮಾರಾಟ ಮಾಡಿರುವುದು ತಿಳಿದುಬಂದಿದ್ದು, ಅವುಗಳ ಲೇಔಟ್‌ಗಳ ಸಂಖ್ಯೆ, ಅಥವಾ ಲೇಔಟ್‌ಗಳ ಮಾಲೀಕ ಹೆಸರುಗಳು ಕಂದಾಯ ಅಧಿಕಾರಿಗಳ ಪಟ್ಟಿಯಲ್ಲಿ ಸೇರದಿರುವುದು ಅನೇಕ ಅನುಮಾನ ಹುಟ್ಟುವಂತೆ ಮಾಡಿದೆ. ಈ ಕುರಿತು ತಹಶೀಲ್ದಾರ್‌ ನಾಗಯ್ನಾ ಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಹುಮನಾಬಾದ ಪಟ್ಟಣದಲ್ಲಿನ ವಿವಿಧೆಡೆ ನಿರ್ಮಾಣಗೊಂಡ ಅನಧಿಕೃತ ಲೇಔಟ್‌ಗಳ ಕುರಿತು ಖುದ್ದು ಪರಿಶೀಲನೆ ನಡೆಸಲಾಗಿದೆ. ಅವುಗಳ ಆಸ್ತಿ ಸಂಖ್ಯೆಗಳನ್ನು ಅನಧಿಕೃತ ಪಟ್ಟಿಗೆ ಸೇರಿಸಲಾಗುವುದು ಎಂದು ತಿಳಿಸಿದ್ದಾರೆ.

ಭೂ ಮಾಲೀಕರಿಗೂ ನೋಟಿಸ್‌: ಕರ್ನಾಟಕ ಭೂ ಕಂದಾಯ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ ಕೃಷಿ ಭೂಮಿಗಳನ್ನು ಕೃಷಿಯೇತರ ಭೂಮಿಯನ್ನಾಗಿಸಿ ಪರಿವರ್ತಿಸಿಕೊಂಡು ಕಾನೂನು ಉಲ್ಲಂಘನೆ ಮಾಡಿದ ಹಾಗೂ ಕೃಷಿ ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸದ ಭೂ ಮಾಲೀಕರಿಗೂ ತಾಲೂಕು ದಂಡಾಧಿಕಾರಿಗಳು ನೋಟಿಸ್‌ ನೀಡುತ್ತಿದ್ದಾರೆ. ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 192-ಎ ಕಾಯ್ದೆಯನ್ನು ಉಲ್ಲಂಘಿಸಿ ನೂರಾರು ಎಕರೆ ಪ್ರದೇಶದಲ್ಲಿ ಲೇಔಟ್‌ಗಳನ್ನು ನಿರ್ಮಿಸಿ ಮಾರಾಟ ಮಾಡಲಾಗುತ್ತಿರುವ ಹಿನ್ನೆಲೆಯಲ್ಲಿ ನೋಟಿಸ್‌ ನೀಡಲಾಗುತ್ತಿದೆ.

ಯಾವ ಗ್ರಾಮಕ್ಕೆ ಎಷ್ಟು ನೋಟಿಸ್‌: ಹಳ್ಳಿಖೇಡ(ಕೆ) 5 ಜನರಿಗೆ, ಮೊಳಕೇರಾ 3 ಜನರಿಗೆ, ಚಿತ್ತಕೋಟಿ 4 ಜನರಿಗೆ, ಗಡವಂತಿ ಗ್ರಾಮದ 3 ಜನರಿಗೆ, ಬೋರಂಪಳ್ಳಿ 6 ಜನರಿಗೆ, ನಂದಗಾಂವ 19 ಜನರಿಗೆ, ಸಿಂಧನಕೇರಾ ಇಬ್ಬರಿಗೆ, ಹಣಕುಣಿ 12 ಜನರಿಗೆ, ಕಪ್ಪರಗಾಂವ 3 ಜನರಿಗೆ, ದುಮ್ಮನಸೂರ 7 ಜನರಿಗೆ, ಮಾಣಿಕನಗರ ಇಬ್ಬರಿಗೆ, ಕಲ್ಲೂರ 5 ಜನರಿಗೆ, ಹುಡಗಿ 27 ಜನರಿಗೆ, ಹಿಲಾಲಪೂರ 14 ಜನರಿಗೆ, ಮರಖಲ್ 16 ಜನರಿಗೆ, ಶಕ್ಕರಗಂಜ ಗ್ರಾಮದ 10 ಜನರಿಗೆ, ಮದಗಾಂವ 4 ಜನರಿಗೆ, ಅಲ್ಲೂರ 8 ಜನರಿಗೆ, ಮಲ್ಕಾಪೂರ 5 ಜನರಿಗೆ, ಬೇನಚಿಂಚೋಳ್ಳಿ 10 ಜನರಿಗೆ, ಕಬೀರಾಬಾದ 13 ಜನರಿಗೆ, ಹಳ್ಳಿಖೇಡ(ಬಿ) 24 ಜನರಿಗೆ, ನಾಮದಾಪೂರ 3 ಜನರಿಗೆ, ಸಿತಾಳಗೇರಾ 4 ಜನರಿಗೆ, ನಿಂಬೂರ 12 ಜನರಿಗೆ, ಅಮೀರಾಬಾದ 13 ಜನರಿಗೆ, ಸೇಡೋಳ ಗ್ರಾಮದ 6 ಜನರಿಗೆ, ಜಲಸಿಂಗಿ 3 ಜನರಿಗೆ, ವರವಟ್ಟಿ(ಕೆ) 3 ಜನರಿಗೆ, ಚೀನಕೇರಾ 8 ಜನರಿಗೆ, ಘಾಟಬೋರಳ 6 ಜನರಿಗೆ, ಘೋಡವಾಡಿ 3 ಜನರಿಗೆ, ಹಂದಿಕೇರಾ 28 ಜನರಿಗೆ, ಹುಣಸಗೇರಾ 5 ಜನರಿಗೆ, ಹುಣಸನಾಳ 5 ಜನರಿಗೆ, ಕುಮಾರ ಚಿಂಚೋಳಿ 18 ಜನರಿಗೆ, ಕನಕಟ್ಟಾ 26 ಜನರಿಗೆ, ಸುಲ್ತಾನಬಾದ 12 ಜನರು, ಚಂದನಹಳ್ಳಿ 3 ಜನರಿಗೆ, ದುಬಲಗುಂಡಿ 13 ಜನರಿಗೆ, ಮುಗನಾರ್‌ ಗ್ರಾಮದ 21 ಜನರಿಗೆ, ಚಿಟಗುಪ್ಪ ಪಟ್ಟಣದ 39 ಜನರು, ಬೇಳಕೇರಾ 5 ಜನರಿಗೆ, ಶಾಮತಾಬಾದ 3 ಜನರಿಗೆ, ಇಟಗಾ 3 ಜನರಿಗೆ, ತಾಳಮಡಗಿ ಇಬ್ಬರು, ಕಂದಗೂಳ ಇಬ್ಬರು, ಹಿಪ್ಪರ್ಗಾ ಮೂರು ಜನ, ಕೊಡಂಬಲ 26 ಜನರು, ಮಾಡಗೂಳ ಇಬ್ಬರು, ರಾಮಪೂರ 9 ಜನರು, ವಳಖೀಂಡಿ 3 ಜನ, ಬೇಮಳ ಖೇಡಾ 75ಕ್ಕೂ ಅಧಿಕ, ಬೋರಾಳ 3 ಜನ, ಕರಕನಳ್ಳಿ 11 ಜನ, ಚಾಂಗಲೇರಾ 35 ಜನ, ಉಡಮನಳ್ಳಿ 5 ಜನ, ಮೀನಕೇರಾ 65 ಜನ ಹಾಗೂ ಮನ್ನಾಎಖೇಳ್ಳಿ ಗ್ರಾಮದಲ್ಲಿ ಸುಮಾರು 700ಕ್ಕೂ ಅಧಿಕ ಜನರಿಗೆ ನೋಟಿಸ್‌ ನೀಡಲು ಕಂದಾಯ ಅಧಿಕಾರಿಗಳು ಪಟ್ಟಿ ಸಿದ್ಧಪಟಿಸಿದ್ದಾರೆ.

ಜಿಲ್ಲಾಧಿಕಾರಿಗಳ ಆದೇಶದಂತೆ ತಾಲೂಕಿನ ವಿವಿಧೆಡೆ ನಿರ್ಮಾಣಗೊಂಡಿರುವ ಅನಧಿಕೃತ ಲೇಔಟ್‌ಗಳ ಕುರಿತು ಪಟ್ಟಿ ತಯಾರಿಸಲಾಗಿದ್ದು, ಅವುಗಳನ್ನು ಪರಿಶೀಲಿಸಿ ನೋಟಿಸ್‌ ನೀಡಲಾಗುತ್ತಿದೆ. ಸೂಕ್ತ ದಾಖಲೆಗಳನ್ನು ನೀಡಿದ ಭೂ ಮಾಲೀಕರ ಭೂಮಿಯನ್ನು ಕರ್ನಾಟಕ ಸರ್ಕಾರದ ಹೆಸರಲ್ಲಿ ಸೇರಿಸಲು ಆದೇಶ ಇದೆ. ಇನ್ನು ಪಟ್ಟಣದ ಕೆಲವು ಸರ್ವೇ ಸಂಖ್ಯೆಗಳಲ್ಲಿ ಅನಧಿಕೃತ ಲೇಔಟ್‌ಗಳು ನಿರ್ಮಾಣಗೊಂಡಿರುವ ಬಗ್ಗೆ ಮಾಹಿತಿ ಇದ್ದು, ಅವುಗಳನ್ನು ಕೂಡ ಪರಿಶೀಲನೆ ಮಾಡಲಾಗುತ್ತಿದೆ.
ನಾಗಯ್ಯ ಸ್ವಾಮಿ,
 ತಹಶೀಲ್ದಾರ್‌ ಹುಮನಾಬಾದ

ಸೂಕ್ತ ದಾಖಲೆಗಳು ಇರುವ ಲೇಔಟ್‌ಗಳಿಗೆ ಮಾತ್ರ ಆನ್‌ಲೈನ್‌ ಖಾತಾ ನಕಲು ನೀಡಲಾಗುತ್ತಿದೆ. ಇತರೆ ನಿವೇಶನಗಳಿಗೆ ವಿದ್ಯುತ್‌ ಹಾಗೂ ನೀರು ಪೂರೈಕೆಗಾಗಿ ಎನ್‌ಒಸಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ಈ ಪ್ರಮಾಣ ಪತ್ರ ಕೇವಲ ತೆರಿಗೆ ಸಂಗ್ರಹಕ್ಕೆ ಮಾತ್ರವಾಗಿದ್ದು, ಎನ್‌ಒಸಿ ಪಡೆದವರು ಭೂಮಿ ಮಾಲೀಕರಾಗುವುದಿಲ್ಲ.
ಸಂತೋಷ ಹಳ್ಳಿಖೇಡ್‌,
 ಮನ್ನಾಎಖೇಳ್ಳಿ ಗ್ರಾಪಂ ಅಧ್ಯಕ್ಷ

ಟಾಪ್ ನ್ಯೂಸ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.